Monday, December 27, 2021

ಬಸುರಿ ಬಯಕೆ ಹಾಗು ಇನ್ನಿತರ ಜನಪದ ಶೈಲಿಯ ತ್ರಿಪದಿ ಗೀತ ರಚನೆ


ಬಸುರಿ ಬಯಕೆ ಹಾಗು ಇನ್ನಿತರ ಜನಪದ ಶೈಲಿಯ ತ್ರಿಪದಿ ಗೀತ ರಚನೆಗಳ ಸಂಗ್ರಹ - ಬತ್ತದ ತೊರೆ ಸ್ನೇಹ ಬಳಗದಿಂದ, ಬೆಂಗಳೂರು

Source image.

ತ್ರಿಪದಿಯಲ್ಲಿ ಕವನ ರಚನೆ ಸ್ಪರ್ಧೆಗಾಗಿ
ಬಯಕೆಯ ಬದುಕು
ಆಕಾಶದಾಗಿನ ಚಂದ್ರಾಮ ಕೈಯಾಗ ಸಿಕ್ಹಾಂಗ|
ಸಾಕಾಗಿ ಹೋದ ಸುಖದ್ಹಾಂಗ| ಈ ಜೀವ
ಬೇಕಾಗಿ ಬಯಸೀದ ಹುಳಿಹಾಂಗ||

ಊರಿನ ದಾರ್ಯಾಗ ಹೂವಿನ ಹಾಸ್ಹಂಗ|
ಮಾರಿ ಮ್ಯಾಲಿನ ಕುಂಕುಮ| ಹೊತ್ತೀನ
ಸೂರಪ್ಪ ಹಗಲೀನ ಕಣ್ಹಾಂಗ||

ಬಂಗಾರದ ತಾಟಿನ ಸಿರಿಮಂತರ ಊಟ| 
ಸಿಂಗಾರ ಮಾಡೀದ ಹೆಣ್ಹಾಂಗ| ನಿಜರೂಪ
ಹೆಂಗಾರ ಮುಚ್ಚಿದರೂ ವಜ್ರಾನ||

ಅದ ಕೇಳಿ ತಿಂದರೂ ಇದ ಕೇಳಿ ತಿಂದರೂ|
ಮಾದಲಿ ರುಚಿಬರುದಿಲ್ಲ| ನಾಲೀಗಿ
ಹೋದಲ್ಲೆ ಬಂದಲ್ಲೆ ಕಲಿಸೀತ||

ಬಿದಗಿಯ ಚಂದ್ರನ ಬೆಳಕೀನ ದಾರ್ಯಾಗ|
ಹಾದಿಯ ಹುಡಕುವ ಕೆಲಸಾನ| ಬಿಡಬೇಕ
ಬದುಕೀನ ಬಸರೀನ ದುಕ್ಕಾನ||

ನಡದಾಕಿ ನಡದಾಳು ಹಡದಾಕಿ ಹಡದಾಳು|
ನಡನಡಕ ಬಯಕೀಯ ಊಟಾನ| ಬಯಸಿದರ
ಬಡದ್ಯಾಡಿ ಕೊಟ್ಟರೂ ಧರಮಾನ||
ಕೇಳಿದ್ದ ಕೊಟ್ಟಾರು ಹೇಳಿದ್ದ ತಂದಾರು|
ಬ್ಯಾಳೀಯ ಹುಗ್ಗೀಯ ಸಿಹಿಯೂಟ| ಹೊಟಿತುಂಬ
ಕೂಳೀನ ಇತಿಮೀತಿ ತಿಳದ್ಹಾಂಗ||

ಪ್ರಶಾಂತ ಪ. ಗೋಡಖಿಂಡಿ
ಬಾದಾಮಿ.
ಬಾಗಲಕೋಟ ಜಿಲ್ಲೆ
-----------
ಬತ್ತದ ತೊರೆ ಸ್ನೇಹಬಳಗ
ದಿನಾಂಕ-22-12-2021
ಬುಧವಾರ
ತಿಂಗಳ ಸ್ಪರ್ಧೆಗಾಗಿ ಜಾನಪದ ತ್ರಿಪದಿ ರಚನೆ.
ವಿಷಯ - ಬಸುರಿ ಬಯಕೆ
*************************
ಬಸುರಿ ಪಾರವ್ವನ ಬಯಕೆ
*************************
ಉದರದಿ/ಮಿಸುಕಾಡೊ/ಕದಲಾಡೊ/ಕಂದನ
ಮದರದಿ/ತಡವಿ/ಪಾರವ್ವ/ನಸುನಕ್ಕು
ಪದಳದ/ಸಮಯ/ನೆನೆದಾಳೊ

ತವರಲಿ/ಬೇಕಾದ/ಸವಿಭೋಗ/ನೆಲೆಸಿದ್ರು
ಕವಿದೈತಿ/ಚಿಂತಿ/ಮದವನ/ನೆನಪಾಗಿ
ಸವಿಯೂಟ/ಕೂಡ/ಕಹಿಯಾದೊ

ಮರುದಿನ/ಬೆಳಗಲಿ/ಪಾರುಗೆ/ಎರೆಯುತ
ಜರತಾರಿ/ಸೀರೆ/ಉಡಿಸ್ಯಾರು/ಸಖಿಯರು
ಹರಸ್ಯಾರು/ಹಸಿರು/ಬಳೆಕೊಟ್ಟು

ತಲಿತುಂಬಾ/ಕೇದಗಿ/ಚೆಲುವಾದ/ಸಂಪಿಗಿ
ಹೊಳೆವಂತ/ನಗವ/ಮೈತುಂಬ/ತೊಡಿಸ್ಯಾರು
ಕಳೆಯಾಗಿ/ಮಡಿಲು/ತುಂಬ್ಯಾರು

ಬಾಡಿದ/ಮೊಗನೋಡಿ/ಕಡವರ/ಕೇಳ್ಯಾಳು
ಕಾಡುತ/ಗೆಳತಿ/ಛೇಡಿಸೆ/ಪಾರವ್ವ/
ಒಡೆಯನ/ಸನಿಹ/ಬಯಸ್ಯಾಳು

ನಕ್ಕರು/ಗೆಳೆತ್ಯಾರು/ಚಕ್ಕಡಿ/ಕಳಿಸ್ಯಾರು
ಪಕ್ಕದ/ಹಳ್ಳಿ/ಪಾರವ್ನ/ಒಡೆಯನ
ಪಕ್ಕನೆ/ಹೇಳಿ/ಕರೆಸ್ಯಾರು

ಇನಿಯನ/ಕರೆತಂದು/ಸನಿಹಕೆ/ಕೂಡಿಸೆ
ತನುಮನ/ಹಿಗ್ಗಿ/ನಲಿದಾಳು/ಪಾರವ್ನ
ಮನದಂತೆ/ಬಯಕೆ/ನಡೆದಿತ್ತು

ಶ್ರೀಮತಿ ವಿಜಯಾ ಜಿ ಶೆಟ್ಟಿ
ಸಿರ್ಸಿ (ಉತ್ತರ ಕನ್ನಡ )

ಮದರದಿ--ಸಂತೋಷದಿಂದ
ತಡವಿ--ಮುಟ್ಟಿ
ಪದಳದ--ಸುಖದ
ಮದವನ--ಗಂಡ
ನಗವ--ಆಭರಣವ
ಕಡವರ--ಬಯಕೆ
ಛೇಡಿಸೆ--ತಮಾಷೆ ಮಾಡಿ
-------------
ಬತ್ತದ ತೊರೆ ಸ್ನೇಹ ಬಳಗ

ತ್ರಿಪದಿಯಲ್ಲಿ ಕವನ ರಚನೆ ಸ್ಪರ್ಧೆಗಾಗಿ
ವಿಷಯ: ಹೇಮಂತ ಋತುವಿನ ಚಳಿ

ಶೀರ್ಷಿಕೆ: ಮಾಗಿಯ ಕಾಲದ ಚಿಗುರು

ಮಾಗಿಯ ಕಾಲಕ್ಕ ಹಸಿರೆಲೆ ಚಿಗುರೈತಿ
ಮಾಮರವೆಲ್ಲ ಹೂವ ಬಿಟ್ಟೈತಿ/ತಿಂಗಳದಾಗ
ಚೆಲುವೆಲ್ಲ ನಗನಗತಾ ನಿಂತೈತಿ

ಕುಕಿಲವು ಬಂದು ಇಂಪಾಗಿ ಹಾಡೈತಿ
ದುಂಬಿಯು ಸುಮವ ಮುತ್ತೈತಿ/ತಿರುತಿರುಗಿ
ಮಕರಂದವ ಹೀರಿ ನಲಿದೈತಿ

ಮೈ ಕೊರೆಯುವ ಚಳಿಯು ಬಂದೈತಿ
ಮೈಯೆಲ್ಲಾ ನಡುಗುತ್ತಾ ನಿಂತೈತಿ/ ನೋಡ
ರೈತನು ಹೊಲದತ್ತ ನಡದಾನ

ಸಂಕ್ರಾಂತಿ ಸುಗ್ಗಿ ಚಳಿಯಾಗ ಬಂದೈತಿ
ರಾಶಿಯ ಮಾಡುನು ಹಿರಿಹಿರಿ ಹಿಗ್ಗಿ/ ತಂಗಿ
ಸುಗ್ಗಿಯ ಕುಣಿತ ಕುಣಿಯೋಣ ಬಾರ

ಗಿಡದ ತುಂಬ ಹೂವು ಕಾಯಿ ತುಂಬೈತಿ
ಚೆಲುವಿನ ಭೂಮ್ತಾಯಿ ಹೊಳೆದಾಳ/ನೋಡವ್ವ
ಬಂಗಾರದ ಸಿರಿಯ ಹೊತ್ತೈತಿ

ಏನೆಂದು ಹೊಗಳಲಿ ಸೊಬಗಿನ ವೈಭವ
ನೋಡುವ ಕಣ್ಣ ರಂಗೇರ್ಯಾವ/ಮನವು
ಸುಳಿಯುತ್ತ ಹಾರ್ಯಾರಿ ತಿರುಗೈತಿ

ಶ್ರೀಮತಿ ಚೈತ್ರಾ ಆರ್ ಕೆ
--------------
ಸ್ಪರ್ಧೆಗಾಗಿ ತ್ರಿಪದಿ ಕವನ

ಬಸುರಿಯ ಬಯಕೆ

ಮೂರು ಸಂಜೀಹೊತ್ತು ಅಂಗಳಕ ನೀರ್ಹಾಕಿ
ದೀಪ ಮುಡಿಸಿ,,ಕೈಮುಗಿದು ದೇವಂಗ
ಮಲ್ಲಿಗೆ ಮಂಚದಿ ಚಂದ್ರಾಮ ಅರಳ್ಯಾನ

ಆಸರಿಕೆ ಅಳದೀಡ ಬ್ಯಾಸರಿಕಿ ಬಳದೀಡ
ಮ್ಯಾರಿ ತೊಳಿಯೇಳ ಕಾಸೇನ ನಿನಗಾಗಿ
ಪಿರೂತಿ ತುಂಬೀದ ಕರದ ಹಾಲ

ಉಂಡರ ಉಣ ಏಳ ಒಣ ರೊಟ್ಟಿ ನಿನಗ್ಯಾಕ
 ಬಿಸಿ ಬಾನ ಕೆನಿ ಮೊಸರ ಮಾಡಿ ನಾ ಬಡಿಸೇನ
ಶಿವ ಒಲಿದು ಕೊಡತಾನ ಗಂಡ  ಮಗನ

ಮೂರು ತಿಂಗಳಾತು ನೀ ಏನಬಯಸೀದಿ
ಮಾವಿನಕಾಯಿ ಮಿಡಿ ಉಪ್ಪಿನಕಾಯಿ ತಂದು
ಬಯಕೆ ತೀರಿಸೇನ,ಮಗಬರಲೀ

,ಮಾಗಿದ ಮಾವಿನ ಹಣ್ಣು  ಬೆಣ್ಣಿ ಕಾಸಿದ ತುಪ್ಪ,
ಸಂಡಿಗಿ ಹಪ್ಪಳ ಕರಗಾಯಿ ಕರಿದು
ಮಾವಿನ ತ್ವಾಟದ ನರಳಾಗ ಉಣಬಾರ

ಹಸಿರು ಸೀರಿಉಟ್ಟು ,ಕೆಂಪ ಕುಬಸ ತೊಟ್ಟು
ಮಲ್ಲಿಗೆ ದಂಡಿನ ತುರುಬ ಮೂಗಿನ್ಯಾಗ ನತ್ತು,
ತವರೂರ ಸಿರಿಯ ಬಯಸ್ಯಾಳ

ಆರತಿ ಎತ್ತಾಗ ಬಾಡಿದ ಮೊಗ ಯಾಕ
ಮನದಾಗನ  ಬಯಸಿ ಮನ ತೊಳಲಾಡಿದಾಗ,
ಮನದಿನಿಯನ ಕಂಡು ಬಯಕೆ ತೀರ್ಯಾವ

ಚಿನ್ಮಯಿ ಎಮ್ ಪಾಟೀಲ
ಧಾರವಾಡ
-------------
ಶೀರ್ಷಿಕೆ: ಬಸುರಿಯ ಬಯಕೆ

ಬಯಕೆ ಹತ್ಯಾವ ಎನಗ|ಬಯಸಿ ಬಂದೇನ ತಾಯಿ|
ಮಾಯದ ಕೈತುತ್ತು ಉಣಿಸವ್ವ | ಹಗಲೆಲ್ಲಾ|
ಬಯಕೆ ಕಾಡತಾವ ಹಡೆದವ್ವಾ||

ಗಸಗಸಿ ಪಾಯಸ| ಹಸನುಳ್ಳ ಜಹಂಗಿರ|
ಬಿಸಿ ಹೂರಣ ಹೋಳಿಗಿ ನೀ ಮಾಡ | ಹಡೆದವ್ವಾ|
ಹಸಿಮಾವು ತರಿಸಿ ತಿನಿಸವ್ವಾ||

ಯಾಲಕ್ಕಿ ಬಾದಾಮಿ| ಹಾಲ್ಹಾಕಿ ಕುದಿಸವ್ವಾ|
ಕಲ್ಲು ಸಕ್ಕರೆಯ ಬೆರೆಸವ್ವಾ | ಹದಮಾಡಿ|
ಮೆಲ್ಲಗೆ ತಂದು ಕುಡಿಸವ್ವಾ||

ಎಣ್ಣೆ ಬದನೆಕಾಯಿ| ಕೆನೆಮೊಸರು ಹುಳಿಬಾನ|
ಬೆಣ್ಣೆಯ ರೊಟ್ಟಿ ಸಿಹಿಬಾಳ | ಹಡೆದವ್ವಾ|
ಹುಣಸೆಯ ಬಯಕೆ ತೀರಿಸ||

ಅಲ್ಲ ಮಾಗಣಿ ಬೇರ| ಬೆಲ್ಲ ಬಳವಲ ಕಾಯಿ|
ನೆಲ್ಲಿಯಕಾಯಿ ಬಯಸೇತಿ |ನನ್ನಜೀವ|
ತಲೆ ತುಂಬಾ ಮಲ್ಲಿಗೆ ಮುಡಿಸವ್ವಾ||

ಕುಂತರ ಆಕಳಕಿ| ನಿಂತರ ತೂಕಡಿಕಿ|
ಒಂತರಾ ನನಗ ವಾಕರಿಕಿ | ಬರತೈತಿ|
ಅಂತಾದ ನನಗೇನಾಗೇತಿ||

ಬಣ್ಣದ ಚಾದರ|ಉಣ್ಣೆಗಂಬಳಿ ಹೊಚ್ಚ|
ಕಣ್ತುಂಬ ನಿದ್ದೆ ಮಾಡೇನ |ಹಡೆದವ್ವ|
ಹೊನ್ನದಾಭರಣ ಬೇಕೆನಗ||

✍️ ಬಾಹುಬಲಿ ಬಿರಾದಾರ ಪಾಟೀಲ ಜಮಖಂಡಿ
-----------

 ಬಸುರಿಯ ಬಯಕೆ

ಗಂಡನ ಮನಿಯಾಗ ಗರತೀಯ ನೋಡವ್ವ/
ಬಯಸ್ಯಾಳ ಮಾವು ಕಸಗಾಯಿ/ ತಿನಲಾಕ
ಬಸರೀಗೆ ಆಸೆ ಕಾಡ್ಯಾವ//

ಪ್ರಕೃತಿ ಮಡಿಲಾಗ ಹಸಿರುಟ್ಟು ಬನದಾಗ/
ಪತಿರಾಯ ಬಂದು ಮಲ್ಲಿಗೆ/ ಮುಡಿಸ್ಯಾನ
ಪತ್ನೀಯ ಬಯಕೆ ಅರಿತಾನ//

ಅತ್ತೀಯ ಮನಿಯಾಗ ಮತ್ತೇನ ಬಯಸ್ಯಾಳ/
ಮುತ್ತಿನ ಪೆಂಡಿ ಕಾಲಾಗ/ ಇಡುವಂತ
ಕಂದನ ಬೇಡಿ ನಮಿಸ್ಯಾಳ//

ಸಜ್ಜೀಯ ರೊಟ್ಟಿ ಬಾನಣ್ಣ ಎಣಿಗಾಯಿ/
ಗುರೆಳ್ಳು ಚಟ್ನಿ ಕೆನಿಮೊಸರ/ ಬುತ್ತೀಯ
ತವರೀನ ದಾರಿ ನೋಡ್ಯಾಳ//

ನಿಸರ್ಗ ಸಿರಿಸುಖವ ಮನದಾಗ ನೆನೆದಾಳ/
ಗಂಗವ್ವನ ಝರಿ ಧುಮ್ಮಿಕ್ಕಿ/ ಹರಿದಾಗ
ಜಲಪಾತ ನೋಡಿ ನಲಿದಾಳ//

ಬೆಟ್ಟದ ಮ್ಯಾಲಿನ ಬಸವನ ಗುಡಿಚಂದ/
ಕರಕೊಂಡ ಹೋಗು ನನರಾಯ/ ದರುಶನಕ
ಹರಕೀಯ ಹೊತ್ತು ಬರೋಣ//

ಒಂಬತ್ತು ತಿಂಗಳಿಗೆ ಹಡೆದವ್ವನ ಬಯಸ್ಯಾಳ/
ಜೋಡೆತ್ತಿನ ಬಂಡಿ ಹೂಡೆಂದು/ ತವರೀಗೆ
ಕಳುಯೆಂದು ರಾಯಗ ಅರುಹ್ಯಾಳ//

ಶ್ರೀಮತಿ ಗಿರಿಜಾ ಹಿರೇಮಠ
-------------
ವಿಷಯ:-ಮುದ್ದು ಮಾದಯ್ಯ( ಭಕ್ತಿಭಾವ)
ಶೀರ್ಷಿಕೆ:-ಏಳುಮಲೆ ಒಡೆಯ

ಮಲ್ಲಿಗೆ ಹೂವಂತ ಮನಸುಳ್ಳ ಮಾದೇವ
ಹುಲಿಯ ಮೇಲೇರಿ ಬರುತಾನೆ//ಮಾದಪ್ಪ
ಚೆಲುವಿನ ನಗೆಬೀರಿ ನಿಂತಾವ್ನೆ//

ಏಳುಮಲೆ ಮೇಲೆ ಏಳ್ತಾನೆ ಶಿವಪ್ಪ
ಬೆಳ್ಳೀಯ ಹೊಂಬೆಳಕ ಸುರಿಸುತ್ತ//ಮಾದೇವ
ಬಾಳನ್ನು ಬೆಳಗಲು ಬಂದಾವ್ನೆ//

ಅಂದಾದ ಮಾದಪ್ಪ ಚೆಂದಾಗಿ ನಿಂತಾವ್ನೆ
ಬಂದಾನೊ ನೋಡು ಭುವಿಗಿಳಿದು//ಮಾದಯ್ಯ
ತಂದಾನೋ ಹರುಷ ಜನಕ್ಕೆಲ್ಲಾ//

ಹೊನ್ನಿನ ಮಂಟಪ ಚಿನ್ನದ ಹೂ ಕಳಸ
ಚೆನ್ನಾಗಿ ಹೊಳೆದಾವ್ನೆ ಮಾದೇವ//ನಮಗೆ
ಇನ್ನೂ ನೋಡೊಕೆ ಮನಸೈತೆ//

ಗಿರಿಯಿಂದ ಇಳಿದು ಸಿರಿಯನ್ನು ತರುತಾನೆ
ಮರೆಯದೇ ಬರುತೀನಿ ಜಾತ್ರೆಗೆ//ಮಾದಪ್ಪ
ನೊರೆವಾಲು ಎಡೆಯ ತರುತೀನಿ//

ಜೋಡೆತ್ತ ಬಂಡೀಲಿ ನೋಡಯ್ಯ ಹೂಹಣ್ಣು
ಓಡಿಬಾರಯ್ಯ ಗಿರಿಯಿಂದ//ಮಾದೇವ
ನೀಡಯ್ಯಾ ನಮಗೆಲ್ಲಾ ಸುಖವನ್ನ//

ಆನಂದಜಲ,ಶಿಕ್ಷಕಿ  ತುರುವೇಕೆರೆ
---------------

    ಬಸುರಿಯ ಹಂಬಲ
   ----------------------
ಬಸುರಿಗೆ ನೂರೆಂಟು ಬಯಕೆಯು ತಂಗ್ಯವ್ವ
ಹುಳಿಮಾವಲಿ ಆಸೆಯು ಮೂಡಿದೆ/ಅವಳಿಗೆ
ಹಸಿಮಣ್ಣಲಿ ಕಣ್ಣು ನೆಟ್ಟಿದೆ

ತವರಿನ ನೆನಪು ಕಾಡಿದೆ ಮನದಾಗೆ
ಅವ್ವಾನ ಆರೈಕೆ ಬಯಸಿದೆ/ಮನವು
ಪ್ರೀತಿಯ ಆಸರೆ ಬೇಡಿದೆ

 ಹಗುರಾದ ಹಸಿರಿನ ಪಟ್ಟಿಯ ಸೀರೆಯು
ಕುಸುರಿಯ ಮಾಡಿದ ಬಳೆಗಳು/ಚೆಲುವಾಗಿ
ಮಲ್ಲಿಗೆ ದಂಡೆಯು ಮುಡಿಯಲ್ಲಿ

ಅಂಬೋಡೆ ಹೋಳಿಗೆ ಸವಿಯಲು
ಸೊಗಸು
ಬಗೆ ಬಗೆ ತಿನಿಸಿನ ಆಸೆಯು/ಬಸುರಿಗೆ
ಮಮತೆಯ ಕೈತುತ್ತಿನ ಬಯಕೆಯು

ಜೊತೆಯಾಗಿ ಇರಬೇಕು ತನ್ನವನು ಎಂದಿಗೂ
ಪ್ರೀತಿಯ ಹೊಳೆಯನ್ನು ಹರಿಸುತ್ತಾ/ಎಂದಳು
ಕೂಸಿನ ಕನಸನ್ನು ಕಾಣುತ್ತಾ

ಬೆಳೆದಿದೆ ಕೂಸು ದಿನದಿನಕೂ ಬಸಿರಲ್ಲಿ
ಮನಸಿನ ಕನ್ನಡಿ ಕಂಡಿದೆ/ಒಳಗಿಂದ
ಹಿಗ್ಗುತ್ತಾ ಸಡಗರ ಪಡುತಿದೆ

ದಿನ ತುಂಬಿದ ಬಸುರಲ್ಲಿ ಕನಸಿನ ಗೋಪುರ
ಕರುಳಿನ ಕುಡಿಗಾಗಿ ಕಾತರ/ಕಂದನ
ನಗುವಲ್ಲಿ ನಗುವಾಗೋ ಆತುರ

ಉಷಾ ದಿನೇಶ್
ಶಿವಮೊಗ್ಗ

--------------
ಶೀರ್ಷಿಕೆ : ಮಾಗಿಯ ಚಳಿಯಲಿ ತವರಲಿ ಮಡದಿ

ಹರಯಕ್ಕೆ ಬಿಸಿಬಿಸಿ ಹಿರಿಮಂದಿ ಕಸಿವಿಸಿ
ಧರೆಯಲಿ ಚಳಿಯು ಬಂದೈತೆ//ಮಾಗಿಯ
ಮರಗುಟ್ಟೋ ಚಳಿಯು ಬಿದೈತೆ.

