Friday, January 10, 2025

ಭಕ್ತಿಗೀತೆ ವೈಕುಂಠ ಏಕಾದಶಿಯ ಅಂಗವಾಗಿ



Google image source

ಯಾವ ಚಿಂತೆಯು ನಿನಗೆ ಶೇಷಶಯನನೇ


ಯಾವ ಚಿಂತೆಯು ನಿನಗೆ ಶೇಷಶಯನನೇ

ಮಂದಸ್ಮಿತದಲ್ಲಿಯೇ ಲೋಕ ನಡೆಸುವೆ ದೇವ //ಯಾವ//


ನಾರಾಯಣ ನಿನ್ನ ನಾಮದಲ್ಲಿಹ ಮಹಿಮೆ

ಪೇಳಿದರೆ ಸಾಲದು ಪಾಡಿ ಪೊಗಳುವೆ ದೇವ

ಸಿಂಧುಸುತೆ ಪತಿ ಎನ್ನ ಮುಂದೆಯೂ ಕಾಯುತಿರು

ಮಂದವಾಗಿಹ ಮತಿಯ ಚಂದದಿ ಹೊಳವಂತೆ ಮಾಡು


ಕಷ್ಟಗಳ ಕೊಡಬೇಡ ಎನಲಾರೆ ನಾ

ನಷ್ಟಗಳ ಸಹಿಸಿ ಹೆಜ್ಜೆಯಿಡುತಿರುವೆನು

ಕಿಚ್ಚನು ಕೊಡು ದೇವ ಹೊಟ್ಟೆಕಿಚ್ಚಿನ ಜನರೆದುರು

ಮೊಟ್ಟೆಯೊಡೆದ ಮರಿಯಂತೆ ಜಗವ ಕಾಣುತಿರುವೆ..


ಕೆಟ್ಟದು ನಡೆದಿದೆ ತಪ್ಪನು ಕ್ಷಮಿಸು

ಕೊಟ್ಟ ಮಾತನು ಉಳಿಸಿಕೊಳ್ಳದೆ ಮರುಗಿದೆನು

ತಪ್ಪನು ತಿದ್ದಿ ನಡೆಯಲವಕಾಶ ನೀಡು

ಒಪ್ಪತ್ತು ಉಪವಾಸ ಮಾಡಿ ಜಪಿಸುವೆ ದೇವ..


ಸಿಂಧು ಭಾರ್ಗವ, ಬೆಂಗಳೂರು

No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...