Friday, January 17, 2025

ನಾರು ಬೇರು ನೀರು ಆರೋಗ್ಯ ಮಾಹಿತಿ

 



ನಮ್ಮ ಆರೋಗ್ಯ ನಮಗೆ ಮುಖ್ಯವಾದುದು. ಜನನದಿಂದ ಮರಣದವರೆಗೆ ನಾವು ಎದುರಿಸುವ ಅನೇಕ‌‌ ಆರೋಗ್ಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ. ಮಕ್ಕಳು ಮಹಿಳೆಯರೆನ್ನದೇ ಪುರುಷರು ವೃದ್ಧರೆನ್ನದೇ ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣ ನಮ್ಮ ಆಹಾರ ಪದ್ದತಿ. ನಾವು ಬದುಕುವ ರೀತಿ.

ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದಂತಹ ಆಹಾರ ಪದ್ದತಿಯನ್ನು ನಾವೀಗ ದೂರ ತಳ್ಳುತ್ತಿದ್ದೇವೆ. ಅನೇಕ ಪ್ರಶ್ನೆಗಳ ಎತ್ತಿ ಅನುಮಾನ ವ್ಯಕ್ತ ಪಡಿಸುತ್ತಿದ್ದೇವೆ. ಪಾಶ್ಚಿಮಾತ್ಯ ಸಂಸ್ಕೃತಿ ಆಹಾರ ಪದ್ದತಿಯನ್ನು ಅನುಸರಿಸಲು ಹೋಗಿ ಅದಕ್ಕೆ ಮಾರುಹೋಗುತ್ತಿದ್ದೇವೆ. ಇದರಿಂದಲೇ ಕ್ಯಾನ್ಸರ್ ನಂತರ ಮಹಾಮಾರಿ ಎಲ್ಲರ ಮನೆ ಹೊಕ್ಕುತ್ತಿದೆ. ಎಂತಹ ದುಸ್ಥಿತಿಗೆ ನಾವು ತಲುಪುತ್ತಿದ್ದೇವೆ. ಹಿರಿಯರು ಮಾಡಿದ ನಾರು ಬೇರು ನೀರಿನ ಮಹತ್ವ ಅರಿತು ಬಳಸಬೇಕಾಗಿದೆ.

ನಾವು ಸೇವಿಸುವಾಹಾರದಲ್ಲಿ ನೀರಿನಂಶ ಅಧಿಕವಾಗಿರಬೇಕು. ಈ ಭೂಮಿಯಲ್ಲಿ ಮುಕ್ಕಾಲು ಭಾಗ ನೀರು ಕಾಲು ಭಾಗ ನೆಲವಿರುವುದು. ಅದರಂತೆ ನಮ್ಮ ದೇಹದಲ್ಲಿಯೂ ನೀರಿನ ಅಂಶ ಅಧಿಕವಾಗಿರುವಂತೆ ನೋಡಿಕೊಳ್ಳಬೇಕು. ರಾಸಾಯನಿಕವಲ್ಲದ ತಾಜಾ ಹಣ್ಣಿನ ಜ್ಯೂಸ್ ಕುಡಿಯುವುದು. ಬಿಸಿನೀರು ಅಥವಾ ತಣ್ಣೀರು ಕುಡಿಯುವುದು. ದ್ರವೀಯ ಅಂಶವಿರುವ ಸೊಪ್ಪು ತರಕಾರಿಗಳ ಸೇವನೆ ಅತಿ ಮುಖ್ಯ.
ಇಲ್ಲಿ ಹೆಚ್ಚು ನೀರಿನ ಅಂಶ ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳ ಪಟ್ಟಿಯಾಗಿದೆ:
---

ಹೆಚ್ಚು ನೀರಿನ ಅಂಶವಿರುವ ಹಣ್ಣುಗಳು:

1. ಕಲ್ಲಂಗಡಿ (92%)
2. ಸ್ಟ್ರಾಬೆರಿ (91%)
3. ಮಸ್ಕಮೆಲನ್ (ಕಂತಾಲೂಪ್) (90%)
4. ಪೀಚ್‌ಗಳು (89%)
5. ಕಿತ್ತಳೆ (88%)
6. ಅನಾನಸ್ (86%)
7. ಚಕೋಟೆ (ಗ್ರೇಪ್‌ಫ್ರೂಟ್) (88%)
8. ಸೇಬು (85%)
9. ಬ್ಲೂಬೆರಿ (84%)
10. ಅಲೂಬುಖಾರ (ಪ್ಲಮ್) (85%)
---
ಹೆಚ್ಚು ನೀರಿನ ಅಂಶವಿರುವ ತರಕಾರಿಗಳು:

1. ಸೌತೆಕಾಯಿ (96%)
2. ಸಲಾಡ್ ಎಲೆ (ಲೆಟ್ಯೂಸ್) (95%)
3. ಜೀಕಾಯಿ (ಜುಕಿನಿ) (94%)
4. ಮೂಲಂಗಿ (95%)
5. ಸೋಂಪಿನ ತಂದು (ಸೆಲರಿ) (95%)
6. ಟೊಮಾಟೋ (94%)
7. ಕಾಪ್ಸಿಕಂ (ಬೆಳ್ಳಣ ಮೆಣಸಿನಕಾಯಿ) (92%)
8. ಸೊಪ್ಪು (ಸ್ಪಿನಾಚ್) (91%)
9. ಹೂಕೋಸು (ಬ್ರೊಕೊಲಿ) (90%)
10. ಕೆರೆಯ ಗಜ್ಜರಿ (ಕ್ಯಾರಟ್) (88%)

ಇನ್ನು ನಾರಿನಾಂಶವಿರುವ ತರಕಾರಿಗಳು ಒಣಹಣ್ಣುಗಳ ಸೇವನೆ.
ನಾರಿನಾಂಶ ಹೆಚ್ಚುವರಿ ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳ ಪಟ್ಟಿಯನ್ನು ಕನ್ನಡದಲ್ಲಿ ನೀಡಲಾಗಿದೆ:

ನಾರಿನಾಂಶ ಹೆಚ್ಚಿರುವ ಹಣ್ಣುಗಳು:

1. ಸೇಬು
2. ಕಿತ್ತಳೆ
3. ಸೀತಾಫಲ
4. ಪೆರಲೆ (ಪಪಾಯ)
5. ಅನಾನಸ್
6. ಬಾಳೆಹಣ್ಣು
7. ಅಲೂಬುಖಾರ (ಪ್ಲಮ್)
8. ಸ್ಟ್ರಾಬೆರಿ
9. ಬ್ಲೂಬೆರಿ
10. ಕಲ್ಲಂಗಡಿ
---

ನಾರಿನಾಂಶ ಹೆಚ್ಚಿರುವ ತರಕಾರಿಗಳು:
1. ಸೊಪ್ಪು (ಸ್ಪಿನಾಚ್)
2. ಹಸಿರು ಬಟಾಣಿ
3. ಕೋಸು (ಕ್ಯಾಬೇಜ್)
4. ಬೀನ್ಸ್
5. ಮೂಲಂಗಿ
6. ಕ್ಯಾರಟ್
7. ಬೆಳ್ಳುಳ್ಳಿ
8. ಕೋಸುಕಡಲೆ (ಚಿಕ್‌ಪೀಸ್)
9. ಅವರೆಕಾಯಿ
10. ಹೀರೆಕಾಯಿ (ರೆಡಿಷ್)

ನಾರಿನಾಂಶವು ಪಚನಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಜೀರ್ಣತಂತ್ರಕ್ಕಾಗಿ ಅತ್ಯಗತ್ಯವಾಗಿದೆ.
-----

ಮಣ್ಣಿನಡಿಯಲ್ಲಿ ಬೆಳೆಯುವ ಬೇರು ಅಂದರೆ ಕ್ಯಾರೇಟು ಬೀಟ್ ರೂಟು ಸಿಹಿಗೆಣಸು ಆಲೂಗಡ್ಡೆ ಕ್ಯಾಬೇಜ್ ಸೇವನೆ ಅತೀಮುಖ್ಯ.