ಚುಮುಚುಮು ಚಳಿಯಲ್ಲಿ ರಮಣೀಯ ಗಿಡಬಳ್ಳಿ
ಸುಮನವು ಅಲ್ಲಿ ನಗುತೈತಿ //ಮಡದಿಯ
ಗಮನದಿ ಮನಸು ಮುಳುಗೈತಿ.

ತಣ್ಣನೆ ಮೈಯಿಗೆ ನನ್ನಾಕೆ ಅಪ್ಪುಗೆ
ಇನ್ನಿಲ್ಲ ದಂತೆ ಕಾಡಿತ್ತು//ಹೇಗಿರಲಿ
ಕಣ್ಣಿಗೆ ನಿದ್ದೆ ಬರದೆಂದೂ

ಅತ್ತೆಯ ಮಗಳನ್ನು ಮತ್ತೊಮ್ಮೆ ನೋಡೋಕೆ
ಮೆತ್ತನೆ ನಾನು ಹೊರಟಿದ್ದೆ/ರಾತ್ರಿಲಿ
ಕತ್ತನ್ನು ಕೆಳಗೆ ಹಾಕೊಂಡು

ಹಿತ್ತಲ ದಾರಿಲಿ ಮುತ್ತಂತ ಇಬ್ಬನಿ 
ಮತ್ತಲ್ಲಿ ನೋಡಿ ನಗುತಿತ್ತು//ನನಗಂತೂ 
ಸುತ್ತೆಲ್ಲ ಚಂದ ಕಾಣ್ತಿತ್ತು

ದಾರಿಯ ಸವೆಸಿದ್ದೆ ಇರುಳಿನ ಚಳಿಯಲ್ಲಿ
ನಾರಿಯೇ ಎಂದು ಕರೆದಾಗ // ನನ್ನಾಕೆ 
ಹಾರುತ್ತ ಒಡನೆ ಬಂದಳು

ಮಬ್ಬಿನ ನಸುಕಲ್ಲಿ ಕಬ್ಬಿನ ಗದ್ದೆಲಿ
ಇಬ್ಬರ ಕಣ್ಣೋಟ ಬೆರೆತೈತೆ // ಮದುವೆಯು 
ಹಬ್ಬದ ಸೊಗಸು ತಂದೈತೆ

ಲತಾಗೌಡ , ಭಟ್ಕಳ
--------------

ಶೀರ್ಷಿಕೆ : ಪಡಿಯಚ್ಚು

ಗಂಡ ಹೆಂಡಿರ ನಡುವೆ ಇದ್ದಂತ ಪ್ರೇಮವು|
ಪಡಿಯಚ್ಚು ರೂಪ ಪಡೆದೈತೆ| ಕೇಳವ್ವ
ನಮ್ಮನೆ ಸಿಂಗಾರಿ ಬಸುರೀಯೋ||

ತಿಂದದ್ದು ಉಂಡದ್ದು ಕಕ್ಕಿಹೋದರ ಕೂಡ|
ತಿನ್ನುವ ಆಸೆ ಬಸುರೀಗೇ| ಕೇಳವ್ವ
ಬೇಕಾದ್ದು ಕೊಡುವೆ ತಿನ್ನೂ ಬಾ||

ಎರಡು ಜೀವಗಳು ಒಂದಾದ ಫಲವೀಗ|
ಹುಳಿ ತಿಂದು ಜೀವ ಎರಡಾಗ್ಲಿ| ಬಾರವ್ವ 
ಹುಳಿಮಾವು ಉಪ್ಪು ಬೆರೆಸಿವ್ನಿ||

ಏನೇ ತಿನ್ನುವ ಬಯಕೆ ಬಂದರೆ ನೀ ಹೇಳು|
ತಂದು ಕೊಡುತಾನೆ ನಿನ್ನ ಗಂಡ| ನಿನಗಂತ
ಆಸೆ ಅಡಗಿಸಬ್ಯಾಡ ನೀನೀಗ ||

ನಿನ್ನ ಬಯಕೆ ಹಾಗೇ ಉಳಿಕೊಂಡರೆ ಕೇಳು|
ಹಸುಗೂಸ ಬಾಯಾಗೆ ಜೊಲ್ಲಂತೆ| ಬ್ಯಾಡವ್ವ
ನಿನ್ನಾಸೆ ತಡೆದೂ ನಿಲಬ್ಯಾಡ||

ಬಟ್ಟೆ ಬಂಗಾರ ಎಂದೂ ಬಯಸಲೆ ಇಲ್ಲ|
ಗಂಡನ ಮಡಿಲೇ ಸರ್ವಸ್ವವೂ| ನಿನಗೆ
ಅವನಾ ಮಡಿಲಲ್ಲೇ ಮಲಗವ್ವಾ||

ಮೊದಲ ಮಗುವನ್ನ ತವರಲ್ಲೇ ಹಡಿಬೇಕು|
ನಿನ್ನ ತವರು ಬಂದೈತೆ ಕರೆಯಾಕ| ಹೋಗವ್ವ
ಮುದ್ದಾದ ಮಗುಹೆತ್ತಿ ಬಾರವ್ವ||

--ಪ್ರೀತಿ ಮಣಿಕಂಠ ನಾಯ್ಕ
   ಬಾಸೊಳ್ಳಿ, ಕುಮಟಾ
--------------

ಹೇಮಂತ ಋತುವಿನ ಚಳಿ
ಛಂದೋಬದ್ಧ ತ್ರಿಪದಿಯಲ್ಲಿ : ಹೇಮಂತನಾಗಮನ

ಚಳಿರಾಯ ಬಂದಾಗ ಬಳಿಯಲ್ಲಿ ಕಂಬಳಿ
ಸುಳಿಗಾಳಿ ಬೀಸಿ ಹೊಡೆದಾಗ| ಮೈಯಲ್ಲಿ|
ಚಳಿಯಿಂದ ನಡುಕ  ಹೆಚ್ಚಾತು||

ಹೇಮಂತನಾಗಮ ಧಾಮಂತ ಹೆಚ್ಚಾಗಿ
ಭಾಮಿನಿ ಮನದಿ ಯೋಚನೆ| ಮಾಡುತ
ಕಾಮಾರಿ ಶಿವನ ನೆನೆದಾಳ||

ಕರೆಗಾಳಿ ಬೀಸಲು ಕೊರೆಯುವ ಮೈಚಳಿ
ಬೆರಗಿನ ಬೆಳಕ ಕಿರಣಕೆ| ಮನಸೋತು|
ಭರಪೂರ ಕೆಲಸ ಮಾಡ್ಯಾಳ||

ಬೋಳಾದ ಗಿಡಮರ ಢಾಳಾಗಿ ಚಿಗುರಲು 
ನಾಳೆಯ ದಿನದಿ ಫಲಬಿಟ್ಟು ಮಾಗಿರಲು 
ಬಾಳೆಲ್ಲಾ  ಹಸನು ಕಂಡಾವ ||

ಚೈತ್ರದ ಮಾಸದಿ ಛತ್ರದಿ ಸಂಭ್ರಮ
ಮಿತ್ರರು ಕೂಟ ಸೇರುತ | ಜೊತೆಗೂಡಿ|
ಪತ್ರದಿ ಕುಶಲ ಕೇಳ್ಯಾರ||

ಬಿಸಿಲನ್ನು ಬರಮಾಡಿ ಕುಸಿಯದೆ ಬಾಳಲ್ಲಿ
ಹುಸಿನಗೆ ಬೀರಿ ಮಾತಾಡಿ | ಬೆರೆಯುತ|
ತುಸುವೊತ್ತು ಕಾಲ ಕಳೆದಾಗ||

ಹಂಡೆಯ ನೀರಿನ  ಕೆಂಡದ ಮಜ್ಜನ
ಕಂಡಾಗ ಮನವು ಹಿಗ್ಗುತ | ತಾಸ್ಹೊತ್ತು|
ಥಂಡಿಯ ಕಳೆದ ಸಂತsಸ||

ಲಕ್ಷ್ಮೀ ವಿ ಭಟ್
ಮಂಜೇಶ್ವರ.

--------------
ವಿಷಯ : ಬಸುರಿ ಬಯಕೆ

ಶೀರ್ಷಿಕೆ :ನನ್ನ ತಂಗ್ಯಮ್ಮ
====================
ಸೀಮಂತ ಸಡಗರ ಮನೀಗಿ ಬಂದೈತಿ
ಮನೆಯಲ್ಲಿ ಹೆಂಗಳೆಯರು ತುಂಬ್ಯಾರ /ನನ ತಂಗಿ
ನಗು ನಗುತಾ ಮಾತಲ್ಲಿ ಹರಟ್ಯಾಳ 

ಮನೆಮಂದಿ ಸಡಗರದಿ ಕುಣಿದಾರ
ತೊಳೆದು ಒಪ್ಪ ಓರಣ ಮಾಡ್ಯಾರ /ಚೆಲುವಿ
ನನ ತಂಗಿ ಕಣ್ತುಂಬಿ ನಿಂತ್ಯಾಳ

ಹಸಿರ ಸೀರೆಯ ಉಟ್ಯಾಳ
ಚೆಲುವಿಂದ ಅರಳಿ ನಿಂತ್ಯಾಳಾ /ತಂಗ್ಯಮ್ಮ
ಊರಿಗೆ ಸುಂದರಿ ಆದ್ಯಾಳ

ಹೋಳಿಗೆ ಚಕ್ಲಿ ಸಿಹಿ ಕಡುಬು ಬಡಿಸ್ಯಾರ
ಮುತ್ತೈದೆಯರೆಲ್ಲ ಹಳದಿ ಕುಂಕುಮ ಹಚ್ಯಾರ /ಚೆಲುವಿ
ನನ ತಂಗಿ ಸಂತಸದಿ ಕೂಡ್ಯಾಳ

ಊರ ಮುತ್ತೈದೆಯರೆಲ್ಲ ಸೇರಿ ಆರತಿ ಬೆಳಗ್ಯಾರ
ಲಕ ಲಕನೆ ಸೋಂಪಾಗಿ ಹೊಳೆದ್ಯಾಳ /ನನ ತಂಗಿ
ನಗು ನಗುತಾ ತಿಂಡಿಯ ಸವಿದ್ಯಾಳ

ಹೆಂಗಳೆಯರೆಲ್ಲ ಸೋಬಾನೇ ಹಾಡ್ಯಾರ
ಬಸುರಿ ಬಯಕೆಯ ತೀರಿಸ್ಯಾರ /ಚೆಲುವಿ
ನನ ತಂಗಿ ತುಂಬಾ ಖುಷಿ ಪಟ್ಟಾಳ

ಗಂಡನ ಮನೆಯಿಂದ ತವರಿಗೆ ಹೊರಟ್ಯಾಳ
ಬಸುರಿ ಬಯಕೆಯಲಿ ಮಿಂದ್ಯಾಳ/ತಂಗ್ಯಮ್ಮ
ಚಂದಾಕಿ ಮಗುವ ಹೆರಲು ಹೊರಟ್ಯಾಳ

✍️ ಪುಷ್ಪ ಪ್ರಸಾದ್ ಉಡುಪಿ

--------------

ವಿಷಯ: ಹೇಮಂತ ಋತುವಿನ ಚಳಿ
  ಹೊಂದಿಸುತ ಬದುಕನ್ನು
 
ಆಗಸದ ತುಂಬೆಲ್ಲ ಹೊಗೆಯಂತೆ ಕಾಣುತಿದೆ
ಸಾಗದೆಯೆ ಹಿಡಿದು ಹೆಣಗಿದರೆ ಜೊತೆಯಲಿ/
ಸಾಗುತಲೆ ಬರದು ಹೊಂಬಿಸಿಲು//

ಗಡಗಡನೆ ನಡುಗುತಲಿ ದೇಹವನು ಮುಚ್ಚುತಲಿ
ದಡಬಡನೆ ಎದ್ದು ನೋಡ್ಯಾರ ದಿನಕರನ/
‌ಸಡಗರದಿ ಜಳಕ ಮಾಡ್ಯಾರ//

ಬಿಸಿಯಾದ ಪಾನೀಯ ಕುಡಿಯುತ್ತ ಚಳಿಗಾಗಿ
ಕಸಿವಿಸಿಲಿ ರೊಟ್ಟಿ ಮೆಲ್ಲುತಲಿ ರೈತಾರು/
ಮುಸುಮುಸುನೆ ನಗುತ ಹೊಂಟಾರು//

ಮಾಗಿಯಲಿ ತೂಗುತಲಿ ಬಾಗುತಲಿ ಜನರೆಲ್ಲ
ತೇಗುವರು ಎಣ್ಣೆ ತಿಂಡಿಯನು ತಿನ್ನುತಲಿ/
ಸಾಗುವರು ನರರು ಸಂತಸದಿ//

ತಾಯವ್ವ ಗಿಂಡಿಯೊಳು ನೀರನ್ನು ಹಿಡಕೊಂಡು
ಕಾಯಕವ ನೆನೆದು ಹಟ್ಟಿಯಾ ಕಪಿಲೆಯನು/
ಮಾಯಕದ ಹಾಲ ಹಿಂಡ್ಯಾಳ//

ತಂಪಾದ ನೊರೆಹಾಲ  ನಾಗನಿಗೆ ಎರೆದಾರ
ಸೊಂಪಾಗಿ ಬಿರಿದ ಸಂಪಿಗೆಯ ಮುಡಿಗಿಟ್ಟು/
ಇಂಪಾಗಿ  ಹಾಡು ಹಾಡ್ಯಾರ//


ಕಾಲಕ್ಕೆ ಸರಿಯಾಗಿ ಹೊಂದಿಸಿ ಬದುಕನ್ನು
ತಾಳುತಲಿ ನಾವು ಕಟ್ಟೋಣ ಜೀವನವ/
ಸಾಲವನು ಬಿಟ್ಟು ಬಾಳೋಣ//

✍️ರತ್ನಾ ಕೆ.ಭಟ್ ತಲಂಜೇರಿ
       ದ.ಕನ್ನಡ,ಬಂಟ್ವಾಳ
--------------

 ಜನಪದ ಶೈಲಿಯ ತ್ರಿಪದಿಯಲ್ಲಿ ಕವನ ರಚನೆ
 ವಿಷಯ :ಬಸುರಿಯ ಬಯಕೆ
 ಶೀರ್ಷಿಕೆ :ಕನಸಿನ ಕೂಸು 

 ಬಸುರಿಯ ಬಯಕೆ ಹುಳಿಕಾಯಿ ತಿನ್ನೋಕೆ
 ಆಸೆಯ ಹುಟ್ಟಿತು ಮನಕೆ ಅಣ್ಣಯ್ಯ 
ಬಂದಾನು ಮಿಡಿಕಾಯಿ ನೆಲ್ಲಿಕಾಯಿ ತಂದಾನು

 ಒಂದೊಂದು ತಿಂಗಳು ಆಕೆಯ ಕನಸಿನ
 ಜಗದೋಳು ಹೆಜ್ಜೆಯ ಇಟ್ಟಳು ಗೆಜ್ಜೆಯ
 ಸದ್ದಿಗೆ ಕನಸನು ಕಟ್ಯಾಳು ಗೌರವ್ವ

 ಅಮ್ಮನ ಮಡಿಲಲ್ಲಿ ಮಗುವಾಗಿ ಬಯಕೆಯ
ಹೇಳುವೆ ತಾಯ್ತನ ಕೇಳುತ್ತಾ ಹೇಳುತ್ತಾ
 ಆನಂದಿಸಿ ಅನುಭವಿಸುವೆ ಬಸುರಿಯಾಗಿ

 ಪತಿರಾಯನ ಕರೆದಳು ನಾಚುತ್ತ ನುಡಿದಳು
ಮೆಲ್ಲಗೆ ಕೇಳುವಳು ಮಲ್ಲಿಗೆ ಮುಡಿಸುವೆಯಾ
 ಕಂದನ ಜೊತೆ ಮಾತನಾಡುವೆಯ ಪತಿದೇವ

 ಹಸಿರು ಸೀರೆಯ ಉಡುವ ಕಾತುರ
ಬಸುರಿ ಸೀಮಂತಗೆ ಹಸಿರು ಬಳೆಯ
 ಕೈತುಂಬಾ ಆಸೆಯ ಬುತ್ತಿ ಮನ ತುಂಬಾ

ಕೂಸು ಹುಟ್ಟುವ ಮುನ್ನವೆ ಹೆಸರಿಡುವ 
ಕಾತುರ ಏನೆಂದು ಹೆಸರಿಡಲಿ ನನ್ನ ಕಂದನಿಗೆ 
ಕನಸಿನ ರೆಕ್ಕೆಯ ಕಟ್ಟಿ ಗೌರಿಯು ನಿಂದಾಳ

 ಬಸುರಿ ಬಯಕೆಗೆ ಕೊನೆಯಿಲ್ಲ ಆಸೆಗೆ ತವರು
ಮನೆಯ ಗೌರವಿಸಿ ಗಂಡನ ಮನೆಯ ಬೆಳಗಿಸಿ 
 ಎಲ್ಲರ ಕನಸನ್ನು ನನಸಾಗಿಸ್ಯಾಳು

ನವ್ಯ ಪ್ರಸಾದ್ ನೆಲ್ಯಾಡಿ
  ಅಣ್ಣುಗುಂಡಿ

Thursday, December 23, 2021

ಕವಿ ಕೃತಿ ಪರಿಚಯ : ಮಲೆನಾಡಿನ ಮಡಿಲಿನಲ್ಲಿ.. ಹೊರನಾಡಿನ ಹೊನಲಲ್ಲಿ..



ಕವಿ- ಕೃತಿ ಪರಿಚಯ / ಮಕ್ಕಳ ಸಾಹಿತ್ಯ ಕೃತಿಗಳ ವಿಮರ್ಶೆ ಅಭಿಪ್ರಾಯಗಳು 

ಕೃತಿ: ಮಲೆನಾಡಿನ ಮಡಿಲಿನಲ್ಲಿ.. ಹೊರನಾಡಿನ ಹೊನಲಲ್ಲಿ

ಪ್ರಕಾರ : ಪ್ರಬಂಧ ಹಾಗೂ ಪ್ರವಾಸ ಕಥನ

ಲೇಖಕರು : ವೀಣಾ ಕೃಷ್ಣಮೂರ್ತಿ , ದಾವಣಗೆರೆ

ಪ್ರಕಾಶನ: ಸಂಸ್ಕೃತಿ ಪ್ರಕಾಶನ, ದಾವಣಗೆರೆ


ಕವಿಪರಿಚಯ ಹಾಗೂ ಪುಸ್ತಕ ಪರಿಚಯ ಮಾಡಿದವರು

ಲೇಖಕಿ : ಸಿಂಧು ಭಾರ್ಗವ ಬೆಂಗಳೂರು


       ಶ್ರೀಮತಿ ವೀಣಾ ಕೃಷ್ಣಮೂರ್ತಿ ಅವರು ತಾವು ಹುಟ್ಟಿದ ಊರು, ಮಲೆನಾಡಿನ ಸುಂದರ ಚಿತ್ರಣವನ್ನು ಓದುಗರಿಗೆ ಉಣಬಡಿಸಿದ್ದಾರೆ. ಮಲೆನಾಡಿನ ನಿಸರ್ಗ ವೈಭವವನ್ನು ಕಣ್ಕಟ್ಟುವಂತೆ ನಮಗೆ ತಿಳಿಸಿಕೊಟ್ಟಿದ್ದಾರೆ. ಅಲ್ಲಿನ ಜನರ ಬದುಕು, ಆಚಾರ-ವಿಚಾರಗಳು, ಹಬ್ಬ ಹರಿದಿನಗಳು, ಬೆಳೆಯುವ ಬೆಳೆಗಳು, ಕಾಡಿನಲ್ಲಿ ಸಿಗುವ ಹಣ್ಣುಗಳು, ತೋಟದಲ್ಲಿ ಬೆಳೆವ ಬೆಳೆಗಳು ಮರಗಳು ವಿವಿಧ ಜಾತಿಯ ಹೂವುಗಳು, ಹಣ್ಣುಗಳು, ತರಕಾರಿ , ವಿವಿಧ ಜಾತಿಯ ಪ್ರಾಣಿಪಕ್ಷಿ ಗಳು, ಹೀಗೆ ಒಂದೂ ಬಿಡದೆ ಎಳೆಎಳೆಯಾಗಿ ತಿಳಿಸಿದ್ದಾರೆ. ಆಗಿನ ಕಾಲದ ಮದುವೆ, ಮನೆಯಲ್ಲಿಯೇ ಮಾಡುವ ಹಪ್ಪಳ ಸೆಂಡಿಗೆ, ಮಾವಿನಕಾಯಿ ಉಪ್ಪಿನಕಾಯಿ, ಕಾಯಿರಸ ಉಪ್ಪಿಗೆ ಹಾಕಿಡುವ ಹಲಸಿನ ಸೊಳೆ, ಮಾವಿನ ಮಿಡಿ. ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಓದುವಾಗಲ ನಮ್ಮ ಬಾಲ್ಯದ ನೆನಪುಗಳು ಕಣ್ಣ ಎದರು ಮೂಡುತ್ತದೆ.


ಈ ಪುಸ್ತಕದ ವಿಶೇಷವೇ ಹಾಗೆ. ನಗರದ ಕಡೆಗೆ ಮುಖ ಮಾಡಿದ ಮಕ್ಕಳಿಗೆ ಮೊಮ್ಮಕ್ಕಳಿಗೆ ಕೈಪಿಡಿಯಾಗಲೆಂದು ಹೊರ ತಂದ ಕೃತಿ ಇದಾಗಿದೆ. ಹಾಗಾಗಿ  ಬಾಲ್ಯದ ನೆನಪುಗಳ ನೆನಪಿಸಿಕೊಂಡು ಬಹಳ ತಾಳ್ಮೆಯಿಂದ ಅಕ್ಷರ ರೂಪಕ್ಕಿಳಿಸಿದ್ದಾರೆ ಎನ್ನಬಹುದು.

