Friday, January 10, 2025

ಪರೀಕ್ಷೆ ಭಯ ಬೇಡ ಕಿರುಲೇಖನ

ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು

ಕಾರಂತಜ್ಜನ ನೆರಳಿನಡಿಯಲ್ಲಿ..

(ಕಲೆ ಹಾಗೂ ಸಾಹಿತ್ಯ ವೇದಿಕೆ)


Google image source


ಶೀರ್ಷಿಕೆ : ಆತ್ಮವಿಶ್ವಾಸ ಬೆಳೆಸಿರಿ


ಪರೀಕ್ಷೆಯ ಭಯ ಎಂದರೆ ಪರೀಕ್ಷೆಯ ಆತಂಕ ಅಥವ  ಪರೀಕ್ಷಾ ಆತಂಕ ಎಂದು ಹೇಳಬಹುದು. ಇದು ಪರೀಕ್ಷೆಗಳು ಸಮೀಪಿಸಿದಾಗ ವಿದ್ಯಾರ್ಥಿಗಳನ್ನು  ಮತ್ತು ಮಕ್ಕಳ ಪೋಷಕರನ್ನು   ಕಾಡುವ  ದೊಡ್ಡ ಸಮಸ್ಯೆಯಾಗಿದೆ.  ಈ  ಸಮಸ್ಯೆಯನ್ನು  ಸಾಧಾರಣ  ಶೇಖಡಾ ಎಪ್ಪತ್ತರಷ್ಟು  ವಿದ್ಯಾರ್ಥಿಗಳು ಹೊಂದಿದ್ದಾರೆ ಎಂಬುದು ಅಕ್ಷರಶ ಸತ್ಯವಾಗಿದೆ.


ಪರೀಕ್ಷೆಯ ಭಯಕ್ಕೆ ಕಾರಣ 

ಕ್ರಮಬದ್ಧವಾದ ಕಲಿಯುವಿಕೆ ಇಲ್ಲದಿರುವುದು,ಶಿಕ್ಷಕರು ಪಾಠವನ್ನು ಕಲಿಸುವಾಗ ಗಮನ ಕೊಡದೇ ಬೇರೆ ವಿಚಾರದಲ್ಲಿ ಮಗ್ನರಾಗುವುದು,ಅಂದಿನ ಪಾಠವನ್ನು  ಅಂದೇ ಕಲಿಯುವ ಪರಿಪಾಠ  ಇಲ್ಲದಿರುವುದು, ಪರೀಕ್ಷೆ ಬಂದಾಗ ನೋಡೋಣ ಎಂಬ ಹುಂಬತನ,ಪಾಠವನ್ನು ಓದುವ, ಅದರ ಮುಖ್ಯಾಂಶಗಳನ್ನು ಬರೆಯುವ ಮತ್ತು ಅರ್ಥೈಸಿಕೊಳ್ಳುವ ಅಭ್ಯಾಸ  ಇಲ್ಲದಿರುವುದು.ಏಕಾಗ್ರತೆಯ ಕೊರತೆ,ಓದುವ ಬದಲು ಇತರ ಚಟುವಟಿಕೆಯಲ್ಲಿ  ಲೀನವಾಗುವುದು, ಮೊಬೈಲ್ ಬಳಕೆ, ದೂರದರ್ಶನದ  ವೀಕ್ಷಣೆ, ವೀಡಿಯೋ ಆಟಗಳನ್ನು ಆಡುವ ಮೋಜು, ಆಟೋಟಗಳು, ಕ್ರಿಕೇಟು  ಎಂದು ಸಮಯವನ್ನು  ಕಳೆಯುವುದು, ಹೀಗೆ ವಿದ್ಯಾರ್ಥಿಗಳು ಓದುವುದನ್ನು ನಿರ್ಲಕ್ಷಿಸುತ್ತಾರೆ. ಪರೀಕ್ಷೆಗಳು ಸಮೀಪಿಸಿದಾಗ  ಆತಂಕ, ಕಳವಳ ಎದುರಾಗಿ  ನಿದ್ರೆ ವಿಶ್ರಾಂತಿಯನ್ನು  ಮರೆತು ಒಂದೇ ಸಮನೆ  ಓದಲು ಪ್ರಾರಂಭಿಸುತ್ತಾರೆ. ಇದರಿಂದ  ದೈಹಿಕ,  ಮಾನಸಿಕ ಒತ್ತಡ,  ಯಾವ ವಿಷಯಗಳನ್ನು  ಕಲಿಯಬೇಕು ಎಂಬ  ಗೊಂದಲದಲ್ಲಿ ಒದಿದ ಪಾಠಗಳು ನೆನಪಿನಲ್ಲಿ ಉಳಿಯುವುದಿಲ್ಲ. ಅದಕ್ಕೆ ಸರಿಯಾಗಿ ಪೋಷಕರು  ಸಹ ಹೆಚ್ಚಿನ ಅಂಕ ಗಳಿಸಬೇಕೆಂದು ಒತ್ತಡ  ಹೇರುತ್ತಾರೆ. ಬುದ್ದಿವಂತ  ಮಕ್ಕಳಿಗೆ  ಹೋಲಿಸಿ  ಮಕ್ಕಳಿಗೆ  ಇನ್ನಷ್ಟು ಮಾನಸಿಕವಾಗಿ  ಬಳಲುವಂತೆ  ಮಾಡುತ್ತಾರೆ. ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ  ಆತಂಕ ಉಂಟಾಗಿ ಪರೀಕ್ಷೆಯ ಕೊಠಡಿಯಲ್ಲಿ ಎದೆಬಡಿತ ಹೆಚ್ಚಳ,  ಪ್ರಶ್ನೆ ಪತ್ರಿಕೆ ಕಂಡೊಡನೆ ಬೆವರುವಿಕೆ, ತಲೆ ತಿರುಗುವಿಕೆ,  ಕಲಿತ ವಿಷಯಗಳು ಮರೆತು ಹೋಗಿ ನೆನಪು  ಬಾರದೇ ಕಳವಳ,  ಏಕಾಗ್ರತೆಯ ಕೊರತೆಯಿಂದ  ಮಕ್ಕಳು ಪರೀಕ್ಷೆಯನ್ನು  ಅದೈರ್ಯದಿಂದ  ಎದುರಿಸುತ್ತಾರೆ. 