ಬೇರು ತರಕಾರಿಗಳು (Root Vegetables):

1. ಮೂಲಂಗಿ (Radish)
2. ಆಲೂಗಡ್ಡೆ (Potato)
3. ಗೆಣಸು ಗಡ್ಡೆ (Sweet Potato)
4. ಕ್ಯಾರಟ್ (Carrot)
5. ಮೂಲ ಗಜ್ಜರಿ (Parsnip)
6. ಬೆಳ್ಳುಳ್ಳಿ (Garlic)
7. ಹಸಿರು ಈರುಳ್ಳಿ (Spring Onion)
8. ಸುವರ್ಣಗಡ್ಡೆ
9. ಮೂಲ ಎಳುಬು (Turnip)
10. ಹೀರೆಕಾಯಿ ಬೇರು (Beetroot)
ಬೇರು ಹಣ್ಣುಗಳು (Root Fruits):
ಬೇರು ಸುತ್ತುವರೆದೇ ಹೆಚ್ಚಾಗಿ ಬೆಳೆಯುವ ಹಣ್ಣುಗಳ ಸಂಖ್ಯಾ ಅಲ್ಪವಾಗಿರುತ್ತದೆ. ಹೀಗೆ, ಜಿಡ್ಡು ಬೇರುಗಳ ಮೂಲಕ ಬೆಳೆಯುವ ಹಣ್ಣುಗಳ ಉದಾಹರಣೆ:
1. ಮಜ್ಜಿಗೆಹಣ್ಣು (Tamarind fruit grows on roots occasionally).
2. ಸುತ್ತುಹಣ್ಣು (Figs occasionally propagate through underground roots).
---
ಬೇರು ತರಕಾರಿಗಳು ಪೋಷಕಾಂಶಗಳ ದೀರ್ಘಕಾಲೀಕ ಶ್ರೋತವಾಗಿದ್ದು, ವಿವಿಧ ಖನಿಜಗಳು ಮತ್ತು ನಾರಿನಾಂಶದ ಉತ್ತಮ ಮೂಲ.

ಸಿಂಧು ಭಾರ್ಗವ ಬೆಂಗಳೂರು.
ಆರೋಗ್ಯಸಿಂಧು


Friday, January 10, 2025

ಭಕ್ತಿಗೀತೆ ವೈಕುಂಠ ಏಕಾದಶಿಯ ಅಂಗವಾಗಿ



Google image source

ಯಾವ ಚಿಂತೆಯು ನಿನಗೆ ಶೇಷಶಯನನೇ


ಯಾವ ಚಿಂತೆಯು ನಿನಗೆ ಶೇಷಶಯನನೇ

ಮಂದಸ್ಮಿತದಲ್ಲಿಯೇ ಲೋಕ ನಡೆಸುವೆ ದೇವ //ಯಾವ//


ನಾರಾಯಣ ನಿನ್ನ ನಾಮದಲ್ಲಿಹ ಮಹಿಮೆ

ಪೇಳಿದರೆ ಸಾಲದು ಪಾಡಿ ಪೊಗಳುವೆ ದೇವ

ಸಿಂಧುಸುತೆ ಪತಿ ಎನ್ನ ಮುಂದೆಯೂ ಕಾಯುತಿರು

ಮಂದವಾಗಿಹ ಮತಿಯ ಚಂದದಿ ಹೊಳವಂತೆ ಮಾಡು


ಕಷ್ಟಗಳ ಕೊಡಬೇಡ ಎನಲಾರೆ ನಾ

ನಷ್ಟಗಳ ಸಹಿಸಿ ಹೆಜ್ಜೆಯಿಡುತಿರುವೆನು

ಕಿಚ್ಚನು ಕೊಡು ದೇವ ಹೊಟ್ಟೆಕಿಚ್ಚಿನ ಜನರೆದುರು

ಮೊಟ್ಟೆಯೊಡೆದ ಮರಿಯಂತೆ ಜಗವ ಕಾಣುತಿರುವೆ..


ಕೆಟ್ಟದು ನಡೆದಿದೆ ತಪ್ಪನು ಕ್ಷಮಿಸು

ಕೊಟ್ಟ ಮಾತನು ಉಳಿಸಿಕೊಳ್ಳದೆ ಮರುಗಿದೆನು

ತಪ್ಪನು ತಿದ್ದಿ ನಡೆಯಲವಕಾಶ ನೀಡು

ಒಪ್ಪತ್ತು ಉಪವಾಸ ಮಾಡಿ ಜಪಿಸುವೆ ದೇವ..


ಸಿಂಧು ಭಾರ್ಗವ, ಬೆಂಗಳೂರು

ಪರೀಕ್ಷೆ ಭಯ ಬೇಡ ಕಿರುಲೇಖನ

ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು

ಕಾರಂತಜ್ಜನ ನೆರಳಿನಡಿಯಲ್ಲಿ..