 "ಘಮ್" ಎನ್ನುವ ಎಸಳುಗಳಿಂದ ಕೂಡಿದ ಕೆಂಡ ಸಂಪಿಗೆ ಎಂದರೂ ತಪ್ಪಾಗಲಾರದು.ಕಅಡಿನೊಳಗೋ, ತೋಟದಲ್ಲೋ ಆಗಸದೆತ್ತರಕ್ಕೆ ಬೆಳೆದು ನಿಂತ ಕೆಂಡಸಂಪಿಗೆ ಮರದಲ್ಲಿ ಒಂದೆರಡು ಹೂವರಳಿದರೂ ಸಾಕು, ಅದರ ಕಂಪು ನಾಸಿಕಕ್ಕೆ ಬಂದು ಹೊಡೆಯುತ್ತದೆ. ನಾವು ಅದರ ಜಾಡು ಹಿಡಿದು ಹೋಗುತ್ತೇವೆ. ಇದು ಕೂಡ ಹಾಗೆಯೇ. ಅದೇ ತರಹ ಈ ಪುಸ್ತಕ ಎನ್ನಬಹುದು. ಕರಾವಳಿ ಮತ್ತು ಮಲೆನಾಡು ಅವಳಿ ಜವಳಿಯರಂತೆ. ಎಲ್ಲ ಆಚರಣೆಗಳು, ಆಹಾರಕ್ರಮ, ಬೆಳೆಗಳು, ಹಬ್ಬ ಹಾಡಿ ದೀಪಾವಳಿ, ಯುಗಾದಿ ಹಬ್ಬಗಳು ಸೇರಿದಂತೆ ನಿಸರ್ಗ ಸೌಂದರ್ಯವನ್ನು ನಾವು‌ ಕಣ್ತುಂಬಿಸಿಕೊಳ್ಳಬಹುದು. ಇಂತಹ ಪುಣ್ಯಭೂಮಿಯಲ್ಲಿ ಬಾಲ್ಯವನ್ನು ಕಳೆಯುವ ಭಾಗ್ಯ ಸಿಕ್ಕಿರುವುದೇ ಒಂದು ಸುಕೃತ. ತಮ್ಮ ಅಜ್ಜಿ ಮನೆಯ ಅನುಭವಗಳು, ಬಾಲ್ಯದಲ್ಲಿ  ಹಿರಿಯರಿಂದ ದೊರೆತ ಸಂಸ್ಕಾರ, ಅಭಿರುಚಿ ಆಸಕ್ತಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಇದನ್ನು ಓದಿದ ಪ್ರತಿಯೊಬ್ಬರೂ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳದೇ ಇರಲಾರರು. ಲೇಖಕಿ ವೀಣಾ ಕೃಷ್ಣಮೂರ್ತಿಯವರು ಚಿಕ್ಕಂದಿನಿಂದಲೂ ಸುಧಾ ಬಾಲಮಿತ್ರ ಚಂದಮಾಮದಲ್ಲಿ ಬರುವ ಕತೆ ಕವನಗಳ ಓದುವ ಅಭ್ಯಾಸ ಮಾಡಿಕೊಂಡಿದ್ದರು. ದಾವಣಗೆರೆಗೆ ಮದುವೆ ಆಗಿ ಬಂದರೂ, ಪತಿಯ ಕಾಯಕದ ನಿಮಿತ್ತ ಹತ್ತಾರು ಊರು ಸುತ್ತಿ, ನಿವೃತ್ತಿ ನಂತರ ಈಗ ದಾವಣಗೆರೆಗೆ ವಾಪಾಸಾಗಿದ್ದಾರೆ. ಇದರ ನಡುವೆ ಬರೆಯುವುದನ್ನು ಹವ್ಯಾಸವಾಗಿಸಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಕತೆ ಕವನ, ಲೇಖನಗಳನ್ನು ಚುಟುಕು ಹನಿಗವನಗಳನ್ನು ಬರೆಯುತ್ತಾರೆ. ಪ್ರಸ್ತುತ ದಾವಣಗೆರೆಯಲ್ಲಿ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಂತರದ ಭಾಗವಾಗಿ ಪ್ರವಾಸ ಕಥನವನ್ನು ಕೈಗೆತ್ತಿಕೊಂಡಿರುವ ಲೇಖಕಿ ಮೊದಲ‌ ಮಗಳ ಹೆರಿಗೆಗೆಂದು ನ್ಯೂಯಾರ್ಕ್ ನಗರದ ಕಡೆಗೆ ಪ್ರಯಾಣ ಬೆಳೆಸಿದ ಬಗ್ಗೆ ಸವಿವರವಾಗಿ ಬರೆದಿದ್ದಾರೆ. ದೊಡ್ಡಣ್ಣ ಎಂದೇ ಹೆಸರಾದ ಅಮೇರಿಕಾದಲ್ಲಿ ತಾವು ಕಂಡಂತೆ ತಮ್ಮ ಮೊದಲ ವಿಮಾನ ಯಾನದ ಅನುಭವ, ಮಗಳ‌ ಮನೆಯಲ್ಲಿನ ಅನುಭವ ಹಾಗೂ ಅಲ್ಲಿನ ಪರಿಸರ ಜನರ ಆತ್ಮೀಯತೆ, ನಗರದ ರಸ್ತೆಯಲ್ಲಿನ ಸ್ವಚ್ಛತೆ, ಅಲ್ಲಿನ ಭಾರತೀಯರ ಲೋಕವನ್ನನು ತೆರೆದಿಟ್ಟಿದ್ದಾರೆ.  ಅಷ್ಟೆ ಅಲ್ಲ ನಮ್ಮೆಲ್ಲ ದೇವರುಗಳು ದೇವಾಲಯ ಕಟ್ಟಿಸಿಕೊಂಡು ಅಮೇರಿಕಾದಲ್ಲಿ ಕೂಡ ನೆಲೆಸಿದ್ದಾರೆ. ಅಲ್ಲನ ಜನರ ಭಕ್ತಿ, ಆಧ್ಯಾತ್ಮಿಕ ಜೀವನಕ್ಕೆ ಒಗ್ಗಿಕೊಂಡ ಬಗೆ ಹೀಗೆ ಎಲ್ಲವನ್ನೂ ವಿಸ್ತಾರವಾಗಿ ಬರೆದಿದ್ದಾರೆ. ನಂತರದಲ್ಲಿ ಎರಡನೇ ಮಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ (ಎಂ.ಎಸ್) ಅದೇ ಅಮೇರಿಕಾಕ್ಕೆ ಬೊಫೆಲೋ ಯೂನಿವರ್ಸಿಟಿ ಗೆ ಸೇರಿದಾಗ ಮತ್ತೆ ಅಮೇರಿಕಾಗೆ ಹೋಗುವ ಅವಕಾಶ ದೊರಕಿದಾಗ ಭೇಟಿ ನೀಡಿ ಅನೇಕ ಸ್ಥಳಗಳನ್ನು ಪರಿಚಯಿಸಿದ್ದಾರೆ. 

ಹಾಗೆ ಅಲ್ಲಿ ಕಂಡ ನಿಸರ್ಗ, ಉದ್ಯಾನವನ, ಜಲಪಾತ, ವರ್ಣಮಯ ಪಟಾಕಿ ಸಿಡಿಸುವ ಬಗೆ, ಮಾರುಕಟ್ಟೆ, ಮಾಲ್ ಗಳು ಅಲ್ಲಿ ಕೂಡ ನಮ್ಮ ದೇಶದ ತರಕಾರಿಗಳು, ಹಣ್ಣುಗಳು, ವಿವಿಧ ಬಗೆಯ ತಿನಿಸುಗಳು ಸಿಗುವುದು ಅಚ್ಚರಿ ಮೂಡಿಸಿತು ಎನ್ನುವರು. ವಿದೇಶಕ್ಕೆ ಹೋಗಿ ಬರುವ ಪ್ರತಿಯೊಬ್ಬರೂ ಹೇಳುವ ಮಾತು " ವಿದೇಶದಲ್ಲಿ  ದುಡ್ಡು ಕೊಟ್ಟರೆ  ನಮ್ಮ ದೇಶದಲ್ಲಿರುವ ಎಲ್ಲವೂ ಸಿಗುತ್ತದೆ. ತಂದೆ ತಾಯಿಯನ್ನು ಬಿಟ್ಟು..." ಎಂದು. 

ಲೇಖಕಿ ಸಿಂಧು ಭಾರ್ಗವ ಬೆಂಗಳೂರು


ಹೀಗೆ ತಮ್ಮ ಹತ್ತು ಹಲವು ಅನುಭವಗಳನ್ನು ಬರೆದು ಪುಸ್ತಕ ರೂಪ ನೀಡಿ ನಮಗೂ ಓದಲು ಅವಕಾಶ ಮಾಡಿದ ಲೇಖಕಿ ವೀಣಾ ಕೃಷ್ಣಮೂರ್ತಿ ಅವರಿಗೆ ಶುಭಹಾರೈಕೆಗಳು💐

Saturday, December 18, 2021

ಮಕ್ಕಳ ನೀತಿಕತೆಗಳ ಸಂಗ್ರಹ ಗಾದೆಮಾತು ಕೂತು ತಿಂದರೆ ಕುಡಿಕೆ ಹೊನ್ನು ಸಾಲದು

ಗೂಗಲ್ ಇಮೇಜ್ ಚಿತ್ರಕೃಪೆ

ಗಾದೆಮಾತು : ಕೂತು ತಿಂದರೆ ಕುಡಿಕೆ ಹೊನ್ನು ಸಾಲದು. 

ಮಕ್ಕಳ ಸಾಹಿತ್ಯ ವಿಭಾಗದಲ್ಲಿ ನೀತಿಕತೆಗಳ ಸಂಗ್ರಹ.

ಬತ್ತದ ತೊರೆ ಸ್ನೇಹ ಬಳಗ,ಬೆಂಗಳೂರು

ಕೋಟ ಶಿವರಾಮ ಕಾರಂತರ ನೆರಳಿನಡಿಯಲ್ಲಿ... 


ಸ್ಪರ್ಧೆ ಮಕ್ಕಳ ನೀತಿ ಕತೆಗಳು

ವಿಷಯ--ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು.

******************************

      ದುಡಿತದಲ್ಲಿದೆ ಸುಖ

******************************

ಮಕ್ಕಳೇ,ಹಣವಿದೆಯೆಂದು, ಕೈಕಾಲು ಗಟ್ಟಿ ಇದ್ದು, ದುಡಿದುಣ್ಣುವ ಕಾಲದಲ್ಲಿ, ವಿಲಾಸಿ ಜೀವನ ನಡೆಸುತ್ತ,ಮೋಜು ಮಸ್ತಿಯಲ್ಲಿ, ಇದ್ದ ಹಣವನ್ನೇ ಖಾಲಿ ಮಾಡುತ್ತ ಹೋದರೆ,ಹಣದ ಗುಡಾಣವಿದ್ದರೂ ಕರಗಿ ಹೋಗುವದು. ಆದ್ದರಿಂದ ಹಿರಿಯರು ತಮ್ಮ ಅನುಭವ, ಅನುಭಾವ ಆಧರಿಸಿ, ಮುಂದಿನ ಪೀಳಿಗೆಯ ಹಿತಕ್ಕೋಸ್ಕರ  " ಕೂತು ತಿಂದರೆ ಕುಡಿಕೆ ಹೊನ್ನು ಸಾಲದು " ಎಂಬ ಗಾದೆಮಾತನ್ನು ಹೇಳಿದ್ದಾರೆ.

           ಈಗ ನಿಮಗೆಲ್ಲಾ ಈ ಕುರಿತಾಗಿ ಕಥೆ ಹೇಳುವ ಸಮಯ. ಗಮನವಿಟ್ಟು ಕೇಳಿ. ಹೀಗೊಂದು ಸುರಪುರ ಎಂಬ ಹಳ್ಳಿ. ಹೆಸರಿಗೆ ತಕ್ಕಂತೆ ಸುರಪುರ ಸೃಷ್ಟಿ ಸೌಂದರ್ಯಕ್ಕೆ ಹೆಸರಾದ ಊರು.ಹಿಂದೆ ಅಲ್ಲಿ ರಾಜರ ಆಳ್ವಿಕೆ ಇತ್ತೆಂದೂ ಜನರಾಡಿಕೊಳ್ಳುತ್ತಿದ್ದರು. ಆದರೆ ಅಲ್ಲಿ ಇರುವ ಬಹಳ ಜನ ಬಡವರು. ಅವರಲ್ಲಿ ಕಣ್ಣ ಎಂಬ ವ್ಯಕ್ತಿ, ತನ್ನ ಹೆಂಡತಿ ಮತ್ತು ಮಗಳೊಡನೆ ವಾಸವಾಗಿದ್ದ. ಅವನು ದಿನಾ ಹೊತ್ತು ಹುಟ್ಟುವ ಮೊದಲೇ ಎದ್ದು, ಹೆಂಡತಿ ಕೊಟ್ಟ ಗಂಜಿ ಕುಡಿದು, ದೂರದ ಕಾಡಿಗೆ ಕಾಲ್ನಡಿಗೆಯಲ್ಲಿ ಹೋಗಿ, ಒಣ ಕಟ್ಟಿಗೆ ಸಂಗ್ರಹಿಸಿ ತಂದು, ಪಟ್ಟಣದಲ್ಲಿ ಮಾರಾಟಮಾಡುತ್ತಿದ್ದ. ಮಕ್ಕಳೇ,ಆಗಿನ ಕಾಲದಲ್ಲಿ ಈಗಿನಂತೆ, ಗ್ಯಾಸ್ ಒಲೆ, ಕರೆಂಟ್ ಒಲೆ ಇರಲಿಲ್ಲ.ಎಲ್ಲರೂ ಉರುವಲಕ್ಕೆ ಕಟ್ಟಿಗೆ ಖರೀದಿಸುತ್ತಿದ್ದರು.ಕಟ್ಟಿಗೆ ಮಾರಿ ಬಂದ ಹಣದಿಂದ ಕಣ್ಣ, ತೃಪ್ತಿಯಿಂದ ಜೀವನ ನಡೆಸುತ್ತಿದ್ದ.ಹೀಗೇಯೆ ಹಲವು ವರ್ಷ ಕಳೆಯಿತು.ಕಣ್ಣನ ಹೆಂಡತಿಗೆ ನಾವು ಎಲ್ಲರಂತೆ ಐಷಾರಾಮಿ ಜೀವನ ಮಾಡಬೇಕೆಂಬ ಹಂಬಲವಿದ್ದರೂ, ಬರುವ ಅಲ್ಪ ಹಣದಲ್ಲೇ ದಿನದೂಡುತ್ತಿದ್ದಳು. ಹೀಗಿರುವಾಗ ಒಂದು ದಿನ ಎಂದಿನಂತೆ ಕಣ್ಣ ಚುಮುಚುಮು ಬೆಳಗು ಕಾಡಿಗೆ ಹೊರಟ. ಆ ದಿನ ಈಗಿನಂತೆಯೇ ಮಾರ್ಗಶಿರ ಮಾಸ. ಎಲ್ಲೆಡೆ ಮಂಜು ಕವಿದಿತ್ತು. ಚಳಿಯಲ್ಲಿ ನಡುಗುತ್ತಲೇ ಕಣ್ಣ ನಡೆದ. ಆ ದಿನ ಅವನಿಗೆ ಅದೃಷ್ಟದ ದಿನ. ಆಗೆಲ್ಲಾ ಕಳ್ಳಕಾಕರು ಇದ್ದರಲ್ಲವೇ ? ಅವರೇ ಯಾರೋ ಗಡಿಬಿಡಿಯಲ್ಲಿ ಬಂಗಾರದ ನಾಣ್ಯ ತುಂಬಿದ ಬಿಂದಿಗೆಯನ್ನು ಬೀಳಿಸಿ ಹೋಗಿದ್ದರು.ಕಣ್ಣ ನೋಡಿ ಬಹಳ ಸಂತೋಷದಿಂದ ಬಿಂದಿಗೆಯೊಡನೆ ಮನೆಗೆ ಬಂದ. ಅದನ್ನು ನೋಡಿದ್ದೆ ಕಣ್ಣನ ಹೆಂಡತಿಗೆ ನೂರಾರು ಬಯಕೆಗಳು ಚಿಗುರೊಡೆದವು. ಆಕೆ ಮತ್ತೆ ಗಂಡನನ್ನು ಕಾಡಿಗೆ ಹೋಗದಂತೆ ತಡೆದಳು. ಇದ್ದ ನಾಣ್ಯ ಮಾರಿ, ಮನೆ ಕಟ್ಟಿಸಿದರು. ಮಗಳ ಮದುವೆ ಮಾಡಿದರು. ತಿಂದುಂಡು ಮಜವಾಗಿ ಕಾಲಕಳೆದರು. ಕ್ರಮೇಣ ಸಿಕ್ಕ ನಾಣ್ಯಗಳು ಖಾಲಿಯಾದವು. ಹೆಂಡತಿಯ ಮೈಮೇಲೆ ಮಾಡಿಸಿದ ಒಡವೆಗಳು ಗಿರವಿ ಅಂಗಡಿಗೆ ಸೇರಿದವು. ಮತ್ತೆ ಜೀವನಕ್ಕೆ ಕಾಡಿನ ಒಣ ಕಟ್ಟಿಗೆಯೇ ಗತಿಯಾಯ್ತು.

            ನೋಡಿದ್ರಾ ಮಕ್ಕಳೇ, ಹಣ ಸಿಕ್ಕಮೇಲೂ ಕಣ್ಣ ಕಟ್ಟಿಗೆ ತಂದು ಮಾರಿ ಜೀವನ ಮುಂದುವರೆಸಿದ್ದರೆ, ಶ್ರೀಮಂತನೆ ಆಗುತ್ತಿದ್ದ.

ನೆನಪಿಡಿ ಮಕ್ಕಳೇ, ಕಾಯಕವೇ ಕೈಲಾಸ. ಕಷ್ಟಪಟ್ಟು ದುಡಿದುಣ್ಣುವದರಲ್ಲಿಯೇ ಸುಖವಿದೆ.


ಶ್ರೀಮತಿ ವಿಜಯಾ ಜಿ ಶೆಟ್ಟಿ

ಸಿರ್ಸಿ (ಉತ್ತರ ಕನ್ನಡ )

ವಿಷಯ:-ಕೂತು ತಿಂದರೆ ಕುಡಿಕೆ ಹೊನ್ನು ಸಾಲದು

ಶೀರ್ಷಿಕೆ:-ದುಡಿಮೆ


 ಒಂದೂರಲ್ಲಿ ರಾಮ ಸೋಮರೆನ್ನುವ ಅಣ್ಣತಮ್ಮಂದಿರಿದ್ದರು.ರಾಮ ಸೋಮರ ತಂದೆ ಹತ್ತೂರಿನ ಧನಿಕರಾಗಿದ್ದರು. ಅಣ್ಣತಮ್ಮರದ್ದು ವೈಭೋಗದ ಜೀವನವಾಗಿತ್ತು. ತಂದೆ ಗಳಿಸಿದ ಧನಗಳಿಂದ ರಾಮ ಸೋಮರು ವಿದ್ಯಾಭ್ಯಾಸ ಮುಗಿಸಿದರು.ರಾಮ ತಂದೆಯ ವ್ಯಾಪಾರ ವಹಿವಾಟುಗಳನ್ನು ನೋಡಿಕೊಂಡರೆ ಸೋಮ ತಿಂದುಂಡು ಆರಾಮವಾಗಿ ತಿರುಗಾಡಿಕೊಂಡು ಕಾಲಕಳೆಯುತಿದ್ದ.ಇದನ್ನೆಲ್ಲಾ ಗಮನಿಸುತ್ತಿದ್ದ ತಂದೆಗೆ ಸೋಮನದ್ದೇ ಚಿಂತೆಯಾಗಿತ್ತು. ಎಷ್ಟೇ ಬುದ್ದಿವಾದ ಹೇಳಿದರೂ ಸೋಮನ ತಲೆಗೆ ಹೋಗುತ್ತಿರಲಿಲ್ಲ. ಕೊನೆಯದಾಗಿ ತಂದೆ ಇಬ್ಬರಿಗೂ ಮದುವೆ ಮಾಡುವ ಯೋಚನೆ ಮಾಡಿದ. ಮದುವೆಯ ನಂತರವಾದರೂ ಸೋಮ ಸರಿಯಾಗಬಹುದು, ದುಡಿಯುವ ಮನಸ್ಸು ಮಾಡಬಹುದು ಎನ್ನುವುದು ತಂದೆಯ ಲೆಕ್ಕಾಚಾರವಾಗಿತ್ತು. ಹೀಗೆ ದಿನಗಳುರುಳಿ ಇಬ್ಬರಿಗೂ ಮದುವೆಯು ಆಯ್ತು.ಆದರೂ ಸೋಮನಲ್ಲಿ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಸೋಮನ ಹೆಂಡತಿಯೂ ಗಂಡನ ಬೇಜವಾಬ್ದಾರಿ ವರ್ತನೆಗೆ ರೋಸಿ ಹೋಗಿದ್ದಳು. ಯಾವುದೇ ಖರ್ಚುವೆಚ್ಚಗಳಿಗೆ ಮಾವ ಅಥವಾ ಭಾವನ ಎದುರು ಕೈಯೊಡ್ಡಬೇಕಾಗಿತ್ತು.ಹೆಂಡತಿಯ ಬುದ್ದಿವಾದವು ಸೋಮನ ಮನಸ್ಸಿಗೆ ನಾಟಲೆ ಇಲ್ಲ. ಹೇಳಿ ಹೇಳಿ ಸಾಕಾದ ಹೆಂಡತಿ ನಂತರದ ದಿನಗಳಲ್ಲಿ ಮೌನವಾದಳು.


ಸೋಮನ ಚಿಂತೆಯಲ್ಲಿಯೇ ತಂದೆ ಹಾಸಿಗೆ ಹಿಡಿದರು. ಒಂದುದಿನ ಸೋಮನನ್ನು ಬಳಿ ಕರೆದು "ನೋಡು ಮಗನೆ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು.ನನ್ನ ಅಜ್ಜ, ಅಪ್ಪ ನಾನು ಕಷ್ಟ ಪಟ್ಟು ದುಡಿದು ಸಂಪಾದಿಸಿರುವ ಧನಕನಕಗಳು ಎಷ್ಟು ಸಮಯ ಬರಲು ಸಾಧ್ಯ. ಕಷ್ಟಪಟ್ಟು ದುಡಿದರೆ ಮಾತ್ರ ಫಲ ಸಿಗಲು ಸಾಧ್ಯ. ನೀನು ಕೇಳಿಲ್ಲವೇ ಕೈ ಕೆಸರಾದರೆ ಬಾಯಿ ಮೊಸರು ಅಂತಾ. ಇನ್ನಾದರೂ ದುಡಿಮೆಯ ಕಡೆ ಗಮನ ಕೊಡು ಎನ್ನುತ್ತಾ ಮಗನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲ್ಲೇ ಪ್ರಾಣಬಿಟ್ಟರು.