ಪರಿಹಾರಗಳು

ತರಗತಿಯ ಪ್ರಾರಂಭದಿಂದಲೇ ನಿರಂತರವಾದ ಕಲಿಯುವಿಕೆ,ಶಿ ಕ್ಷಕರು ಪಾಠ ಮಾಡುವ ಸಮಯದಲ್ಲಿ ಏಕಾಗ್ರತೆ,ವಿಷಯಗಳನ್ನು ಬಾಯಿಪಾಠ ಮಾಡದೇ ವಿಷಯಗಳನ್ನು ಅರ್ಥೈಸಿಕೊಂಡು  ಮನದಟ್ಟು ಮಾಡಿಕೊಳ್ಳುವ ಕ್ರಮಬದ್ಧವಾದ  ಕಲಿಯುವಿಕೆ,ದಿನವೂ ಪಾಠಗಳನ್ನು ಓದುವ ಬರೆಯುವ ಹವ್ಯಾಸ,ಕಟ್ಟುನಿಟ್ಟಿನ ವೇಳಾಪಟ್ಟಿಯ ಪ್ರಕಾರ  ಓದುವಿಕೆ, ನಿಗದಿತ ಸಮಯದಲ್ಲಿ ಊಟ, ನಿದ್ರೆ,  ಮತ್ತು ಮೊಬೈಲ್, ದೂರದರ್ಶನದ ವೀಕ್ಷಣೆ ಕಡಿತಮಾಡುವುದು,ಅಕ್ಷರಗಳನ್ನು ಆದಷ್ಟು ಸ್ಪುಟವಾಗಿ ಬರೆಯುವುದು,ಪ್ರಾಣಾಯಾಮದಿಂದ  ಏಕಾಗ್ರತೆಯನ್ನು  ಹೆಚ್ಚಿಸುವುದು, ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಮಕ್ಕಳಿಗೆ  ಓದಲು  ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಿಸುವುದು,ಪರೀಕ್ಷೆಗೆ ತೆರಳುವಾಗ ದೇವರ, ಹಿರಿಯರ  ಆಶೀರ್ವಾದವನ್ನು  ಪಡೆದು ಆತ್ಮ ವಿಶ್ವಾಸದಿಂದ  ಶಾಂತಚಿತ್ತರಾಗಿ  ಪರೀಕ್ಷೆಗಳನ್ನು ಎದುರಿಸುವುದರಿಂದ  ಪರೀಕ್ಷಾ ಆತಂಕವನ್ನು  ತಡೆಗಟ್ಟಬಹುದು. 


ಬರೆದವರು 

ಸುರೇಖ. ಶೇಟ್, ಬೆಂಗಳೂರು

No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...