(ಕಲೆ ಹಾಗೂ ಸಾಹಿತ್ಯ ವೇದಿಕೆ)


Google image source


ಶೀರ್ಷಿಕೆ : ಆತ್ಮವಿಶ್ವಾಸ ಬೆಳೆಸಿರಿ


ಪರೀಕ್ಷೆಯ ಭಯ ಎಂದರೆ ಪರೀಕ್ಷೆಯ ಆತಂಕ ಅಥವ  ಪರೀಕ್ಷಾ ಆತಂಕ ಎಂದು ಹೇಳಬಹುದು. ಇದು ಪರೀಕ್ಷೆಗಳು ಸಮೀಪಿಸಿದಾಗ ವಿದ್ಯಾರ್ಥಿಗಳನ್ನು  ಮತ್ತು ಮಕ್ಕಳ ಪೋಷಕರನ್ನು   ಕಾಡುವ  ದೊಡ್ಡ ಸಮಸ್ಯೆಯಾಗಿದೆ.  ಈ  ಸಮಸ್ಯೆಯನ್ನು  ಸಾಧಾರಣ  ಶೇಖಡಾ ಎಪ್ಪತ್ತರಷ್ಟು  ವಿದ್ಯಾರ್ಥಿಗಳು ಹೊಂದಿದ್ದಾರೆ ಎಂಬುದು ಅಕ್ಷರಶ ಸತ್ಯವಾಗಿದೆ.


ಪರೀಕ್ಷೆಯ ಭಯಕ್ಕೆ ಕಾರಣ 

ಕ್ರಮಬದ್ಧವಾದ ಕಲಿಯುವಿಕೆ ಇಲ್ಲದಿರುವುದು,ಶಿಕ್ಷಕರು ಪಾಠವನ್ನು ಕಲಿಸುವಾಗ ಗಮನ ಕೊಡದೇ ಬೇರೆ ವಿಚಾರದಲ್ಲಿ ಮಗ್ನರಾಗುವುದು,ಅಂದಿನ ಪಾಠವನ್ನು  ಅಂದೇ ಕಲಿಯುವ ಪರಿಪಾಠ  ಇಲ್ಲದಿರುವುದು, ಪರೀಕ್ಷೆ ಬಂದಾಗ ನೋಡೋಣ ಎಂಬ ಹುಂಬತನ,ಪಾಠವನ್ನು ಓದುವ, ಅದರ ಮುಖ್ಯಾಂಶಗಳನ್ನು ಬರೆಯುವ ಮತ್ತು ಅರ್ಥೈಸಿಕೊಳ್ಳುವ ಅಭ್ಯಾಸ  ಇಲ್ಲದಿರುವುದು.ಏಕಾಗ್ರತೆಯ ಕೊರತೆ,ಓದುವ ಬದಲು ಇತರ ಚಟುವಟಿಕೆಯಲ್ಲಿ  ಲೀನವಾಗುವುದು, ಮೊಬೈಲ್ ಬಳಕೆ, ದೂರದರ್ಶನದ  ವೀಕ್ಷಣೆ, ವೀಡಿಯೋ ಆಟಗಳನ್ನು ಆಡುವ ಮೋಜು, ಆಟೋಟಗಳು, ಕ್ರಿಕೇಟು  ಎಂದು ಸಮಯವನ್ನು  ಕಳೆಯುವುದು, ಹೀಗೆ ವಿದ್ಯಾರ್ಥಿಗಳು ಓದುವುದನ್ನು ನಿರ್ಲಕ್ಷಿಸುತ್ತಾರೆ. ಪರೀಕ್ಷೆಗಳು ಸಮೀಪಿಸಿದಾಗ  ಆತಂಕ, ಕಳವಳ ಎದುರಾಗಿ  ನಿದ್ರೆ ವಿಶ್ರಾಂತಿಯನ್ನು  ಮರೆತು ಒಂದೇ ಸಮನೆ  ಓದಲು ಪ್ರಾರಂಭಿಸುತ್ತಾರೆ. ಇದರಿಂದ  ದೈಹಿಕ,  ಮಾನಸಿಕ ಒತ್ತಡ,  ಯಾವ ವಿಷಯಗಳನ್ನು  ಕಲಿಯಬೇಕು ಎಂಬ  ಗೊಂದಲದಲ್ಲಿ ಒದಿದ ಪಾಠಗಳು ನೆನಪಿನಲ್ಲಿ ಉಳಿಯುವುದಿಲ್ಲ. ಅದಕ್ಕೆ ಸರಿಯಾಗಿ ಪೋಷಕರು  ಸಹ ಹೆಚ್ಚಿನ ಅಂಕ ಗಳಿಸಬೇಕೆಂದು ಒತ್ತಡ  ಹೇರುತ್ತಾರೆ. ಬುದ್ದಿವಂತ  ಮಕ್ಕಳಿಗೆ  ಹೋಲಿಸಿ  ಮಕ್ಕಳಿಗೆ  ಇನ್ನಷ್ಟು ಮಾನಸಿಕವಾಗಿ  ಬಳಲುವಂತೆ  ಮಾಡುತ್ತಾರೆ. ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ  ಆತಂಕ ಉಂಟಾಗಿ ಪರೀಕ್ಷೆಯ ಕೊಠಡಿಯಲ್ಲಿ ಎದೆಬಡಿತ ಹೆಚ್ಚಳ,  ಪ್ರಶ್ನೆ ಪತ್ರಿಕೆ ಕಂಡೊಡನೆ ಬೆವರುವಿಕೆ, ತಲೆ ತಿರುಗುವಿಕೆ,  ಕಲಿತ ವಿಷಯಗಳು ಮರೆತು ಹೋಗಿ ನೆನಪು  ಬಾರದೇ ಕಳವಳ,  ಏಕಾಗ್ರತೆಯ ಕೊರತೆಯಿಂದ  ಮಕ್ಕಳು ಪರೀಕ್ಷೆಯನ್ನು  ಅದೈರ್ಯದಿಂದ  ಎದುರಿಸುತ್ತಾರೆ. 