ಉಂಡಾಡಿ ಗುಂಡನಂತೆ ತಂದೆಯ ಹಣದಲ್ಲೇ ಮೋಜು ಮಸ್ತಿ ಮಾಡುತ್ತ ದಿನಕಳೆಯುತ್ತ ಇದ್ದ ಸೋಮನನ್ನು ಹೇಗಾದರೂ ಮಾಡಿ ಸರಿಮಾಡಬೇಕು ಹೀಗೆ ಆದರೆ ಮುಂದೆ ಅವನ ಹೆಂಡತಿ ಮಕ್ಕಳ ಗತಿಯೇನು ಎಂದರಿತ ರಾಮ ತಂದೆಯ ಅಸ್ತಿಯನ್ನು ಪಾಲು ಮಾಡುವ ನಿರ್ಧಾರ ಮಾಡಿದ. ತಮ್ಮನಲ್ಲಿ ನಿನಗೆ ಸೇರಬೇಕಾದ ಆಸ್ತಿ ನಿನಗೆ ಕೊಡುತ್ತೇನೆ. ಮುಂದಿನ ನಿನ್ನೆಲ್ಲ ಖರ್ಚುವೆಚ್ಚಗಳನ್ನು ನೀನೇ ನೋಡಿಕೊಂಡು ಜೀವನ ನಡೆಸು ಎಂದ. ಸೋಮನಿಗೂ ಸಂತೋಷವಾಯಿತು. ಹೇಗೂ ತಂದೆಯ ಆಸ್ತಿ ಇದೆ ನನಗೆ ಹೇಗೆ ಬೇಕೋ ಹಾಗೇ ಖರ್ಚು ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ. ದಿನಗಳು ಕಳೆದಂತೆ ಹಣವು ಕರಗತೊಡಗಿತು. ಯಾರಲ್ಲೂ ಹೇಳೋ ಹಾಗೂ ಇಲ್ಲ ಕೇಳೋ ಹಾಗೂ ಇಲ್ಲ. ಖರ್ಚಿಗೆ ಹಣವಿಲ್ಲದೆ ಸೋಮು ಒದ್ದಾಡಿದ.ಕೂಡಿಟ್ಟ ಹಣ ಆಸ್ತಿ ಎಷ್ಟು ದಿನ ಬರಲು ಸಾಧ್ಯ.ಆಗವನಿಗೆ ತಂದೆ ಹೇಳಿರುವ ಮಾತಿನ ಮಹತ್ವದ ಅರಿವಾಯಿತು. ಹೌದು ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎನ್ನುವ ಹಿರಿಯರ ಮಾತು ಸುಳ್ಳಲ್ಲ. ಅಣ್ಣ ಕಷ್ಟಪಟ್ಟು ದುಡಿದು ಆರಾಮದ ಜೀವನ ಸಾಗಿಸುತಿದ್ದಾನೆ. ಆದರೆ ನಾನು ಇಷ್ಟು ವರುಷ ತಿರುಗಾಡಿಕೊಂಡೆ ತಿಂದು ಇಷ್ಟು ವರ್ಷದ ಜೀವನ ಹಾಳುಮಾಡಿಕೊಂಡೆ. ನನ್ನನ್ನೇ ನಂಬಿ ಬಂದಿರುವ ಹೆಂಡತಿ ಬೇರೆಯವರ ಮುಂದೆ ಕೈಚಾಚುವಂತೆ ಮಾಡಿದೆ. ಛೇ ಮುಂದೆ ಹೀಗಾಗಬಾರದೆಂದು ದೃಢನಿರ್ಧಾರ ಮಾಡಿದ.ದುಡಿಯಲು ಪ್ರಾರಂಭಿಸಿ ಒಳ್ಳೆಯ ಜೀವನ ನಡೆಸುತ್ತ ಹೆಂಡತಿ ಮಕ್ಕಳೊಂದಿಗೆ ಸಂತೋಷದಿಂದ ದಿನಕಳೆದ.


ಸರಿತಾ ಅಂಬರೀಷ್ ಕುತ್ಪಾಡಿ✍🏻


ಕತೆ ೦೩

ಶ್ರಮವಿರದ ಬಾಳು ಬರೀ ಗೋಳು

----------------------------------------

ಸೋಮ ಮೊದಲಿನಿಂದಲೂ ಸೋಮಾರಿ ಸ್ವಭಾವದವನು. ಹಳ್ಳಿಯಲ್ಲಿ ಗೆಳೆಯರೊಂದಿಗೆ ಅಡ್ಡಾಡಿ ಸಮಯ ಕಳೆಯುತ್ತಿದ್ದನು.ತಂದೆ ದುಡಿದು ಹಾಕಿದ್ದು ತಾಯಿ ರುಚಿ ರುಚಿಯಾಗಿ ಮಾಡಿ ಬಡಿಸಿದ ಅಡಿಗೆ ಉಂಡು ,ಗಾಢವಾಗಿ ನಿದ್ದೆ ಮಾಡುವುದು,ಸ್ನೇಹಿತರೊಡನೆ ತಿರುಗಾಟ ಮಾಡುವುದು ,ಹಳ್ಳಿಯ ದೊಡ್ಡ ಅರಳಿ ಮರದ ಕಟ್ಟೆಯಲ್ಲಿ ನಿತ್ಯ ಸಂಜೆಯಿಂದ ಕತ್ತಲಾಗುವವರೆಗೆ ಕಾಡು ಹರಟೆ ಹೊಡೆಯುವುದು ಅವನ ದಿನಚರಿಯಾಗಿತ್ತು. ಅತ್ತ ಸರಿಯಾಗಿ ವಿದ್ಯಾಭ್ಯಾಸದತ್ತಲೂ ಗಮನಕೊಡದೇ ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾಗಿ ಅಲ್ಲಿಗೇ ತನ್ನ ಕಲಿಕೆಗೆ ಪೂರ್ಣವಿರಾಮ ಹಾಕಿಬಿಟ್ಟಿದ್ದನು ತಂದೆಗೆ ಪೂರ್ವಾಜಿತವಾಗಿ ಬಂದಿರುವ ಅಡಿಕೆ ತೆಂಗಿನ ತೋಟ ಹೊಲ ಗದ್ದೆಗಳಿದ್ದು  ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರು.ತಮ್ಮದೇ ಆದ ಸ್ವಂತ ಮನೆಯಿದ್ದು ಜೀವನದ ದಾರಿ ಸುಗಮವಾಗಿತ್ತು.ತಂದೆ ತಾಯಿ ಅಷ್ಟು ಕಷ್ಟ ಪಡುವುದು ನೋಡಿ ಒಮ್ಮೆಯೂ ಅವನಿಗೆ ಸಹಾಯ ಮಾಡಬೇಕು ಎಂದು ಅನ್ನಿಸುತ್ತಿರಲಿಲ್ಲ..ಬುದ್ದಿ ಹೇಳಲು ಹೋದ ತಂದೆ ತಾಯಿಯ ಮೇಲೆ ಮುನಿಸು ತೋರಿಸುತ್ತಾ ಆ ದಿನ ರಾತ್ರಿ ಮನೆಗೆ ಬರುತ್ತಲೇ ಇರಲಿಲ್ಲ.

ಅಂತ ಸಮಯದಲ್ಲಿ ಇವರು ಗಾಬರಿಗೊಂಡು ಇರುವ ಒಬ್ಬ ಮಗ ಹೇಗಾದರೂ ಇರಲಿ ಕಣ್ಣ ಮುಂದೆಯೇ ಇರಲಿ ಎಂದು ಗಲಿಬಿಲಿ ಪಟ್ಟುಕೊಂಡು ಸುಮ್ಮನಾಗಿ ಬಿಡುತ್ತಿದ್ದರು.


ದಿನಗಳು ಹೀಗೆ ಉರುಳುತ್ತಿರಲು ಸೋಮನಿಗೆ ಮದುವೆಯನ್ನು ಮಾಡಬೇಕೆಂದು ಹೆಣ್ಣನ್ನು ಹುಡುಕತೊಡಗಿದರು ಆದರೆ ಕೆಲಸ ಬೊಗಸೆ ಇಲ್ಲದ ಸೋಮನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ ಹೀಗಿರುವಾಗ ಸೋಮನ ತಂದೆಯೂ ಸಹ ಅನಾರೋಗ್ಯದಿಂದ ಹಾಸಿಗೆ ಹಿಡಿದರು.

ತಂದೆಯ ಶೂಶ್ರೂಶೆ, ಔಷಧಿ ಸಂಸಾರದ ಖರ್ಚುಗಳು ಹೀಗೆ ದಿನದಿನಕ್ಕೆ ವೆಚ್ಚ ವಾಗುತ್ತಿತ್ತೇ ಹೊರತು ದುಡಿಮೆ ಇರಲಿಲ್ಲ.


ಹೊಲ ಗದ್ದೆ ನೋಡಿಕೊಳ್ಳುವವರಿಲ್ಲದೇ ಬೆಳೆಯು ಹಾಳಾಗತೊಡಗಿತು.ಹಾಗೆಂದು ಒಮ್ಮೆಯೂ ಸೋಮ ತೋಟದ ಕಡೆಗೆ ಮುಖ ಹಾಕಲಿಲ್ಲ. ಈ ನಡುವೆ ಚಿಕಿತ್ಸೆ ಫಲಿಸದೇ ತಂದೆಯು ಕೊನೆಯುಸಿರೆಳೆದರು.ಸೋಮ ತಾಯಿಯ ಮಾತಿಗೂ ಬೆಲೆ ಕೊಡದೇ ಇದ್ದ ಹೊಲ ಗದ್ದೆಯನ್ನು ಮಾರುತ್ತಾ ಬಂದ ಜೊತೆಗೆ ಜೂಜು ಆಡಲೂ ಕಲಿತಿದ್ದರಿಂದ  ಆಸ್ತಿ ಒಂದೊಂದಾಗಿ ಕರಾಗುತ್ತಾ ಬಂತು. ಕೊನೆಗೆ ಮನೆಯನ್ನು ಕೂಡಾ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿತು.ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು ಎಂಬುದಕ್ಕೆ ಸೋಮ ಒಳ್ಳೆಯ ಉದಾಹರಣೆಯಾದ



ಉಷಾ ದಿನೇಶ್, ಶಿವಮೊಗ್ಗ


ಕತೆ ೦೪ 

ನೀತಿ ಕಥೆ : ವಿಷಯ: ಕೂತು ತಿಂದರೆ ಕುಡಿಕೆ ಹೊನ್ನು  ಸಾಲದು

ಗಾದೆಗಳು ಹಿರಿಯರ ಅನುಭವದ ನುಡಿಗಳು ಅಂಥದೊಂದು ಗಾದೆ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎನ್ನುವುದು ಅಂದರೆ

ಹಿರಿಯರು ಮಾಡಿದ್ದ ಹಣವನ್ನು ಖರ್ಚು ಮಾಡುತ್ತ ದುಡಿಯದೇ ಇರಬಾರದು


ಅಂಥದ್ದೊಂದು ಕಥೆ ನಮ್ಮ ಸವಿತ ಮತ್ತು ರೇವತಿಯದು. ಇಬ್ಬರೂ ಒಂದೇ ಶಾಲೆಗೆ ಹೋಗುತ್ತಿದ್ದರು. ಒಂದೇ ತರಗತಿ ಅವರಾಗಿದ್ದರು. ಇಬ್ಬರೂ ಮಧ್ಯಮವರ್ಗದ ಕುಟುಂಬದವರು ಆದರೂ ಕೂಡ ರೇವತಿ ಮನೆಯವರು ಹಾಗೂ ರೇವತಿ

ಒಂದು ತರಹದ ಒಣ ಜಂಭದ ಆಡಂಬರದ ಜೀವನ ನಡೆಸುತ್ತಿದ್ದರು.

ಸರಿಯುವುದೇ ತಂದೆ ದೊಡ್ಡ ಹೋಟೆಲ್ ನಡೆಸುತ್ತಿದ್ದರು.


ಸವಿತಾ ಮನೆಯವರ ಹಾಗಲ್ಲ, ಚಿಕ್ಕ ಸಾಧಾರಣದ ಹೋಟೆಲ್ ನಡೆಸುತ್ತಿದ್ದರು.

ಸವಿತಾ ಮನೆಯವರು ಸರಳತೆಯಿಂದ ತಾವು ದುಡಿದ ಹಣವನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾಗಬಹುದೆಂದು ಕೂಡಿಡುತ್ತಿದ್ದರು. ಸವಿತಾಳ ತಂದೆ-ತಾಯಿ ಹೋಟೆಲಲ್ಲಿ ದುಡಿಯುತ್ತಿದ್ದರು. ಇದ್ದ ಸವಿತಾಳು ಕೂಡ ಅಕ್ಕಪಕ್ಕದ ಮನೆಯವರಿಗೆ

ಸಹಾಯ ಮಾಡುತ್ತಿದ್ದಳು. ಅಂದರೆ ಏನಾದರೂ ತಂದುಕೊಡುವುದು. ಒಂದು ಮುದುಕ ಮುದುಕಿ ಮನೆಗೆ ಅಡುಗೆಗೆ ಹೋಗೋದು.

ಮತ್ತೆ ಮನೆಗೆ ಬಂದು ಮನೆ ಕೆಲಸ ಮಾಡಲು ಅಮ್ಮನಿಗೆ ಸಹಾಯ ಮಾಡುವುದು

.

     ಹೀಗೆ ರೇವತಿಯ ಆಡಂಬರದ ಜೀವನ ನಡೆಸುತ್ತಿದ್ದಳು. ಸವಿತಾ ಸರಳತೆಯಲ್ಲಿ ಚೆನ್ನಾಗಿ ದುಡಿದು ಸಮಯ ವ್ಯರ್ಥ ಮಾಡದೇ ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಓದಿ, ವಿದ್ಯಾಭ್ಯಾಸವನ್ನು ಕೂಡ ಚೆನ್ನಾಗಿ ಮಾಡುತ್ತಿದ್ದಳು.

         ಹೀಗಿರಲು ಕರೋನ ಎಂಬ ಮಹಾಮಾರಿ ಯಿಂದಾಗಿ ಎಲ್ಲ ಹೋಟೆಲ್ಗಳು ಮುಚ್ಚಿಕೊಂಡು ರೇವತಿ ಅವರ ಅಪ್ಪನ ಹೋಟೆಲ್ ಕೂಡ ಮುಚ್ಚಿದರು.

ರೇವತಿಯ ಮನೆಯವರು ಜನರೊಂದಿಗೆ ಅಷ್ಟೊಂದು ಬೆರೆತಿರಲಿಲ್ಲ.

ಹಾಗಾಗಿ ರೇವತಿಯ ಮನೆಯವರು ದೇಶಕ್ಕೆ ಕರೋನ ಬಂದ್ಮೇಲೆ ದಿನದಿಂದ ದಿನಕ್ಕೆ ಆರ್ಥಿಕತೆಯಲ್ಲಿ ಕುಸಿಯುತ್ತ ಹೋದರು.


ಇತ್ತ ಸವಿತಾಳ ತಂದೆ ಕೂಡ ಹೋಟೆಲ್ ಮುಚ್ಚಬೇಕಾಗಿತ್ತು . ಆದರೆ ಪಕ್ಕದಮನೆಯ  ಮುದುಕ ಮುದುಕಿಯು ಸವಿತಾಳ ಮೇಲಿನ ಪ್ರೀತಿಯಿಂದ ಬೇರೆ ಬೇರೆ ಕಡೆ ಅಡಿಗೆಗೆ ಇವರು ಆಹಾರ ತಯಾರಿಸಿ ಸರಬರಾಜು ಮಾಡುವಂತೆ ಅಣುವು ಮಾಡಿಕೊಟ್ಟರು. ಇದರಿಂದಾಗಿ ಸವಿತ ಮನೆಯವರು ಕರೋನದಿಂದ ಯಾವುದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿಲ್ಲ.



      ಆದರೆ ರೇವತಿ ಮನೆಯವರು ಸೋಮಾರಿಗಳು ಕೂತು ತಿನ್ನುತ್ತಾ, ಆರ್ಥಿಕ ಸಂಕಷ್ಟಕ್ಕೆ ಒಳಗಾದರು.

          ಈ ಕತೆಯಿಂದ ತಿಳಿಯಬೇಕಾದ ನೀತಿ ಎಂದರೆ ನಾವು ದುಡಿದ ಹಣವನ್ನು ಎಲ್ಲಾ ಖರ್ಚು ಮಾಡದೆ ನಾಳಿನ ಜೀವನಕ್ಕಾಗಿ ಸ್ವಲ್ಪವಾದರೂ ಮುಡಿಪಾಗಿಡಬೇಕು.

ಇದರಿಂದ ನಮ್ಮ ಭವಿಷ್ಯಕ್ಕೆ ಒಳ್ಳೆಯದು.

ಎಂ ರಮಿತಾ ಎ ಶೆಟ್ಟಿ ,ಬೈಂದೂರು ಪಡುವರಿ

ಕತೆ ೦೫

ಶೀರ್ಷಿಕೆ: ಸೋಮಾರಿತನ ಒಳ್ಳೆಯದಲ್ಲ


ಶ್ರೀರಾಮನಗರ ಎನ್ನುವ ಒಂದು ಗ್ರಾಮ. ಅಲ್ಲಿ ಕೈಲಾಸ್ ಎನ್ನುವ ಒಬ್ಬ ಹುಡುಗ. ಅವನ ಅಪ್ಪ ಒಬ್ಬ ಎಣ್ಣೆ ವ್ಯಾಪಾರಿ. ಅವನು ಅಗರ್ಭ ಶ್ರೀಮಂತ. ಕೇಳಿದನ್ನೆಲ್ಲ ಅವನು ಮಗನಿಗೆ ಕೊಡುತ್ತಿದ್ದ. ಅವರಿಗೆ ದುಡ್ಡಿನ ಕೊರತೆ ಇರಲಿಲ್ಲ. ಇದರಿಂದ ಮಗನಿಗೆ ಸೋಮಾರಿತನ ತಲೆಗೆ ಹತ್ತಿತ್ತು. ಕೈಲಾಸನ ಅಪ್ಪ ಅವನನ್ನು ಒಬ್ಬ ವೈದ್ಯನನ್ನಾಗಿ ಮಾಡಬೇಕೆಂದಿದ್ದ. ಆದ ಕಾರಣ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿದ. ಕೈಲಾಸನು ಎಂ.ಬಿ.ಬಿ.ಎಸ್. ಪದವಿಧರನಾದ. ಆದರೆ ಅವನು ವೈದ್ಯಕೀಯ ಅಭ್ಯಾಸಕ್ಕೆ ಹೋಗುತ್ತಿರಲಿಲ್ಲ. ಇದನ್ನು ನೋಡಿದ ಅವನ ಅಪ್ಪ ಕೇಳಿದರು, "ಮಗು, ಕೈಲಾಸ್ ನೀನು ವೈದ್ಯಕೀಯ ಅಭ್ಯಾಸ ಏಕೆ ಮಾಡುತ್ತಿಲ್ಲ? ನಿನಗೆ ವೈದ್ಯನಾಗಲು ಇಷ್ಟವಿಲ್ಲವೇ?" "ಅಪ್ಪ, ನನ್ನ ಜೀವನೋಪಾಯಕ್ಕೆ ನೀವು ದುಡಿದು ಕೂಡಿಟ್ಟಿರುವ ಹಣವೇ ಸಾಕಾಗುವುದೆಂದ ಮೇಲೆ ನಾನು ವೈದ್ಯನಾಗುವ ಅಗತ್ಯವೇನಿದೆ? ಕೈಲಾಸನೆಂದ. 


ಅದಕ್ಕೆ ಅಪ್ಪನು ಹೀಗೆಂದ, "ಮಗನೇ, 'ಕೂತು ತಿಂದರೆ ಕುಡಿಕೆ ಹೊನ್ನು ಸಾಲದು' ಎಂಬ ಗಾದೆ ಮಾತಿದೆ. ಕೈಯಲ್ಲಿ ಶಕ್ತಿಯಿರುವಾಗ ದುಡಿಯುವುದನ್ನು ಬಿಟ್ಟು ಸುಮ್ಮನೆ ಕೂತರೆ ಮುಂದೆ ಎಲ್ಲ ಹಣ ಖಾಲಿಯಾದಾಗ ನಮಗೆ ದುಡಿಯಲ್ಲೇ ಬೇಕಾಗುತ್ತದೆ. ಆದ ಕಾರಣ ನಾವು ಸುಮ್ಮನೆ ಯಾವ ಕೆಲಸವನ್ನು ಮಾಡದೆ ಕೂತುಕೊಳ್ಳಬಾರದು". ಕೈಲಾಸ್ ತನ್ನ ಅಪ್ಪನ ಮಾತಿಗೆ ಬೆಲೆಕೊಡಲಿಲ್ಲ. ಒಂದು ದಿನ ಕೈಲಾಸನ ಅಪ್ಪ ಹೃದಯಾಘಾತದಿಂದ ತಿರಿಕೊಂಡರು. ಆದರೆ ಅವನ ಬಳಿ ಅಪ್ಪ ಅವನಿಗಾಗ ಕೂಡಿಟ್ಟಿದ ಸ್ವಲ್ಪ ಹಣವಿತ್ತು. ಕೈಲಾಸ್ ಆ ಹಣದಲ್ಲೇ ತನ್ನ ಜೀವನ ಸಾಗಬಹುದೆಂದು ಅಂದುಕೊಂಡ. ಹೀಗೆ ಆ ಹಣವೆಲ್ಲ ಖಾಲಿಯಾದಾಗ ಕೈಲಾಸನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವನಿಗೆ ಇನ್ನು ಜೀವನವನ್ನು ಹೇಗೆ ನಡೆಸುವುದೆಂಬ ಪ್ರಶ್ನೆ ಕಾಡತೊಡಗಿತು. 


ಈಗ ಅವನಿಗೆ ತನ್ನ ಅಪ್ಪನ ಮಾತಿನ ಅರ್ಥವಾಯಿತು. ಅವನು ಮರುದಿನವೇ ಒಂದು ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿದ್ದ ಜಾಗಕ್ಕೆ ಹೋದ. ಅಲ್ಲಿನ ಮಾಲೀಕನ ಬಳಿ ತನಗೊಂದು ಕೆಲಸವನ್ನು ಕೊಡಲು ಕೇಳಿಕೊಂಡ. ಮಾಲೀಕನು ಅದಕ್ಕೆ ಒಪ್ಪಿ ಕೈಲಾಸನಿಗೆ ಒಂದು ಕೆಲಸವನ್ನು ನೀಡಿದನು. ಕೈಲಾಸನಿಗೆ ಪ್ರತಿದಿನ ೨೦೦ ರೂಪಾಯಿಗಳಷ್ಟು ಕೂಲಿ ಸಿಗುತ್ತಿತ್ತು. ಆದರೆ ಅಷ್ಟು ಕಡಿಮೆ ಹಣದಿಂದ ಅವನಿಗೆ ವೈದ್ಯಕೀಯ ಅಭ್ಯಾಸವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ವೈದ್ಯನಾಗುವ ಕನಸ್ಸನ್ನು ಬಿಟ್ಟುಬಿಟ್ಟನು. ಹೀಗಿರುವಾಗ ಅವನಿಗೆ ಒಂದು ಕೋಚಿಂಗ್ ಸೆಂಟರ್ ಬಗ್ಗೆ ತಿಳಿಯಿತು. ಅಲ್ಲಿ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಐ.ಎ.ಎಸ್., ಯು.ಪಿ.ಎಸ್.ಸಿ., ಮುಂತಾದ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದರು. ಕೈಲಾಸನು ಆ ಕೋಚಿಂಗ್ ಸೆಂಟರ್ಗೆ ದಿನದ ಕೂಲಿ ಮುಗಿಸಿ ಹೋಗಿತ್ತಿದ್ದ. ಕಠಿಣ ಪರಿಶ್ರಮದಿಂದ ಆತ ಐ.ಎ.ಎಸ್. ಪರೀಕ್ಷೆಗೆ ತರಬೇತಿ ಪಡೆದುಕೊಂಡು ಐ.ಎ.ಎಸ್ ಸಂದರ್ಶನಕ್ಕೆ ಹಾಜರಾದನು. ಸಂದರ್ಶನದಲ್ಲಿ ಉತ್ತೀರ್ಣನಾಗಿ ಒಬ್ಬ ಐ.ಎ.ಎಸ್ ಅಧಿಕಾರಿಯಾದನು. ಮಿತ್ರರೇ ಇದರಿಂದ ನಮಗೆ ತಿಳಿಯುವುದೇನೆಂದರೆ ನಾವು ಸೋಮಾರಿತನದಿಂದ ನಮ್ಮ ಅಪ್ಪ ಅಥವಾ ಅಜ್ಜ ಮಾಡಿಹೋದ ಆಸ್ತಿಯನ್ನು ಖರ್ಚುಮಾಡಿದರೆ, ಆ ಹಣವು ಬೇಗ ಖಾಲಿಯಾಗುತ್ತದೆ. ಆದ ಕಾರಣ ನಾವು ನಮ್ಮ ಸ್ವಂತ ಪರಿಶ್ರಮದಿಂದ  ದುಡಿಯಬೇಕು. ಇದನ್ನೇ ನಮ್ಮ ಹಿಂದಿನವರು "ಕೂತು ತಿಂದರೆ ಕುಡಿಕೆ ಹೊನ್ನು ಸಾಲಲ್ಲ" ಎಂಬ ಗಾದೆ ಮಾತಿನ ಮುಖಾಂತರ ನಮಗೆ ತಿಳಿಸಿದ್ದಾರೆ. 


ನೀತಿ: ಸೋಮಾರಿತನ ಒಳ್ಳೆಯದಲ್ಲ. ಪರಿಶ್ರಮದ ಫಲ ಯಾವಾಗಲೂ ಸಿಹಿಯಾಗಿರುತ್ತದೆ. 


ಅರವಿಂದ ಬಾಯಿರಿ, 

ಎಂಟನೇ ತರಗತಿ, 

ಕಾರ್ಮೆಲ್ ಕಾನ್ವೆಙಟ್ ಸ್ಕೂಲ್, 

ಕಾರ್ಮೆಲಾರಾಂ, ಬೆಂಗಳೂರು - ೩೫.


ಕತೆ ೦೬ 

ಶೀರ್ಷಿಕೆ : ಮನಮುಟ್ಟಿದ ಅಮ್ಮನ ಮಾತು

================================

ಪರೀತ ಎಂಬ ಊರಿನಲ್ಲಿ ಸೀತಾ ಎಂಬ ಬಾಲಕಿ ಇದ್ದಳು. ಅವಳು ಚಿಕ್ಕವಳಿದ್ದಾಗಲೇ ಆಕೆಯ ತಂದೆ ತೀರಿ ಹೋಗಿದ್ದರು. ಸೀತಾಳ ಅಮ್ಮನಿಗೆ ‌ ಮಗಳನ್ನು ಸಾಕಲು ಕಷ್ಟವಾದರೂ ಅವಳಿಗೆ ಸ್ವಲ್ಪವೂ ತೊಂದರೆ ಆಗದ ಹಾಗೆ, ಯಾವುದರಲ್ಲೂ ಕೊರತೆ ಬಾರದ ಹಾಗೇ ನೋಡಿಕೊಳ್ಳುತ್ತಿದ್ದರು.


ಇರುವ ಒಬ್ಬ ಮಗಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿಂದ ಪಟ್ಟಣಕ್ಕೆ ಬಂದು ಒಂದು ಖಾಸಗಿ ಶಾಲೆಗೆ ಸೇರಿಸಿದ್ದರು. ಒಂದು ದಿನ ಸೀತಾಳ ತಾಯಿಗೆ ಇದ್ದಕ್ಕಿದ್ದ ಹಾಗೆ ಹುಷಾರು ತಪ್ಪಿತು. ಅದಕ್ಕಾಗಿ ಆಕೆ ಅಮ್ಮನನ್ನು ನೋಡಿಕೊಳ್ಳಲು ಶಾಲೆಗೆ ಎರೆಡು ದಿನ ರಜೆ ಹಾಕಿದಳು. ಅದೇ ಸಮಯದಲ್ಲಿಅವಳಿಗೆ ಪರೀಕ್ಷೆಗಳು ಶುರುವಾಗಿದ್ದವು. ಅವಳಿಗೆ ಯಾರು ಸಹ ಹಿಂದಿನ ತರಗತಿಯಲ್ಲಿನಡೆದ ಪಾಠಗಳನ್ನು ಬರೆದುಕೊಳ್ಳಲು ಪಠ್ಯ ‌ ಪುಸ್ತಕ ಕೊಡಲಿಲ್ಲ. ಅವಳು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನಿದ್ದಳು. ಇದರಿಂದಾಗಿ ಅವಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು.


ಸೀತಾ ‌ ಇದಕ್ಕೆಲ್ಲಾ ಬೇಸರ ಮಾಡಿಕೊಳ್ಳದೆ ಅಂಕಪಟ್ಟಿಯನ್ನು ಅಮ್ಮನಿಗೆ ತೋರಿಸಿದಾಗ ಅವಳ ಅಮ್ಮ ಪದ್ಮಾವತಿ ಯಾಕಿಷ್ಟು ಕಡಿಮೆ ಅಂಕ ಬಂದಿದೆ? ನೀನು ನೂರಕ್ಕೆ ನೂರು ಅಂಕ ತೆಗೆಯಬೇಕೆಂದು  ನಾನು ಹೇಳುವುದಿಲ್ಲ. ಆದರೆ ನೀನು ಶ್ರಮ ಹಾಕಿದಷ್ಟು ಅಂಕ ಬರುತ್ತದೆಯಲ್ಲವೇ? ಎಂದರು. ಅದಕ್ಕೆ ಸೀತಾ ಹೌದಮ್ಮ ನೀವು ಹೇಳುವುದೇನೋ ಸರಿ. ಆದರೆ ನಿಮಗೆ ಹುಷಾರಿಲ್ಲದ ಸಮಯದಲ್ಲಿ ನಾನು ರಜೆ ಹಾಕಿದ್ದೆನಲ್ಲ. ಅಂದು ನಡೆದ ಪಾಠದ ಪಠ್ಯವನ್ನು ಬರೆದುಕೊಳ್ಳಲು ನನಗೆ ‌ ಪುಸ್ತಕವನ್ನು ಯಾರೂ ನೀಡಲಿಲ್ಲ. ನಾನೇನು ಮಾಡಲಿ ಅಮ್ಮ ಎಂದಳು. ಅದಕ್ಕೆ ಅಮ್ಮ ಅವರು ಯಾರೂ ಪುಸ್ತಕ ಕೊಡಲಿಲ್ಲ ಎಂದು ಹೀಗೆ ನೀನು ನೆಪ ಹೇಳಿ ಕೂರಬಾರದು. ನಿಮ್ಮ ಟೀಚರ್‌ಗೆ ಹೇಳಿ ಅವರಿಂದ ಹೇಳಿಸಿ ಪಡೆಯಬಹುದಿತ್ತಲ್ವ? ಟೀಚರ್‌ಗೆ ಕೇಳಲು ಭಯವಾದರೆ ನನ್ನನ್ನು ಕೇಳಬಹುದಿತ್ತು. ನಾನು ಬಂದು ನಿಮ್ಮ ಶಿಕ್ಷಕರಿಗೆ ಹೇಳುತ್ತಿದ್ದೆನಲ್ಲಾ ಎಂದರು.ಅದಕ್ಕೆ ಸೀತಾ ಹೌದಲ್ಲವೇ ಅಮ್ಮ ನನಗಿದು ಹೊಳೆಯಲೇ ಇಲ್ಲ ಎಂದಳು. ಅದಕ್ಕೆ ತಾಯಿ ಇದು ಕೇವಲ ಓದಿಗೆ ಮಾತ್ರ ಸೀಮಿತವಾಗಬಾರದು. ಜೀವನದಲ್ಲೂ ಅಷ್ಟೆ ಇದನ್ನು ರೂಢಿಸಿಕೊಳ್ಳಬೇಕು ಯಾರು ಕೂಡ ನೀನು ಮುಂದುವರೆಯಲು ಆಸರೆ ನೀಡುವುದಿಲ್ಲ ಮತ್ತು ಸಹಾಯ ಮಾಡುವುದಿಲ್ಲ. ಅವರಿವರು ಕೊಡುವರೆಂದು ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬಂತೆ ನಾವೇ ಬುದ್ಧಿ ಉಪಯೋಗಿಸಿ ಪರಿಹಾರ ಕಂಡುಕೊಳ್ಳಬೇಕು. ಈ ಮಾತನ್ನು ಯಾವಾಗಲೂ ನೆನಪಿಟ್ಟುಕೋ ಮಗಳೇ ಎಂದರು. ಸೀತಾ ‌ ಅಂದಿನಿಂದ ನೆಪ ಹೇಳಿ ತಪ್ಪಿಸಿಕೊಳ್ಳುವುದನ್ನು ಬಿಟ್ಟು ಉತ್ತಮ ವಿದ್ಯಾರ್ಥಿನಿಯಾದಳು. ಮುಂದೆ ಪರೀಕ್ಷೆಯಲ್ಲಿ ಯಾರ ಸಹಾಯವು ಇಲ್ಲದೇ ತರಗತಿಗೆ ಮೊದಲನೇ ಸ್ಥಾನ ಬಂದಳು. ನಂತರ ಸೀತಾ ಒಳ್ಳೆಯ ಕೆಲಸಕ್ಕೆ ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ, ಮುಂದೆ ತನ್ನ ಕಾಲಮೇಲೆ ತಾನೇ ನಿಂತುಕೊಂಡು ಕೆಲಸ ಮಾಡುತ್ತಾ ತನ್ನ ತಾಯಿಯನ್ನು ತುಂಬಾ ಚೆನ್ನಾಗಿ ನೋಡಿಕೊಂಡಳು.


*ನೀತಿ : ನೆಪ ಹೇಳಿಕೊಂಡು ಕುಳಿತರೆ ಮುಂದೆ ಯಾವ ಕೆಲಸವು ಆಗುವುದಿಲ್ಲ ಬದಲಾಗಿ ತಾವೆ ಬುದ್ಧಿ ಉಪಯೋಗಿಸ ಬೇಕೆನ್ನುವ ಅರ್ಥ*


✍️ ಪುಷ್ಪ ಪ್ರಸಾದ್ ಉಡುಪಿ


ಕತೆ ೦೭ : ಸೋಮಾರಿ.


ರಾಮು ಹಾಗೂ ಶಾಮು ಇಬ್ಬರು ಆತ್ಮೀಯ ಗೆಳೆಯರು.ಅವರಿಗೆ ಸೋಮಾರಿತನ ಹೆಗಲೇರಿ ಕುಳಿತಿತ್ತು.ಮನೆಯವರು ಎಷ್ಟು ಹೇಳಿದರೂ ಕೇಳುತ್ತಾ ಇರಲಿಲ್ಲ.ಮನೆಯವರ ವಿಚಾರವನ್ನು ತಳ್ಳಿ ಬೀದಿ ಬೀದಿ ಅಲೆದು ಪುಂಡಪೋಕರಿಯಂತೆ ತಿರುಗಾಡುತ್ತಿದ್ದರು.ಎಷ್ಟೇ ಆದರೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಇಂದಲ್ಲ ನಾಳೆ ಸರಿಹೋಗಬಹುದು ಎಂದು ಕುಳಿತರು.ಹಣವಿದ್ದರೆ ಮಾತ್ರ ಜನರು ಮಾತಾನಾಡಿಸುವರು ಎಂದು ತಿಳಿದಿದ್ದರು.ಅವರು ತಮ್ಮ ಜೀವನವನ್ನು ಸುಲಭವಾಗಿ ಸೋಮಾರಿತನದಿಂದನೇ ಕಳೆಯುತ್ತಿದ್ದರು.ಒಂದು ದಿನ ಕಳ್ಳತನ ಮಾಡಿ ದುಡ್ಡು ಮಾಡಲು ಹೋದಾಗ ರಾಮ ಶಾಮ ಸಿಕ್ಕಿಬಿದ್ದರು.ಇದು ಊರಿಗೆ ವಿಷಯ ತಿಳಿಯಿತು.ತಂದೆ ತಾಯಿ ತುಂಬಾ ಕಣ್ಣೀರು ಹಾಕಿದರು.ಮಕ್ಕಳನ್ನು ಬಿಡಿಸಿ ಕೊಳ್ಳಲು ಬಹಳ ಒದ್ದಾಡಿದರು.ಹೇಗೋ ದೇವರ ದಯೆಯಿಂದ ಬಿಡುಗಡೆಯಾದರು.ಆಗ ತಮ್ಮ ತಪ್ಪಿನ ಅರಿವಾಯಿತು.ಕಾರಣ ತಂದೆ ತಾಯಿ ನೋವು ಪಟ್ಟು ತಮ್ಮನ್ನು ಬಿಡುಗಡೆ ಗೊಳಿಸಿದರು.ಎಂದು ನೋವುಂಟು ಮಾಡಿತು.ಹಾಗೆಯೇ ವಿದ್ಯಾಭ್ಯಾಸವ ಕಲಿಯದೇ ಕೆಲಸವು ಸಿಗದೇ ಒದ್ದಾಡಿದರು.

ಮುಂದೊಂದು ದಿನ ಸೋಮಾರಿತನದಿಂದ ಅವರು ಮಾಡಿದ ಪಾಪ ಕರ್ಮವ ನೆನೆದು ಅಳುತ್ತಲೇ ಮುಂದೆ ನಡೆದು ಹೋಗುವಾಗ ಕೃಷಿಯಲ್ಲಿ  ಬೇಸಾಯ ಮಾಡಿ ಜೀವನ ಸಾಗಿಸುವ ಉಪಾಯ ಹೊಂದಿದರು.ಫಸಲು ಕೂಡಾ ಚೆನ್ನಾಗಿ ಬಂತು.ಹಾಗಾಗಿ ಜೀವನದಲ್ಲಿ ಸೋಮಾರಿತನ ಮತ್ತೆ ಹೇಗಲೇರ ಬಾರದು ತಿಳಿದು ಕೂತು ತಿಂದರು ಕುಡಿಕೆ ಹೊನ್ನು ಸಾಲದು ಎಂದು ಹೇಳಿದಂತೆ ತಮ್ಮ ಸೋಮಾರಿತನ ಕೂಡಾ ಬಿಟ್ಟು ಹೊರಟುಹೋಯಿತು.ಜೀವನದಲ್ಲಿ ಸಾಧನೆಯ ಮಾಡಿ ಮುಂದೆ ಒಳ್ಳೆಯ ದುಡಿಮೆಯ ವ್ಯಕ್ತಿಯಾದರು.


ಯಶೋದ.ಗಾಣಿಗ, ಗೃಹಿಣಿ 🙏

ಕತೆ : ೦೮

ಶೀರ್ಷಿಕೆ : ಇರುವೆಗಳ ಚಾತುರ್ಯ 

ಅದೊಂದು ಮರ. ದಟ್ಟಡವಿಯ ನಡುವೆ ಇದ್ದ ಆ ಮರ ತುಂಬಾ ವಿಶಾಲವಾಗಿತ್ತು. ಸಹಜವಾಗಿಯೇ ವರ್ಷಪೂರ್ತಿ ತುಂಬಾ ಹಣ್ಣುಗಳನ್ನು ಬಿಡುತ್ತಿತ್ತು. ಆದ್ದರಿಂದ ಎಲ್ಲ ತರಹದ ಪಶುಪಕ್ಷಿಗಳು ಆ ಮರದಲ್ಲೇ ಮನೆ ಮಾಡಿಕೊಂಡು ವಾಸಿಸುತ್ತಿದ್ದವು. ಎಷ್ಟೇ ಜೋರಾದ ಗಾಳಿ ಬಂದರೂ, ಕೊಂಬೆಗಳು ಸ್ವಲ್ಪ ಜೋರಾಗಿ ಅಲುಗಾಡುತ್ತಿತ್ತೇ ಹೊರತು, ಆಳವಾಗಿದ್ದ ಬೇರುಗಳು ಆ ಮರವನ್ನು ಬುಡಮೇಲು ಮಾಡದಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದವು. ಎಂತಹ ಬಿಸಿಲ ಝಳವೂ ಸಹ ಆ ಮರದ ಕೊಂಬೆಗಳ ಮಧ್ಯೆ ಪಕ್ಷಿಯ ಗೂಡುಗಳಲ್ಲಿದ್ದ ಪುಟ್ಟ ಮರಿಗಳಿಗೆ ಬಾಧೆ ನೀಡಲು ಸಾಧ್ಯವಿರಲಿಲ್ಲ. ಬಿರುಸಾದ ಮಳೆ ಬಂದರೂ ದೊಡ್ಡ ದೊಡ್ಡ ಹನಿಗಳು ಆ ಮರದ ಎಲೆ, ಕೊಂಬೆಗಳ ಮೇಲೆ ಬಿದ್ದು, ನಿಧಾನವಾಗಿ ಹರಿಯುತ್ತಾ ಕೆಳ ಜಾರುತ್ತಿತ್ತು.  ಕಿಲೋಮೀಟರ್ ನಷ್ಟು ವಿಸ್ತೀರ್ಣ ಹೊಂದಿದ ಆ ವಿಶಾಲ ಮರ ಎಂದೂ ಬರಿದಾಗಿರಲಿಲ್ಲ.


ಇಂತಹ ದೊಡ್ಡ ಮರದ ಬುಡದಲ್ಲಿ ಒಂದು ಇರುವೆ ಗೂಡು ಸಹ ಇತ್ತು. ಲಕ್ಷಾಂತರ ಸಣ್ಣ ದೊಡ್ಡ ಇರುವೆಗಳು ಅಲ್ಲಿ ವಾಸವಾಗಿದ್ದವು.  ಇರುವೆಗಳಲ್ಲಿರುವ ಸಹಜ ಪ್ರವೃತ್ತಿಯಂತೆ ಆ ಇರುವೆಗಳು ಯಾವಾಗಲೂ ಬೇರೆ ಬೇರೆ ಕಡೆಗಳಿಗೆ ಹೋಗಿ ಆಹಾರವನ್ನು ಒಟ್ಟುಗೂಡಿಸಿ ತಂದು ತಮ್ಮ ಗೂಡಲ್ಲಿ ಶೇಖರಿಸಿ ಇಟ್ಟುಕೊಳ್ಳುತ್ತಿದ್ದವು. ಅಂತಹ ಸಮೃದ್ಧವಾದ ಕಾಡಿನಲ್ಲಿ ಆಹಾರ ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಉಳಿದ ಪ್ರಾಣಿಗಳ ಅವುಗಳನ್ನು ಗೇಲಿ ಮಾಡುತ್ತಿದ್ದವು. ಆದರೂ ಇರುವೆಗಳು ದೂರದೂರದಿಂದ ಕಷ್ಟಪಟ್ಟು ಆಹಾರವನ್ನು ಸಂಗ್ರಹಿಸಿ ತರುವ ಕೆಲಸವನ್ನು ಕೈಬಿಟ್ಟಿರಲಿಲ್ಲ.


 ಸದಾ ಸೋಮಾರಿಗಳಾಗಿದ್ದ ಮರದ ಮೇಲಿನ ಪ್ರಾಣಿ ಪಕ್ಷಿಗಳು ಎಷ್ಟೋ ಬಾರಿ ಆ ಮರವನ್ನು ಬಿಟ್ಟು ಕದಲುತ್ತಿರಲಿಲ್ಲ. ವರ್ಷಪೂರ್ತಿ ಅಲ್ಲೇ ಹೇರಳವಾಗಿ ಸಿಗುವ ಹಣ್ಣುಗಳನ್ನ ತಿನ್ನುತ್ತ, ಅಲ್ಲೇ ಪಕ್ಕದಲ್ಲಿದ್ದ ಕೊಳದಲ್ಲಿ ನೀರನ್ನು ಕುಡಿಯುತ್ತಾ ಸಮಯ ಕಳೆಯುತ್ತಿದ್ದವು. ಇತರ ಜಾಗಗಳಿಗೆ ಹೋಗಿ ಆಹಾರವನ್ನು ಹುಡುಕುವ ಕೆಲಸವೇ ಅವುಗಳಿಗೆ ಮರೆತುಹೋಗಿತ್ತು.


 ಹೀಗಿರುವಾಗ ಒಂದು ದಿನ ಆ ಕಾಡಿನಲ್ಲಿ ಕಾಡ್ಗಿಚ್ಚು ಹಬ್ಬಿತು. ಅದರ ಬಿಸಿ ತಾಗುತ್ತಿದ್ದಂತೆ ಪ್ರಾಣಿ ಪಕ್ಷಿಗಳೆಲ್ಲ ಸುರಕ್ಷಿತ ಜಾಗವನ್ನು ಅರಸಿ ಓಡತೊಡಗಿದವು. ಎತ್ತ ಕಡೆ ಹೋಗಬೇಕೆಂದು ತಿಳಿಯದೇ ಆ ದೊಡ್ಡ ಮರದ ಪ್ರಾಣಿಗಳೆಲ್ಲಾ ಮರದ ಕೊಂಬೆಗೆ ಅಂಟಿ ಭಯದಿಂದ ಅತ್ತಿತ್ತ ನೋಡುತ್ತಿದ್ದವು. ಅವುಗಳಿಗೆ ಆ ಮರವನ್ನು ಬಿಟ್ಟು ಹೋಗಿ ಅಭ್ಯಾಸವೇ ಇರಲಿಲ್ಲ. ಆ ದಟ್ಟ ಕಾಡಿನಲ್ಲಿ ಯಾವ ಕಡೆ ಹೋದರೆ ಏನು ಸಿಗುತ್ತದೆ ? ಎಲ್ಲಿ ಸುರಕ್ಷಿತವಾಗಿ ಉಳಿದುಕೊಳ್ಳಬಹುದು?  ಎಂಬ ಕನಿಷ್ಠ ಮಾಹಿತಿಯೂ ಇರಲಿಲ್ಲ.