ಪರಿಹಾರಗಳು

ತರಗತಿಯ ಪ್ರಾರಂಭದಿಂದಲೇ ನಿರಂತರವಾದ ಕಲಿಯುವಿಕೆ,ಶಿ ಕ್ಷಕರು ಪಾಠ ಮಾಡುವ ಸಮಯದಲ್ಲಿ ಏಕಾಗ್ರತೆ,ವಿಷಯಗಳನ್ನು ಬಾಯಿಪಾಠ ಮಾಡದೇ ವಿಷಯಗಳನ್ನು ಅರ್ಥೈಸಿಕೊಂಡು  ಮನದಟ್ಟು ಮಾಡಿಕೊಳ್ಳುವ ಕ್ರಮಬದ್ಧವಾದ  ಕಲಿಯುವಿಕೆ,ದಿನವೂ ಪಾಠಗಳನ್ನು ಓದುವ ಬರೆಯುವ ಹವ್ಯಾಸ,ಕಟ್ಟುನಿಟ್ಟಿನ ವೇಳಾಪಟ್ಟಿಯ ಪ್ರಕಾರ  ಓದುವಿಕೆ, ನಿಗದಿತ ಸಮಯದಲ್ಲಿ ಊಟ, ನಿದ್ರೆ,  ಮತ್ತು ಮೊಬೈಲ್, ದೂರದರ್ಶನದ ವೀಕ್ಷಣೆ ಕಡಿತಮಾಡುವುದು,ಅಕ್ಷರಗಳನ್ನು ಆದಷ್ಟು ಸ್ಪುಟವಾಗಿ ಬರೆಯುವುದು,ಪ್ರಾಣಾಯಾಮದಿಂದ  ಏಕಾಗ್ರತೆಯನ್ನು  ಹೆಚ್ಚಿಸುವುದು, ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಮಕ್ಕಳಿಗೆ  ಓದಲು  ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಿಸುವುದು,ಪರೀಕ್ಷೆಗೆ ತೆರಳುವಾಗ ದೇವರ, ಹಿರಿಯರ  ಆಶೀರ್ವಾದವನ್ನು  ಪಡೆದು ಆತ್ಮ ವಿಶ್ವಾಸದಿಂದ  ಶಾಂತಚಿತ್ತರಾಗಿ  ಪರೀಕ್ಷೆಗಳನ್ನು ಎದುರಿಸುವುದರಿಂದ  ಪರೀಕ್ಷಾ ಆತಂಕವನ್ನು  ತಡೆಗಟ್ಟಬಹುದು. 


ಬರೆದವರು 

ಸುರೇಖ. ಶೇಟ್, ಬೆಂಗಳೂರು

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...