 ಅದೃಷ್ಟವಶಾತ್ ಆ ಮರದ ಸ್ವಲ್ಪ ದೂರದಲ್ಲಿ ಹಾದು ಹೋದ ಕಾಡ್ಗಿಚ್ಚು ಮರಕ್ಕೆ ಹೆಚ್ಚೇನು ಘಾಸಿ ಮಾಡಿರಲಿಲ್ಲ. ಆದರೆ ಎಲೆಗಳು, ಹೂಗಳು ಕಾಡ್ಗಿಚ್ಚಿನ ಬಿಸಿಗೆ ಕರಟಿ ಹೋಗಿದ್ದವು. ಆ ವರ್ಷ ಆ ಮರದಲ್ಲಿ ಯಾವುದೇ ಹಣ್ಣುಗಳು ಬಿಡುವ ಸಂಭವವೇ ಇರಲಿಲ್ಲ. ಕಷ್ಟಪಟ್ಟು ಆಹಾರ ಸಂಪಾದಿಸುವ ಅಭ್ಯಾಸವನ್ನೇ ಮರೆತುಹೋಗಿದ್ದ ಪ್ರಾಣಿ-ಪಕ್ಷಿಗಳು ಕಷ್ಟದ ದಿನಗಳನ್ನು ಎದುರಿಸಬೇಕಾಯಿತು. ಒಂದು ಹೊತ್ತು ಸಹ ಹೊಟ್ಟೆ ತುಂಬಿಸಿಕೊಳ್ಳಲು ಅವುಗಳಿಗೆ ಕಷ್ಟವೆನಿಸಿತು. 


ಆದರೆ ಸಾಕಷ್ಟು ಆಹಾರವನ್ನು ಸಂಗ್ರಹಿಸಿದ ಇರುವೆಗಳಿಗೆ ಈಗಲೂ ಎಲ್ಲಿ ಹೋದರೆ ಯಾವ ಆಹಾರ ಸಂಪಾದಿಸಬಹುದು ಎಂಬುದು ಚೆನ್ನಾಗಿ ತಿಳಿದಿತ್ತು. ಹಾಗಾಗಿ ಅವು ಈ ಕಷ್ಟದಿಂದ ಸುಲಭವಾಗಿ ಪಾರಾದವು ಮತ್ತು ಒಂದು ಹೊತ್ತು ಕೂಡಾ ಹಸಿವಿನ ಸಮಸ್ಯೆಯಿಂದ ಬಳಲದೇ ಸುಖವಾಗಿ ಇದ್ದವು. ಇರುವೆಗಳನ್ನು ನೋಡಿ ಗೇಲಿ ಮಾಡುತ್ತಿದ್ದ ಇತರ ಪ್ರಾಣಿ ಪಕ್ಷಿಗಳು ಈಗ ಅವುಗಳ ಚಾತುರ್ಯಕ್ಕೆ ತಲೆದೂಗಿದವು. ಇನ್ನು ಮುಂದೆ ನಾವು ಸಹ ಅವುಗಳಂತೆ ಕಷ್ಟಪಟ್ಟು ಆಹಾರ ಸಂಪಾದನೆ ಮಾಡಬೇಕು ಎಂಬ ಪಾಠವನ್ನು ಕಲಿತುಕೊಂಡವು. ಕೈಗೆಟುಕುವ ಕುಡಿಕೆ ಹೊನ್ನು ಯಾವಾಗಬೇಕಾದರೂ ಬರಿದಾಗ ಬಹುದು ಮತ್ತು ಅದನ್ನು ಮಾತ್ರ ನಂಬಿಕೊಂಡಿದ್ದರೆ ಬದುಕು ಸಾಗಿಸಲು ಸಾಧ್ಯವಿಲ್ಲ ಎಂದು ಅರಿತವು.


**************

ಶ್ರೀಕಲಾ ಬಿ ಕಾರಂತ್

ಅಳಿಕೆ, ಬಂಟ್ವಾಳ ತಾಲೂಕು

ಕತೆ ೦೯

ಮಕ್ಕಳ ನೀತಿಕಥೆ: ಮಾರ್ಗದರ್ಶನ

ರಂಗಪ್ಪನಿಗೆ ನಾಲ್ಕು ಜನ ಗಂಡು ಮಕ್ಕಳು.ಒಳ್ಳೆಯ ಕೆಲಸಗಾರ ಸಹ.ಹೈನುಗಾರಿಕೆಯಲ್ಲಿಯೇ ತನ್ನ ಸಂಸಾರವನ್ನು ನಡೆಸುತ್ತಿದ್ದ ಪ್ರಾಮಾಣಿಕನಾಗಿದ್ದ.ತನ್ನ ಮಕ್ಕಳ ಅವಸ್ಥೆ ನೋಡಿ ತುಂಬಾ ದು:ಖಿಸುತ್ತಿದ್ದ.ಓದುವುದರಲ್ಲಿ,ತಂದೆಗೆ ಸಹಾಯ ಮಾಡುವುದರಲ್ಲಿ ,ಯಾವುದಲ್ಲಿಯೂ ಮನಸ್ಸಿಲ್ಲದ ಸೋಮಾರಿಗಳಾಗಿದ್ದರು.

ಎರಡು ಮಕ್ಕಳು ಪ್ರೌಢಶಾಲೆಯಲ್ಲಿ,ಇನ್ನೆರಡು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದರು.ಬುದ್ಧಿವಾದ ಹೇಳಿ ಸೋತುಹೋಗಿದ್ದ.


ಒಂದು ದಿನ ಬೆಳಿಗ್ಗೆ ಹಾಲು ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಮಗ ಶರಣನ ಗುರುಗಳು ಎದುರು ಸಿಕ್ಕಿದರು.ನಮಸ್ಕಾರ ವಿನಿಮಯವಾಯಿತು.ಗುರುಗಳೇ'ನನ್ನ ನಾಲ್ಕು ಮಕ್ಕಳು ಮಹಾ ಸೋಮಾರಿಗಳು,ದಡ್ಡರು,ಓದು ಬರಹ ಎರಡೂ ಇಲ್ಲ,ಮನೆ ಹಟ್ಟಿ ಕೆಲಸದಲ್ಲೂ ಕೈಜೋಡಿಸುತ್ತಿಲ್ಲ,ಏನಾದರೂ ಮಾಡಿ ಅವರನ್ನು ಸರಿ ದಾರಿಗೆ ತರಬೇಕು,ನೀವೇ ಒಂದು ಉಪಾಯ ಮಾಡಿ ಕಾಪಾಡಿ' ಎಂದು ಅಂಗಲಾಚಿದ.ಶೇಖರ ಗುರುಗಳಿಗೆ ಮಕ್ಕಳ ಬಗ್ಗೆ ಶಾಲೆಗೆ ಬಂದು ಕರ್ತವ್ಯಕ್ಕೆ ಸೇರುವಾಗ ಎಲ್ಲಾ ವಿಷಯ ಬೇರೆ ಅಧ್ಯಾಪಕರು ಹೇಳಿದ್ದರು.ಶಾಲೆ ಹತ್ತಿರವೇ ಸಣ್ಣ ಮನೆ ಬಾಡಿಗೆಗೆ ಮಾಡಿದ್ದರು.ರಂಗಪ್ಪನ ಕೈಯನ್ನು ಹಿಡಿದು ಸಮಾಧಾನ ಪಡಿಸಿದರು.'ನಾಳೆಯಿಂದಲೇ ನಿಮ್ಮ ಮಕ್ಕಳನ್ನು ನನ್ನ ಮನೆಗೆ ಕಳುಹಿಸಿರಿ.ನಿತ್ಯವೂ ಒಂದು ಗಂಟೆ ಅವರಿಗೆ ಹೆಚ್ಚಿನ ಕಾಳಜಿ ವಹಿಸಿ ಕಲಿಸ್ತೇನೆ.ನನಗೆ ನೀವೇನೂ ಕೊಡುವುದು ಬೇಡ.ಮಕ್ಕಳು ಎಲ್ಲರ ಹಾಗೆ ಆದರೆ ಸಾಕು,ನೀವು ಹಿರಿಯರು ಬೇಸರಮಾಡಿಕೊಳ್ಳಬೇಡಿ' ಎಂದರು. ಮರುದಿನದಿಂದ ನಾಲ್ವರು ಮಕ್ಕಳು ಮೇಷ್ಟ್ರ ಮನೆಗೆ ಹೋಗಲಾರಂಭಿಸಿದರು.


ಶೇಖರ ಗುರುಗಳು ಮಕ್ಕಳನ್ನು ಹತ್ತಿರ ಕೂರಿಸಿ ,ಅವರ ಮನಸ್ಸಿನಲ್ಲಿದ್ದ ವಿಷಯಗಳನ್ನೆಲ್ಲ ಕೇಳಿ ತಿಳಿದುಕೊಂಡರು.ಮಕ್ಕಳೇನೋ ಬುದ್ಧಿವಂತರೇ,ಆದರೆ ಸರಿಯಾದ ಮಾರ್ಗದರ್ಶನವಿಲ್ಲದೆ ಹೀಗಾಗಿದ್ದಾರೆಂದು ಗೊತ್ತಾಯಿತು.ಮಕ್ಕಳೇ' ಹೇಳಿದ ಕೆಲಸವನ್ನು ಮಾಡಬೇಕು.ದೊಡ್ಡವರನ್ನು ಬೇಸರ ಪಡಿಸಬಾರದು.ಶಾಲಾ ವಯಸ್ಸಿನಲ್ಲಿ ಕಲಿಯಬೇಕು.ದೊಡ್ಡವರಾದ ಮೇಲೆ ಓದಲಾಗುವುದಿಲ್ಲ.ಹೀಗೆ ಓದಿ ಮುಂದೆ ನಿಮ್ಮ ಕಾಲಮೇಲೆ ನೀವು ನಿಲ್ಲಬೇಕು.ನಿಮ್ಮ ತಂದೆ ಕಷ್ಟ ಬರುವುದು ಗೊತ್ತಿಲ್ಲವೇ ನಿಮಗೆ?ಎಷ್ಟು ದಿನ ಅಪ್ಪ ಸಾಕಿಯಾರು ನಿಮ್ಮನ್ನು?ನಿಮಗೆ ಗೊತ್ತೇ *ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು* ಗಾದೆ ಮಾತಿದೆ.

ಆಯಾಯ ವಯಸ್ಸಿನಲ್ಲಿ ಆಗುವುದು ಆಗಲೇಬೇಕು.ನಾವು ಎಷ್ಟೇ ಗಳಿಸಿದರೂ ,ಪುನ:ಅದಕ್ಕೆ ಕೂಡಿಸದಿದ್ದರೆ ಅಲ್ಲಿದ್ದ ಸಂಪತ್ತು ,ಹಣ ಖಾಲಿಯಾಗಬಹುದು.ನಮ್ಮ ಬದುಕು ನಿಂತ ನೀರಲ್ಲ.ನಿಂತ ನೀರು ಕ್ರಿಮಿಗಳನ್ನು ಉತ್ಪಾದಿಸಿ ಆರೋಗ್ಯ ಕೆಡಿಸಬಹುದು.ನಾವು ಹರಿಯುವ ನೀರಾಗಿ ನಾಲ್ಕು ಜನರಿಗೆ ಸಹಾಯ ಮಾಡಬೇಕು.*ಕಾಯಕವೇ ಕೈಲಾಸ* ದುಡಿಮೆಯಲ್ಲಿ ಶಿವನನ್ನು ಕಾಣಬೇಕು.ಕೈ ಕೆಸರಾರೆ ಬಾಯಿಗೆ ಮೊಸರು.ಮಕ್ಕಳೇ ಚೆನ್ನಾಗಿ ಓದಿ ಕಲಿಯಿರಿ,ನಾನೇ ಕಲಿಸ್ತೇನೆ. ಒಳ್ಳೆಯ ಮಕ್ಕಳಾಗಿ.ಒಂದು ಕೊಡದಲ್ಲಿರುವ ನೀರನ್ನು ತೆಗೆದಾಗ ಅದು ಮುಗಿಯುತ್ತದೆ.ಹಾಗೆಯೇ ಹಣ,ಸಂಪತ್ತು ಸಹ'ಎಂದರು.ಎಲ್ಲಾ ಮಕ್ಕಳ ಕಣ್ಣಿಂದ ನೀರು ಇಳಿಯಿತು. 'ಖಂಡಿತಾ ಇನ್ನು ಮುಂದೆ ಚೆನ್ನಾಗಿ  ಓದುತ್ತೇವೆಂದು 'ಮಾತುಕೊಟ್ಟರು.ಗುರುಗಳಿಗೆ ಸಂತೋಷವಾಯಿತು.


✍️ರತ್ನಾ ಕೆ ಭಟ್,ತಲಂಜೇರಿ

ಕತೆ ೧೦

ಶೀರ್ಷಿಕೆ:- ಪಶ್ಚಾತ್ತಾಪ


ಗಾದೆಗಳು ಹಿಂದಿನ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯ ವಾಕ್ಯಗಳು.ಈ ಗಾದೆ ಮಾತಿನ ಅರ್ಥ, ವ್ಯಕ್ತಿ ಎಷ್ಟೇ  ಶ್ರೀಮಂತನಾಗಿದ್ದರೂ ತಾನು ಮಾಡುವ ಕೆಲಸವನ್ನು ಮಾತ್ರ ಮುಂದುವರಿಸುತ್ತಲೇ ಇರಬೇಕು. ನನಗೇನು, ಹಣವಿದೆ ಎಂದು ತನ್ನ ಕೆಲಸದಲ್ಲಿ ಅಸಡ್ಡೆ ಅಥವಾ ಉದಾಸೀನ ತೋರಿದರೆ,ಅಲ್ಲದೆ ಅವನು ಕೆಲಸವನ್ನು ಮುಂದುವರಿಸದಿದ್ದರೆ ಆತ  ಎಷ್ಟೇ ಹಣವಂತನಾಗಿರಲಿ, ಒಂದಲ್ಲ ಒಂದು ದಿನ ಬಡವನಾಗುತ್ತಾನೆ. ಎಷ್ಟೇ ಹಣವಿದ್ದರೂ ಅದನ್ನು ಮರು ತುಂಬದೆ ಬರಿಯ ಖರ್ಚು ಮಾಡುತ್ತಾ ಹೋದರೆ ಅದು ಖಾಲಿಯಾಗುತ್ತಾ ಹೋಗುತ್ತದೆ. ಇದನ್ನು ಅರಿತ ನಮ್ಮ ಪೂರ್ವಜರು ಎಚ್ಚರಿಕೆಯ ರೂಪದಲ್ಲಿ 'ಕೂತು ತಿಂದರೆ ಕುಡಿಕೆ ಹೊನ್ನು ಸಾಲದು’ ಎಂದು ಹೇಳುತ್ತಿದ್ದರು.ಮಕ್ಕಳೇ ನಾವು ಜೀವನದಲ್ಲಿ ಆಯಾ ಸಮಯಕ್ಕೆ ತಕ್ಕಂತೆ,ನಾವು ಹೇಗೇ ಕೆಲಸವನ್ನು  ಮಾಡುತ್ತಿರಬೇಕು,ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಈ ಕಥೆಯ ಮೂಲಕ ತಿಳಿಯೋಣ:-


ಆಗರ್ಭ ಶ್ರೀಮಂತರಾದ ರಾಜರಾಮಯ್ಯನವರ ಒಬ್ಬನೇ ಮುದ್ದಿನ ಮಗ ಗೌರವ.ತಾಯಿ ಇಲ್ಲದ ಮಗುವೆಂದು ಅವನನ್ನು ಮುದ್ದಾಗಿ ಸಾಕಿದ್ದರು.ಆದರೆ ಅವನ ಹೆಸರಿಗೆ ಅವನ ಬುದ್ದಿ ವಿರುದ್ದವಾಗಿತ್ತು.ಅವನು ಮಾಡುವ ಕೆಲಸವೆಲ್ಲಾ ಅಗೌರವವಾಗಿತ್ತು. ಮನೆಯಲ್ಲಿ ಇದ್ದರೆ ತನ್ನ ವಿಲಾಸಿ ಜೀವನಕ್ಕೆ ತಂದೆ ಅಡ್ಡಿಯಾಗಬಹುದೆಂದು ಹಾಸ್ಟೆಲ್ ನಲ್ಲಿ ಇದ್ದು ಓದುತ್ತಿದ್ದ.ರಾತ್ರಿಯಾದರೆ ಸಾಕು ತನ್ನ ಗೆಳೆಯ-ಗೆಳತಿಯರೊಂದಿಗೆ ಪಬ್ ಹೋಗಿ ಮಜಾ ಮಾಡುತ್ತಿದ್ದ. ವಾರ್ಡನ್ ಎಷ್ಟೊಂದು ಎಚ್ಚರಿಕೆ ನೀಡಿದರೂ ಕೇಳುತ್ತಿರಲಿಲ್ಲ. ಇದರಿಂದ ಬೇಸತ್ತ ವಾರ್ಡನ್ ಅವನ ತಂದೆಗೆ ವಿಷಯ ತಿಳಿಸಿ,ಅಲ್ಲಿಂದ ಮನೆಗೆ ಕಳಿಸಿದರು.


ಮನೆಯಲ್ಲಿ ಮಗನ ದುರ್ನಡತೆ ನೋಡಿ ರಾಜಾರಾಮಯ್ಯನವರಿಗೆ ತುಂಬಾ ಬೇಸರವಾಯಿತು.ಮಗನಿಗೆ ಸರಿಯಾಗಿ ಬುದ್ದಿ ಹೇಳಿದರು.'ಕೆಟ್ಟ ಅಭ್ಯಾಸಗಳನ್ನು ಬಿಟ್ಟು,ತನ್ನ ವ್ಯವಹಾರವನ್ನು ನೋಡಿಕೊಳ್ಳು, ನಾವು ಯೌವನದಲ್ಲಿ ಹಣ ಮತ್ತು ಆರೋಗ್ಯವನ್ನು  ಚೆನ್ನಾಗಿ ಕಾಪಾಡಿಕೊಂಡರೆ,ಮುಂದೆ ಮುಪ್ಪಿನಲ್ಲಿ ಅದೇ ನಮ್ಮನ್ನು ಕಾಪಾಡುತ್ತದೆ' ಎಂದು ಎಷ್ಟು ತಿಳಿ ಹೇಳಿದರೂ,ಮಗ ಆ ಮಾತನ್ನು ಕೇಳದಷ್ಟೂ ಮುಂದೆ ಹೋಗಿದ್ದ.ತನ್ನ ನಂತರ ತನ್ನ ಮಗನ ಗತಿಯೇನು ಎನ್ನುವ ಚಿಂತೆಯಲ್ಲಿ ರಾಯರು ಹಾಸಿಗೆ ಹಿಡಿದರು.ತಂದೆ ಕಾಯಿಲೆಯಿಂದ ಮಲಗಿದ್ದು, ಗೌರವನಿಗೆ ಲಾಭವೇ ಆಯಿತು.ಮನೆಯಲ್ಲಿದ್ದ ಹಣ,ಚಿನ್ನವನ್ನೆಲ್ಲಾ ಕದ್ದುಕೊಂಡು ಹೋಗಿ ಗೆಳೆಯರೊಂದಿಗೆ ಕಾಲ ಕಳೆಯುತ್ತಿದ್ದ.ಗೆಳೆಯ-ಗೆಳತಿಯರೊಂದಿಗೆ ಮನೆಯಲ್ಲಿಯೇ ಪಾರ್ಟಿ ಮಾಡುತ್ತಿದ್ದ.ಇದನ್ನೆಲ್ಲಾ ನೋಡಲಾಗದೆ ರಾಯರು ಕಣ್ಣು ಮುಚ್ಚಿದರು.


ತಂದೆ ಸತ್ತ ನಂತರ ಇದ್ದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿದ.ಏನು ಕೆಲಸ ಮಾಡುತ್ತಿರಲಿಲ್ಲ. ಹೀಗೆ ಮುಂದೆ ಹಣವೆಲ್ಲಾ ಖಾಲಿಯಾದ ಮೇಲೆ ಗೌರವನಿಗೆ ಮುಂದೇನೂ ಎನ್ನುವ ಪ್ರಶ್ನೆ ಮೂಡಿತು.ಇವನಲ್ಲಿ ಹಣ ಇಲ್ಲಾ ಎಂದು ಗೊತ್ತಾದ ಮೇಲೆ ಗೆಳೆಯರೆಲ್ಲರೂ ಇವನಿಂದ ದೂರ ಸರಿದರು.ಈಗ ಅವನಿಗೆ ತಂದೆ ಹೇಳಿದ ಒಂದೊಂದು ಮಾತು ನೆನಪಿಗೆ ಬರತೊಡಗಿತು.ಛೇ..!! ತಾನು ತಪ್ಪು ಮಾಡಿದೆನೆಂಬ ಭಾವನೆ ಅವನಲ್ಲಿ ಬರತೊಡಗಿತು. ಆದರೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು.ಅವನ ಆರೋಗ್ಯವು ಸಂಪೂರ್ಣವಾಗಿ ಕೆಟ್ಟಿತು.ತನ್ನ ಮುಂದಿನ ಜೀವನಕ್ಕೆ ಗತಿ ಏನು ಎಂದು ತನ್ನ ಗತಿಸಿದ ತನ್ನ ತಂದೆ-ತಾಯಿಯನ್ನು ನೆನಪಿಸುತ್ತಾ ಅಳುತ್ತಾ ಕಣ್ಣು ಮುಚ್ಚಿ ಮಲಗಿದ.


✍️ ಮಾಲತಿ ರಮೇಶ್, ಕೆಮ್ಮಣ್ಣು

ಕಥೆ ೧೧

🍁ದುಡಿತವೇ ದುಡ್ಡಿನ ತಾಯಿ


ಮಕ್ಕಳೇ ನಿಮಗೆ ಇಂದು ನಾನು ಒಂದು ನೀತಿ ಕಥೆಯನ್ನು ಹೇಳುತ್ತೇನೆ. ನೀತಿ ಕಥೆ ಯಲ್ಲಿ ಜೀವನ ಹೇಗೆ ನಡೆಸಬೇಕು ಎಂಬ ಸಂದೇಶವಿರುತ್ತದೆ. ತಿದ್ದಿ ಬಾಳುವಂತಹ ಮಾರ್ಗದರ್ಶನ ಇರುತ್ತದೆ. ಶಿವಪುರ ಗ್ರಾಮದಲ್ಲಿ ದೀಪಕ ಎಂಬ ವ್ಯಕ್ತಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಬೆಳಗಿನಿಂದ ಸಂಜೆವರೆಗೆ ದುಡಿದು ಸಂಜೆಯಾಗುತ್ತಲೇ      ಮನೆಗೆ ಬೇಕಾದ ದಿನಸಿ ಉಪ್ಪು ಬೇಳೆ ಅಕ್ಕಿಗಳನ್ನೆಲ್ಲ ತೆಗೆದುಕೊಂಡು ಬಂದು ಮನೆಯಲ್ಲಿ ಮಕ್ಕಳ ಜೊತೆಗೆ ಹೆಂಡತಿ ಮಾಡಿದ ಅನ್ನ ಸಾರು ಪಲ್ಯ ವನ್ನುಎಲ್ಲರೂ ಕೂತು ಊಟ ಮಾಡುತ್ತಿದ್ದರು.ತುಂಬಿದ ಸಂಸಾರ ಮಕ್ಕಳೆಲ್ಲರೂ ಶಾಲೆಗೆ ಹೋಗುತ್ತಿದ್ದರು.ದೀಪಕನಿಗೆ ಶ್ರೀಮಂತರ ಜನರ ಜೀವನವನ್ನ ಕಂಡಾಗ ತಾನೂ ಅವರಂತೆ ಕಾರಿನಲ್ಲಿ ಓಡಾಡಬೇಕು, ಐಷಾರಾಮಿ ಜೀವನ ನಡೆಸಬೇಕು, ದೊಡ್ಡ ಬಂಗಲೆಯಲ್ಲಿ ಇರಬೇಕು, ಕೈತುಂಬಾ ಆಳುಕಾಳುಗಳ ಇರಬೇಕು ಎಂದು ಅನಿಸುತ್ತಿತ್ತು. ಮಕ್ಕಳನ್ನು ಉತ್ತಮ ಶಾಲೆಯಲ್ಲಿ ಸೇರಿಸಬೇಕೆಂದು ಹಂಬಲ ತುಂಬಾನೇ ಇತ್ತು.ಒಂದು ದಿನ

ವ್ಯಾಪಾರಕ್ಕೆಂದು ಕುಳಿತಾಗ ಪರಿಚಯಸ್ಥ ಹಿರಿಯರೊಬ್ಬರು ಒಂದು ಅಕಸ್ಮಾತಾಗಿ ಇವನ ಹತ್ತಿರ ಖರೀದಿ ಆರಂಭಿಸಿದರು. ಮಾತನಾಡುತ್ತಲೇ ದೀಪಕ ದೊಡ್ಡ ಬಂಗಲೆ ಆಸ್ತಿ ಇರುವಂತಹ ನನ್ನ ಗೆಳೆಯ ರಾಮದಾಸನ ಮಗನೆಂದು ತಿಳಿಯಿತು.ತುಂಬಾ ಸಂತೋಷಗೊಂಡ ಅವರು ದೀಪಕನಿಗೆ ಮನೆಗೆ ಬರಹೇಳಿದರು. ಯಾವ ವಿಷಯವೂ ದೀಪಕ ನಿಗೆ ಗೊತ್ತಿರಲಿಲ್ಲ.ವಿಳಾಸ ಹುಡುಕುತ್ತಾ ಹೋದಂತಹ ದೀಪಕನಿಗೆ ಕೊನೆಗೆ ಅಲ್ಲಿ ಕಾದಿದ್ದು ತುಂಬಾ ದೊಡ್ಡ ಆಶ್ಚರ್ಯ.ಏನಂದರೆ ರಾಮದಾಸರು ಕೋಟ್ಯಾಂತರ ರೂಪಾಯಿ ಆಸ್ತಿಯ ನಾಲ್ಕೈದು ಮಹಡಿ ಇರುವಂತಹ ಮನೆಯನ್ನು ದೀಪಕನ ಹೆಸರಿಗೆ ಬಿಟ್ಟು ಹೋಗಿದ್ದರು. ಚಿಕ್ಕವನಿದ್ದಾಗ ತಂದೆ ಇನ್ನೊಂದು ಮದುವೆ ಮಾಡಿಕೊಂಡು ರಾಮದಾಸರು ಕೊನೆಯಲ್ಲಿ ಎರಡನೇ ಹೆಂಡತಿಯಿಂದ ಮೋಸಹೋಗಿ ವಕೀಲರೊಬ್ಬರನ್ನು ಹಿಡಿದು ಎಲ್ಲಾಆಸ್ತಿಯನ್ನು ಮೊದಲ ಹೆಂಡತಿಯ ಮಗ ದೀಪಕ ನಿಗೆ ಬರೆದು ಆಸ್ತಿ ಪತ್ರಕೊಡ ಬೇಕೆನ್ನುವಷ್ಟರಲ್ಲಿ  ಕಾರ್ ಅಪಘಾತದಲ್ಲಿ ತೀರಿಹೋಗಿ ಬಿಟ್ಟಿದ್ದರು.ದೀಪಕ ತನ್ನ ಅಮ್ಮನ ಜೊತೆಗೆ ಊರನ್ನ ಬಿಟ್ಟು ಹೋಗಿ ಎಲ್ಲೋ ಸಿಟಿಯ ಕಡೆಗೆ ಕೆಲಸ ಮಾಡಿಕೊಂಡು ದೀಪಕನನ್ನು ಸಾಕಿದ್ದಳು.ದೀಪಕ ಹೆಸರಿಗೆ ಬರೆದಿದ್ದ ಆಸ್ತಿ ದೀಪಕನಿಗೆ ಹಸ್ತಾಂತರವಾಯಿತು, ದೀಪಕನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಣ್ತುಂಬ ಶ್ರೀಮಂತನಾಗಬೇಕೆಂಬ ಕನಸು ಕಂಡಿದ್ದ ಇವನಿಗೆ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿ ಹಣ ಎಲ್ಲವೂ ದೊರಕಿತ್ತು. ಹೆಂಡತಿ-ಮಕ್ಕಳಿಗೆ ವ್ಯಾಪಾರಕ್ಕೆಂದು ಹೋಗುವುದನ್ನೇ ನಿಲ್ಲಿಸಿದ.ಎರಡು ಮಹಲುಗಳನ್ನು ಮಾರಿ ಕೋಟ್ಯಂತರ ರೂಪಾಯಿಯನ್ನು ಬ್ಯಾಂಕ್ ನಲ್ಲಿ ಇಟ್ಟು ಇನ್ನೊಂದುಮಹಲಿನಲ್ಲಿ ಐಷಾರಾಮಿ ಜೀವನವನ್ನು ನಡೆಸಲಾರಂಭಿಸಿದ. ಲಕ್ಷಾಂತರ ಇರುವಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ.ಬೇಕಾದಂತಹ ಭೂರಿಬೋಜನ ಪ್ರತಿದಿನವೂಮಾಡಿ , ಐಷಾರಾಮಿಕಾರನ್ನು ಖರೀದಿಸಿ, ಹಾಕಿ ವಿದೇಶ ಪ್ರಯಾಣ ಕೂಡ ಮಾಡಿದ. ದುಡಿತವೇ ಏನೂ ಇರಲಿಲ್ಲ. ಕಾಲಕ್ರಮೇಣ ಮಕ್ಕಳ ಶಾಲೆ ನಿರ್ವಹಣೆ ಐಷಾರಾಮಿ ಜೀವನದ ಮನೆ ನಿರ್ವಹಣೆ ಕೆಲಸವಲ್ಲವೇ ನಡೆದ ಐಷಾರಾಮಿ ಜೀವನ ಮಾಡಿಕೊಂಡಂತಹ ಚಟಗಳು,ಎಲ್ಲವೂ ಕೂಡಿಟ್ಟ ಹಣವನ್ನು ಕರಗಿಸತೊಡಗಿತು. ಯಾವುದನ್ನ ವ್ಯಾಪಾರ ಮಾಡುತ್ತಿದ್ದೆ ಎಂದು ಮರೆತುಹೋಗಿದ್ದ ಇವನಿಗೆಹಣದ ಕೊರತೆ ಕಾಣಲಾರಂಭಿಸಿತು. ವ್ಯಾಪಾರಕ್ಕೆಂದು ಹೋದರೆಅ  ಅವನ ಜಾಗದಲ್ಲಿ ಇನ್ನಾರು ಅಂಗಡಿಯನ್ನು ಹಾಕಿ ಪ್ರಸಿದ್ಧಿಯನ್ನು ಪಡೆದಿದ್ದರು. ಇವನನ್ನು ಯಾರೂ ಅಲ್ಲಿ ಗುರುತಿಸಲಿಲ್ಲ. ಅನೇಕ ವರ್ಷಗಳ ವರೆಗೆ ಇವನು ಕಾಣದಿದ್ದರಿಂದ ಯಾರು ಇವನನ್ನ ಗುರುತಿಸದೆ ಅವರು ತಮ್ಮ ಪಾಡಿಗೆ ತಾವಿದ್ದರು. ಪುನಹ ವ್ಯಾಪಾರಕ್ಕೆಂದು  ತೆಗೆದುಕೊಂಡು ಹೋದ ವಸ್ತುಗಳು ಈಗ ಮಾರಾಟ ವಾಗಲಿಲ್ಲ. ಎಲ್ಲವೂ ಹಣ ಕರಗಲು ಆರಂಭಿಸಿದಾಗ ಐಷಾರಾಮಿಜೀವನಕ್ಕೆ ಒಗ್ಗಿಕೊಂಡಿದ್ದ ಇವರಿಗೆ ಮತ್ತದೇ ಬಡತನದ ಜೀವನ ಮಾಡಲಾಗಲಿಲ್ಲ.ದೀಪಕ ಬುದ್ಧಿವಂತನಾಗಿದ್ದರೆ ಸಿಕ್ಕಂತ ದೊಡ್ಡಮಟ್ಟದ ಹಣವನ್ನು ಬಿಸಿನೆಸ್ಸಿಗೆ ಎಂದು  ವಿನಿಯೋಗಿಸಿ ಒಂದಿಷ್ಟು ಆಳುಗಳನ್ನು ಇಟ್ಟು ಫ್ಯಾಕ್ಟರಿ ತರಹ ನಡೆಸಿದ್ದರೆ ಹಣದ ವ್ಯವಹಾರ ನಿರಂತರವಾಗಿ ಸಾಗಿ ಹಣದ ಕೊರತೆ ಆಗುತ್ತಿರಲಿಲ್ಲ. ಮತ್ತೆ ಪುನಹ ಸಿಕ್ಕಿದಂತಹ ಮನೆಯನ್ನು ಮಾರಿ ಬಾಡಿಗೆ ಮನೆಯಲ್ಲಿ ಜೀವನ ಮಾಡುವಂತಹ ಪರಿಸ್ಥಿತಿ ಬಂದೊದಗಿತ್ತು. ಆದ್ದರಿಂದ ಮಕ್ಕಳೇ ಎಂದಿಗೂ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ನಾಣ್ಣುಡಿಯನ್ನು ಎಂದಿಗೂ ಮರೆಯದೆ ನಿರಂತರವಾಗಿ ಶ್ರಮ ಪಡುತ್ತಲೇ ಶ್ರಮದಿಂದ ಬಂದ ಹಣದಿಂದ ಜೀವನ ಆನಂದಿಸಿರಿ.. ಶ್ರಮಪಟ್ಟು ಅಭ್ಯಾಸ ಮಾಡಿ ದೊಡ್ಡ ವ್ಯಕ್ತಿಗಳಾಗಿ ಎಂಬುದೇ ಈ ಕಥೆಯ ನೀತಿ..


✍️ ಶ್ರೀಮತಿ ರೇಖಾ ಜಿ ನಾಯಕ ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬೆಳಗಾವಿ

 

Tuesday, December 7, 2021

ನನ್ನ ಮೆಚ್ಚಿನ ಭಾವಗೀತೆ

ನನ್ನ ಮೆಚ್ಚಿನ ಭಾವಗೀತೆ.. ಇದರ ಭಾವಾರ್ಥ, ನನಗೆ ಏಕೆ ಇಷ್ಟ ಎಂಬುದನ್ನು ಲೇಖನ /ಕತೆಯ ಮೂಲಕ ಹೇಳ ಬಯಸಿದ ಕವಿಮನಸ್ಸುಗಳು....

ಬತ್ತದ ತೊರೆ ಸ್ನೇಹ ಬಳಗದಿಂದ, ಬೆಂಗಳೂರು

ಕಾರಂತಜ್ಜನ ನೆರಳಿನಡಿಯಲ್ಲಿ....





Beautiful[30/11, 6:23 PM] Tulasi Naveen: *ಸ್ಪರ್ಧೆಗಾಗಿ: ಲೇಖನ*


ವಿಷಯ : ಇಷ್ಟವಾದ ಭಾವಗೀತೆಯ ಸಾಲಿನಿಂದ ಸುಂದರವಾದ ಕವಿತೆ ಅಥವಾ ಲೇಖನ :


*ಶೀರ್ಷಿಕೆ : ಮನದ ಗರ್ಭದ ಪರಾಗ*

========================

*ಬಾ ಭೃಂಗವೆ ಬಾ ವಿರಾಗಿಯಂದದಿ

ಪರಾಗ ಎಂಬ ಹೆಸರಿನ ಈ ಗೀತೆ ಬೇಂದ್ರೆಯವರ ಪ್ರಸಿದ್ಧ ಭಾವಗೀತೆಗಳಲ್ಲಿ ಒಂದು*.


ಹೇಳಬೇಕಾದ ಒಂದು ಪುಟ್ಟ ಸಂಗತಿಯನ್ನು ಚಿಕ್ಕದಾಗಿ ಚೊಕ್ಕದಾಗಿ ಸುಂದರವಾಗಿ ಜೋಡಿಸಿ ಒಂದು ಹಾಡಾಗಿಸಿ ಬರೆದಿದ್ದಾರೆ ವರಕವಿ ದ. ರಾ. ಬೇಂದ್ರೆ.  


ಬಾ ಭೃಂಗವೆ ಬಾ , ವಿರಾಗಿಯಂದದಿ ಭ್ರಮಿಸುವೆ ನೀನೇಕೆ? ಕಂಪಿನ ಕರೆಯಿರೆ ಸರಾಗವಾಗಿರೆ ಬೇರೆಯ ಕರೆ ಬೇಕೇ? 


ಇಲ್ಲಿ  ಹೂವು ದುಂಬಿಯನ್ನು ಕರೆಯುತ್ತಿದೆ.ನೀನೇಕೆ ವಿರಾಗಿಯ ಹಾಗೆ ಸುತ್ತೆಲ್ಲಾ ಓಡಾಡುತ್ತಿರುವೆ?   ನನ್ನ ಕರೆ ನಿನಗೆ ಕೇಳಿಸದೆ?  ನನ್ನದು ಕಂಪಿನ ಕರೆ ನಾನು ಅರಳಿದ ಹೂವು ನಿನ್ನನ್ನು ಕರೆಯಲೆಂಬಂತೆ ನನ್ನ ಕಂಪನ್ನೆಲ್ಲಾ ಸುತ್ತಲು ಹರಡಿರುವೆ. ನಿನ್ನನ್ನು ಸ್ವಾಗತಿಸುತ್ತಿರುವೆ. ಆದರೆ ನಿನೇಕೋ ಉದಾಸಿಯಂತೆ ರಾಗಕ್ಕೆ ವಿಮುಖನಾದ ವಿರಾಗಿಯಂತೆ ಸುತ್ತೆಲ್ಲೋ ಓಡಾಡುತ್ತಿರುವೆ. ಬಾ... ಬಳಿಗೆ,  ಬಾ.... ನನ್ನ ಬಳಿಗೆ ಬಾ.... ಎಂದು ಕರೆದಿದೆ. ಮತ್ತೆ ಇಲ್ಲಿ ಹೂ ಹೇಳುತ್ತಿದೆ  ಬರಲಿಹ ಕಾಯಿಯ ಪಾಡಿನ ರುಚಿಯು ಇದರೊಳು ಮಡಗಿಹುದು. ನಾಳಿನ ಹಣ್ಣಿನ ರಸವು ಇಲ್ಲಿಯ ಮಕರಂದದೊಳಡಗಿಹುದು ನಾನು ಮಕರಂದವನ್ನು ಸಿದ್ಧಪಡಿಸಿ, ಪುಷ್ಪಪಾತ್ರೆಯೊಳಿಟ್ಟು  ಕಾಯುತ್ತಿರುವೆ. ಇದು ಮುಂದೆ ಬರುವ ಹಣ್ಣಿನ ರಸವನ್ನು ತನ್ನಲ್ಲಿ ಆಡಗಿಸಿಕೊಂಡಿದೆ.  ದುಂಬಿ ತನ್ನನ್ನು ಗಮನಿಸದೆ, ದೂರ ಚಲಿಸುತ್ತಿರಲು, ಹೂವು ಆ ದುಂಬಿಗೆ ಆಹ್ವಾನವೀಯುತ್ತಿದೆ. ನಾನು ಸೂಸುತ್ತಿರುವ ಕಂಪು ಅಂದರೆ ಪರಿಮಳವು ಸರಾಗವಾಗಿದೆ ಎಂದು ಹೂವು ದುಂಬಿಗೆ ಹೇಳುತ್ತಿದೆ.


ಇಲ್ಲಿ ಸರಾಗಕ್ಕೆ ಎರಡು ಅರ್ಥಗಳು. ಒಂದು ಅರ್ಥವೆಂದರೆ ತನ್ನ ಸುವಾಸನೆಯಲ್ಲಿ ಅನುರಾಗವಿದೆ; ಎರಡನೆಯ ಅರ್ಥವೆಂದರೆ ದುಂಬಿಯ ಆತಿಥ್ಯಕ್ಕೆ ಹೂವು ಅನುಕೂಲವಾಗಿದೆ. ಹೀಗೆ ಹೂವು ಸರಾಗವಾಗಿರಲು, ದುಂಬಿ ವಿರಾಗಿಯಂತೆ ಭ್ರಮಿಸಬೇಕೆ? ಭ್ರಮಿಸು ಪದಕ್ಕೂ ಎರಡು ಅರ್ಥಗಳಿವೆ. ಒಂದು ಸುತ್ತಾಡು. ಎರಡನೆಯ ಅರ್ಥ ಹುಚ್ಚನಾಗು. ಆದುದರಿಂದ ನನ್ನ ಬಳಿಗೆ ಬರದೆ ಹುಚ್ಚನಂತೆ ಎಲ್ಲೆಲ್ಲೊ ಹೋಗುತ್ತಿರುವುದೇಕೆ? ನನ್ನಲ್ಲಿ ಅನುರಾಗವಿದೆ ನನ್ನನ್ನು ಸವಿಯಬಹುದು ಎಂದು ಹೂವು ದುಂಬಿಗೆ ಹೇಳುತ್ತಿದೆ. ನೀನಿಲ್ಲದೆ ನಾನು ಕಾಯಾಗೆನು, ಹಣ್ಣಾಗೆನು. ನಾನು ಕಾಯಾಗಿ, ಹಣ್ಣಾಗಿ ಸಂಭ್ರಮಿಸಲು ಸಾರ್ಥಕಗೊಳ್ಳಲು ನಿನ್ನ ಸ್ಪರ್ಶದ, ಮಿಲನದ ಸುಯೋಗ ನನಗೆ ಬೇಕಾಗಿದೆ. ಆದ್ದರಿಂದ ವಿರಾಗಿಯಂತೆ ತಿರುಗಾಡಬೇಡ, ಬಾ....ಬಾ....ನನ್ನ ಬಳಿಗೆ ಬಾ.... ನನ್ನಲ್ಲಿ ಮಿಲನವಾಗು, ನನಗೆ ಕಾಯಿಯಾಗಿ ಹಣ್ಣಾಗಲು ಅವಕಾಶ ಮಾಡಿಕೊಡು. ಫಲದ ಸೃಷ್ಟಿಯೇ ಹೂವು ದುಂಬಿಗೆ ನೀಡುತ್ತಿರುವ ಆಹ್ವಾನದ ಉದ್ದೇಶವಾಗಿದೆ. ಆದುದರಿಂದ ಮುಂದೆ ಬರುವ ಕಾಯಿಯ ರುಚಿ ಈ ಕಂಪಿನಲ್ಲಿ ಗುಪ್ತವಾಗಿದೆ. ನಾಳೆ ಬರುವ ಹಣ್ಣಿನ ರುಚಿ ಈ ಮಕರಂದದಲ್ಲಿ ಅಡಗಿದೆ ಎಂದು ಹೂವು ಹೇಳುವಾಗ ಈ ದುಂಬಿಯ ಕಾರ್ಯವು ದೂತನ ಕಾರ್ಯವೆನ್ನುವದರ ಅರಿವು ಆಗುತ್ತದೆ.


ಮೂರನೆ ನುಡಿಯಲ್ಲಿ ಕವನದ ನಿಜವಾದ ಒಳಗುಟ್ಟು ರಟ್ಟಾಗುವುದು. ಇಲ್ಲಿ ದುಂಬಿಯನ್ನು ಕರೆಯುತ್ತಿರುವುದು ಹೂದೋಟದ ಹೂವಲ್ಲ. ಕವಿಯ ಎದೆಯಲ್ಲಿ ಬಿರಿದು ನಿಂತ ಭಾವಕುಸುಮ.  ಈ ಭಾವಕ್ಕೆ ಮಿಡಿಯಾಗುವ ಕಾಯಾಗುವ ಹಣ್ಣಾಗುವ ಫಲರೂಪವನ್ನು  ಪಡೆಯಲು ದುಂಬಿಯ ಮಿಲನದ ಅಗತ್ಯವಿದೆ. ಇಲ್ಲಿ ದುಂಬಿಯೆಂದರೆ ಕವಿ. ತುಂಬಿ ತುಳುಕುತ್ತಿರುವ ಭಾವವನ್ನು ಕವನವಾಗಿಯೋ ಕಾವ್ಯವಾಗಿಯೋ ಹೊರಹಾಕಲು ಕವಿ ನೆಪ ಮಾತ್ರಕ್ಕಾದರೂ ಬೇಕೇ ಬೇಕು. ಮನಸ್ಸು ಕಾವ್ಯರಚನೆಗೆ ವಿಮುಖವಾಗಿ ಎಲ್ಲೆಲ್ಲೊ ಚಲಿಸುತ್ತಿರುವಾಗ ಒಳಗಿರುವ ಕಾವ್ಯವಸ್ತು ಮನಸ್ಸನ್ನು ಕಾವ್ಯಸೃಷ್ಟಿಗೆ ಕರೆಯುತ್ತಿದೆ. ಕವಿಯ ಮನಸ್ಸಿನಲ್ಲಿರುವ ಕಾವ್ಯ ಹೊರಬರಲು ಬೇಕಾದದ್ದು ಕೇವಲ  ಮುಖಸ್ಪರ್ಶ ಮಾತ್ರ.


ಮಕರಂದ ಸಹಿತ ಅರಳಿನಿಂತ ಹೂವಿಗೆ ದುಂಬಿಯ ಮೂಲಕ ಪರಾಗ ಸ್ಪರ್ಶ ನಡೆಯಲೇ ಬೇಕು. ಹಾಗೆಯೇ ಕವಿಯ ಒಳಗೆ ಧುಮ್ಮಿಕ್ಕಿ ಘಮ ಘಮಿಸುತ್ತಿರುವ ಭಾವಧಾರೆ ಕಾವ್ಯಧಾರೆಯಾಗಿ ಹೊರಬರಲು ಕವಿ ಕಾಲುವೆಯಾಗಿ ತೆರೆದುಕೊಳ್ಳಲೇ ಬೇಕು. ಕವಿ ಇಲ್ಲಿ ದುಂಬಿಯ ಕೆಲಸವನ್ನು ಮಾಡಬೇಕು. ನಿಜವಾದ  ಕಾವ್ಯವಸ್ತು ಅವರ ಮನಸ್ಸಿನಲ್ಲಿಯೇ ಯಾವಾಗಲೂ ಕುಣಿಯುತ್ತಿದ್ದು, ಅದನ್ನು ಕಾವ್ಯರೂಪದಲ್ಲಿ ಹೊರಗೆ ತರುವುದಷ್ಟೆ ಕವಿಯ ಕಾರ್ಯವೆನ್ನುವುದು ಅರ್ಥವಾಗುತ್ತದೆ.


✍️ ಪುಷ್ಪ ಪ್ರಸಾದ್ ಉಡುಪಿ

[30/11, 6:23 PM] Tulasi Naveen: ಬತ್ತದ ತೊರೆ ಸ್ನೇಹ ಬಳಗ

ಶುಕ್ರವಾರ

ವಿಷಯ:-ನಿಮಗೆ ಇಷ್ಟವಾದ ಭಾವಗೀತೆಯ ಸುಂದರವಾದ ಕಥೆ ರಚನೆ

ಭಾವಗೀತೆ:-ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು....

ಶೀರ್ಷಿಕೆ:-ಅಹಲ್ಯಾಳ ಕಥೆ.


ಅಹಲ್ಯಾ ತನ್ನ ಗಂಡನ ಜೊತೆ ಸುಖವಾಗಿ ಸಂಸಾರ ನಡೆಸುತ್ತಾ ಇದ್ದಳು.ತನ್ನ ಗಂಡ ರಮೇಶ್ ಕೆಲಸದ ನಿಮಿತ್ತ ಹೊರಗಡೆ ಹೋದಾಗ ಹೃದಯಾಘಾತವಾಗಿ ತೀರಿಕೊಂಡರು.ಆಗ ಅಹಲ್ಯಾಗೆ ತುಂಬಾ ದುಃಖವಾಯಿತು.ತನ್ನ ಮಗಳು ಅನೂಸೂಯ ಬೆಂಗಳೂರಿನಲ್ಲಿ ಪದವಿ ಕಲಿಯಲೆಂದು ಹೋಗಿದ್ದಳು.ತಂದೆಯ ದುಃಖ ವಿಷಯ ತಿಳಿದು ಓಡೋಡಿ ಬಂದಳು.ತಾಯಿಗೆ ಸಮಾಧಾನ ಪಡಿಸುತ್ತಾ ತಾನು ಸಮಾಧಾನ ಮಾಡಿಕೊಂಡು ಧೈರ್ಯದಿಂದ ಜೀವನವನ್ನು ತಾಯಿಯೊಂದಿಗೆ ಊರಿನಲ್ಲಿ ಕಳೆಯುತ್ತಿದ್ದಳು.ಪದವಿಯ ಪರೀಕ್ಷೆ ಬರೆದು ಉತ್ತಿರ್ಣವಾಗಿ ಒಂದು ಒಳ್ಳೆಯ ಆಫೀಸ್ ನಲ್ಲಿ ಕೆಲಸ ಕೂಡಾ ಸಿಕ್ಕಿತು.ಅಹಲ್ಯಾ ತನ್ನ ಮಗಳು ತಂದ ಹಣ ಸಾಲುವುದಿಲ್ಲ ಎಂದು ಪಕ್ಕದ ಮನೆಯ ಮನೆ ಕೆಲಸ ಮಾಡಿ ದುಡಿದು ಮಗಳಿಗೆ ಹೊರೆ ಆಗಬಾರದು ಮುಂದೆ ಅವಳ ಮದುವೆಗೆ ಖರ್ಚಿಗೆ ಹಣ ಬೇಕೆಂದು ಕೂಡಿಡುತ್ತಿದ್ದಳು.ಮಗಳಿಗೆ ತಾಯಿ ಕೆಲಸಕ್ಕೆ ಹೋಗಿದ್ದು ಗೊತ್ತೆ ಆಗುತ್ತಿರಲಿಲ್ಲ.ಅದೊಂದು ದಿನ ತನ್ನ ಮನೆಯ ಕೆಲಸ ಮಾಡಿಟ್ಟು ಮನೆಕೆಲಸ ಮಾಡಲು ಹೋದ ಅಹಲ್ಯಾಗೆ ಕೆಲಸ ಮಾಡುವ ಮನೆಯಲ್ಲಿ ನೆಲ ಒರೆಸುವಾಗ ಕೆಳಗೆ ನೆಲದಲ್ಲಿ ಬಿದ್ದ ಎಣ್ಣೆ ಬಿದ್ದದ್ದು ಗಮನಿಸಿದೆ ಅಹಲ್ಯಾ ಕಾಲು ಜಾರಿ ಬೀಳುತ್ತಾಳೆ.ಕಾಲು ಜಾರಿ ಸೊಂಟ ಮುರಿದು ಹೋಗುತ್ತದೆ.ಮನೆಯ ಯಜಮಾನರು ಅಹಲ್ಯಾ ಳನ್ನು ಆಸ್ಪತ್ರೆಗೆ ದಾಖಲಿಸಿದರು.ಹಾಗೆಯೆ ತನ್ನ ಮಗಳಿಗೆ ವಿಷಯ ತಿಳಿಸಿದರು.ಮಗಳು ಆತುರದಲ್ಲಿ ಕೆಲಸದಿಂದ ಆಸ್ಪತ್ರೆಗೆ ನೋಡಲು ಓಡಿದಳು.ಅನುಸೂಯ ತಾಯಿಯ ಪರಿಸ್ಥಿತಿ ನೋಡಿ ಕಣ್ಣಿರು ಹಾಕಿದಳು.ಮೊದಲೇ ತಂದೆಯ ಕಳೆದುಕೊಂಡು ದುಃಖ ದಲ್ಲಿದ್ದ ಇವಳು ತಾಯಿಯ ಪರಿಸ್ಥಿತಿ ನೋಡಿ ಕಣ್ಣಿರು ಸುರಿಸಿದಳು.ಅಳಬೇಡ ಮಗಳೆ ನಾನು ನಿನಗೆ ಸಹಾಯ ಆಗಲಿ ಎಂದು ಹೋಗಿ ಕಷ್ಟವೇ ಕೊಟ್ಟು ಬಿಟ್ಟೆ ಮಗಳೇ ನನ್ನ ಕ್ಷಮಿಸು ಎಂದಳು.ಹೋಗಲಿ ಬಿಡು ಅಮ್ಮ ನಾನು ನಿನ್ನ ನೋಡಿಕೊಳ್ಳುವೆ ಎಂದು ಮನೆಗೆ ಡಿಸ್ಟಾರ್ಜ್ ಮಾಡಿ ಮನೆಗೆ ಬಂದಳು.ಮನೆಯಲ್ಲಿ ಅಮ್ಮನ ಆರೈಕೆಯಲ್ಲಿ ತೊಡಗಿ ತಾಯಿಯ ಎಲ್ಲಾ ಚಾಕರಿಯನ್ನು ಮಾಡಿದಳು.ವೀಲ್ ಚೇಯರ್ ಮೇಲೆ ಕುಳಿತು ಅಹಲ್ಯಾ ನಾನು ತಪ್ಪು ಮಾಡಿದೆ ನಿನಗೆ ತುಂಬಾ ಕಷ್ಟವ ಕೊಟ್ಟು ಬಿಟ್ಟೆ ಮಗಳೇ‌ ಕ್ಷಮಿಸು ಮಗಳೇ ಎಂದಳು.ಅಯ್ಯೋ ಹೋಗಲಿ ಬಿಡಮ್ಮಾ ಎಂದು ನೀನು ಮೊದಲು ಸರಿಯಾಗು ಎಂದಳು.ಪಕ್ಕದ ಮನೆಯ ಯಜಮಾನರು ಅಹಲ್ಯಾ ಳನ್ನು ನೋಡಲು ಬಂದರು.ನಮ್ಮಿಂದ ತುಂಬಾ ತೊಂದರೆ ಆಯಿತು ನಿಮಗೆ ಹೇಳಿ ಹತ್ತು ಸಾವಿರ ಹಣ ಕೊಟ್ಟರು.ನನ್ನ ಮಗ ನೆಲದಲ್ಲಿ ಎಣ್ಣೆ ಚೆಲ್ಲಿ ಹಾಕಿ ಇಷ್ಟೆಲ್ಲಾ ನಿಮಗೆ ತೊಂದರೆ ಆಯಿತು.ಅವನು ಹೆದರಿ ಮನೆಯಲ್ಲಿ ಕುಳಿತು ಅಳುತ್ತಿದ್ದಾನೆ.ಅವರ ಸ್ಥಿತಿ ನನ್ನಿಂದ ಹೀಗಾಯಿತಲ್ಲ ಎಂದು ಗೋಗರೆದ.ನಾನು ನಿಮ್ಮ ಆರೋಗ್ಯ ವಿಚಾರಿಸಲು ಬಂದೆ ಅಂದರು.ಅಹಲ್ಯಾ ಅವನನ್ನು ಕಳಿಹಿಸಿ ಮನೆಗೆ ಎಂದು ಹೇಳಿ ಕಳಿಸಿದಳು ನಾನು ಮಾತಾನಾಡುವೆ ಎಂದಳು.ಯಜಮಾನರು ಮನೆಗೆ ಹೋಗಿ ತನ್ನ ಮಗ ದುಷ್ಯಾಂತನನ್ನು ಕಳುಹಿಸಿ ಕೊಟ್ಟರು.ಆಗ ಅಳುತ್ತಾ ಬಂದು ಸಾರಿ ಆಂಟಿ ನಾನು ಮಾಡಿದ್ದು ತಪ್ಪಾಯಿತು.ಕ್ಷಮಿಸಿ ಎಂದು ಕಾಲಿಗೆ ಬಿದ್ದು ಅಂಗಲಾಚಿದನು.ಆಗ ಅಹಲ್ಯಾ ನೀನು ಬೇಕಂತ ಏನೂ ಮಾಡಿಲ್ಲ ಅಲ್ವಾ ಇರಲಿ ನನ್ನ ಒಂದು ನಿರ್ಲಕ್ಷ ಇದಕ್ಕೆಲ್ಲಾ ಕಾರಣವಾಯಿತು ಎಂದಳು.ಮಗಳು ಅನುಸೂಯಾ ಅಮ್ಮನ ಕಾಲ ಮೇಲೆ ಮಲಗಿ ಅಳತೊತಡಗಿದಳು.ಹಾಗೆಯೇ ವೀಲ್ ಚೇರ್ ಹಿಡಿದು ದುಷ್ಯಂತ ಅಳತೊತಡಗಿದನು.ಅಹಲ್ಯಾ ನನ್ನ ಹಣೆಬರಹ ಆಗಿದ್ದು ಆಗಿ ಹೋಯಿತು.ಇನ್ನು ಮುಂದೆ ನನ್ನ ಆರೋಗ್ಯ ಸರಿ ಆಗುವುದು ಎಲ್ಲವೂ ಅವನ ಇಚ್ಛೆಯಂತೆ ಆಗಲಿದೆ ಎಂದಳು. ಆರುತಿಂಗಳು ಅಹಲ್ಯಾ ಸೇವೆಯನ್ನು ಅನುಸೂಯಾ ದುಷ್ಯಂತ ಇಬ್ಬರು ಮಾಡಿದರು.ಕಾಲು ಸೊಂಟ ಎರಡು ನಿಧಾನವಾಗಿ ಸರಿ ಹೋಗುತ್ತಾ ಬಂತು.ನಂತರ ಆಫೀಸಿಗೆ ಪುನಃ ಹೋಗಲು ಆರಂಭಿಸಿದಳು ಅನುಸೂಯಾ.ದುಷ್ಯಂತ ಅಹಲ್ಯಾ ಳಿಗೆ ಸ್ವಲ್ಪ ಸಹಾಯ ಮಾಡಲು ಬರುತ್ತಿದ್ದ.ನಂತರ ತನ್ನ ಕಾಲೇಜಿಗೆ ಹೋಗುತ್ತಿದ್ದ.ಮನೆಯಲ್ಲಿ ಅಹಲ್ಯಾ ಳಿಗೆ ಅಡುಗೆಯನ್ನು ಮಾಡಿ ಎಲ್ಲಾ ಟೇಬಲ್ ಮೇಲೆ ಇಟ್ಟು ಹೋಗುತ್ತಿದ್ದಳು.ಅಹಲ್ಯಾ ಹಸಿವಾದಾಗ ತಿನ್ನುತ್ತಿದ್ದಳು.ಕುಳಿತಲ್ಲೆ ಮನೆಯ ಸಣ್ಣಪುಟ್ಟ ಕೆಲಸವ ಮಾಡುತ್ತಾ ಹೀಗೆ ಜೀವನ ಸಾಗುತ್ತಿತ್ತು.ಅಹಲ್ಯಾ ಹಾಗೂ ಅನುಸೂಯಾ ಇಬ್ಬರು ಚೆನ್ನಾಗಿ ಇದ್ದರು.ಅಹಲ್ಯಾಳ ಆರೋಗ್ಯ ಸರಿಹೋಗುತ್ತಾ ಬಂತು.


ಯಶೋದ.ಗಾಣಿಗ, ಗೃಹಿಣಿ 🙏🙏🙏🙏🙏.

[30/11, 6:23 PM] Tulasi Naveen: ಸ್ಪರ್ಧೆಗಾಗಿ:


ಶೀರ್ಷಿಕೆ : ಉಸಿರು ನೀಡಿದ ಹಸಿರು



ಅಮ್ಮಾ ನಿನ್ನ ಎದೆಯಾಳದಲ್ಲಿ

ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು....


ವಾವ್! ಎಂತಹ ಭಾವತ್ವವಿರುವ ಭಾವನೆಗಳ ಗುಚ್ಛ. ನಿಜಕ್ಕೂ ಮೈ ನವಿರೇಳಿಸುತ್ತದೆ. ಬಿ. ಆರ್. ಲಕ್ಷ್ಮಣರಾವ್ ರವರ ಸಾಹಿತ್ಯವಿರುವ ಈ ಕವಿತೆ ಎಂತವರ ಮನವನ್ನು ತುಸು ತಲ್ಲಣಿಸದೆ ಇರದು . ತಾಯಿಯ ಒಡಲೊಳಗೆ ತೊಳಲಾಡಿ ಅನುಭವಿಸುವ ಹಿತವಾದ ಸ್ಪರ್ಶಸುಖ ಈ ಪ್ರಪಂಚದಲ್ಲಿ ಮತ್ತೆಲ್ಲಿಯೂ ಸಿಗದು. ಆ ಎರಡಕ್ಷರದಲ್ಲಿ ಎಂತಹ ಆಕರ್ಷಣೆ, ಅದೆಂತಹ ಪ್ರೀತಿ, ಮಾತೃ ವಾತ್ಸಲ್ಯ!

  ಇಷ್ಟು ದಿನ ಗರ್ಭ ಸಾಗರದಲ್ಲಿ ಈಜುತ್ತಿರುವ ಮಗು ಅಲ್ಲಿಂದಾಚೆ ಬರಲು ಹಾತೊರೆಯುತ್ತದೆ. ಹಾಗೆಯೇ ಆ ಕೂಸು ಹೊರಬಂದು ಜಗವನ್ನು ಸುತ್ತಿ, ಜೀವನದಲ್ಲಿ ಸಿಹಿ - ಕಹಿಗಳನ್ನು ಅನುಭವಿಸಿ ಶಕ್ತಿಗುಂದಿ ಕೊನೆಗೆ ತನ್ನ ತಾಯಿಯ ಮಡಿಲನ್ನು ಸೇರಲು ಬಯಸುತ್ತದೆ. ಕವಿಗಳು ಬರೆದಿರುವ ಈ ವಾಸ್ತವ ಸೊಗಸು ಸಾಲುಗಳು ಹಾಲಿನ ಬಿಳುಪಿನಷ್ಟೇ ಸತ್ಯ, ಅಕ್ಷರಶಃ  ನಿಜ. ಗರ್ಭದಲ್ಲಿ ಕರುಳ ಬಳ್ಳಿಯ ಮೂಲಕ ಒಲವನ್ನು ಉಣಬಡಿಸುವ ತಾಯಿ ನಂತರ  ಇಡೀ ಜೀವಿತವನ್ನು ತನ್ನ ಕುಡಿಯ ಅಭ್ಯುದಯಕ್ಕೆ ತೆರೆದಿಡುತ್ತಾಳೆ. ಎಷ್ಟೋ ರಾತ್ರಿಗಳನ್ನು ಅಂಬರದ ಚುಕ್ಕಿಗಳನ್ನು ಎಣಿಸುವುದರಲ್ಲಿಯೇ ಕಳೆಯುತ್ತಾಳೆ. ಹಸಿವೆಯಿಂದ ಕಳೆದ ದಿನಗಳು ಅದೆಷ್ಟೋ. ಇಂದು ಎಷ್ಟೋ ಜನ ಸಾಧಿಸಿ ಮಹಾನ್ ಸಾಧಕರೆನಿಸಿಕೊಂಡವರ ಸಾಧನೆಯ ಹಿಂದೆ ಶೇಕಡ 90 ಕ್ಕಿಂತಲೂ ಹೆಚ್ಚಿನ ಪಾತ್ರ ತ್ಯಾಗ ಆ ಮಹಾತಾಯಿಯದ್ದಾಗಿದೆ. ತನ್ನನ್ನು ವೃದ್ಧಾಶ್ರಮದಲ್ಲಿ ಇರಿಸಿದರೂ ತನ್ನ ಮಗುವಿನ ಬಾಲ್ಯವನ್ನು ಕಣ್ಣರಳಿಸಿ ಮನ ತುಂಬಿಕೊಂಡು ಎರಡು ಕೈಯೆತ್ತಿ ಹರಸುವ ಅವಳ ವ್ಯಕ್ತಿತ್ವಕ್ಕೆ ತಾಯಿ ಎಂಬ ಪದವೂ ಸೋಲುತ್ತದೆ. ಈ ಪ್ರಪಂಚದಲ್ಲಿ ತಾಯಿಯ ಬಗ್ಗೆ ವಿಭಿನ್ನ ನಿಲುವುಳ್ಳ ಮಕ್ಕಳು ಇರಬಹುದು ಆದರೆ ತನ್ನ ಮಕ್ಕಳಿಗೆ ಕೆಡುಕನ್ನು ಬಯಸುವ ಅಮ್ಮ ಎಲ್ಲಿಯೂ ಸಿಗಲಾರಳು. ಅವಳದ್ದು ದೇವರ ರೂಪ. ಪರಮಾತ್ಮನನ್ನು ನಾವು ತಾಯಿಯಲ್ಲಿ ಕಾಣಬಹುದು ಎಂದೇನೋ ದೇವರು ಈ ಜಗತ್ತಿನಲ್ಲಿ ತಾಯಿ ಎನ್ನುವ ಅದ್ಭುತ ಶಕ್ತಿಯನ್ನು ಸೃಷ್ಟಿಸಿದ್ದಾನೆ. ''ಈಗ ನಾನು ಏನಾಗಿದ್ದೇನೋ ಅದಕ್ಕೆ ಕಾರಣ ನಮ್ಮಮ್ಮ. ನಾನು ಇನ್ನೇನು ಆದರೂ ಆಕೆಯ ಋಣವನ್ನು ತೀರಿಸುವುದಕ್ಕಂತು ಸಾಧ್ಯವಿಲ್ಲ'' ಎಂಬ ಮಹಾನ್ ಸಂತ ವಿವೇಕಾನಂದರ ನುಡಿಗಳು ಬಹುಶಃ ಎಲ್ಲರಿಗೂ ಅನ್ವಯವಾಗುತ್ತದೆ. ''ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ. ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಅಂದರೆ ಇಡೀ ದೇಶದ ಖುಷಿ  ತಾಯಿಯ ಮೇಲೆ ನಿಂತಿದೆ'' ಎಂಬ ನಮ್ಮ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ರವರ ಮಾತು ತಾಯಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ.

 ಮಕ್ಕಳೇ ಸರ್ವಸ್ವವಾಗಿರುವ ಆಕೆಗೆ ಕೊನೆಯವರೆಗೆ ಸಂತಸದ ಸವಿಯನ್ನು ಬಡಿಸುವ ಜವಾಬ್ದಾರಿ ಪ್ರತಿಯೊಂದು ಮಗುವಿನದ್ದು. ಆಗ ಮಾತ್ರ ಆ ಮಗು ಬದುಕಿನಲ್ಲಿ ಸಿರಿತನವನ್ನು ಕಾಣಲು ಸಾಧ್ಯ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ಸಾಧ್ಯ. ತನ್ನ ರಕ್ತವನ್ನು ಬಸಿದು ಒಂದು ಮಗುವಿಗೆ ಜನ್ಮ ನೀಡುವ ತಾಯಿಯ ಋಣ ತೀರಿಸಲು ಖಂಡಿತ ಸಾಧ್ಯವಿಲ್ಲ. ಮಹಾತಾಯಿಗೋಸ್ಕರ ನಮ್ಮ ಜೀವ ಮತ್ತು ಜೀವನವನ್ನು ಮುಡಿಪಾಗಿಡೋಣ. ಅವಳ ತ್ಯಾಗ ಜೀವನದತ್ತ ನಾವೂ ಸಾಗೋಣ. ನಮ್ಮನ್ನು ಪರಿಪೂರ್ಣರನ್ನಾಗಿಸುವ ನಿಟ್ಟಿನಲ್ಲಿ ಆಕೆ ತೋರಿಸಿದ ದಿಕ್ಕಿನತ್ತ ಸಾಗಿ ಬದುಕನ್ನು ಜಯಿಸೋಣ. ಉಸಿರು ನೀಡಿದ ಮಹಾ ತಾಯಿಯ ಬದುಕನ್ನು ಸದಾ ಹಸಿರಾಗಿಸಿ ಆಕೆಯ ಮನವನ್ನು ಹಸನಾಗಿಸೋಣ.


ಗಾಯತ್ರಿ ನಾರಾಯಣ ಅಡಿಗ

ಶಿಕ್ಷಕರು, ಬೈಂದೂರು ವಲಯ.

[30/11, 6:23 PM] Tulasi Naveen: "ಬತ್ತದ ತೊರೆ ಸ್ನೇಹ ಬಳಗ" ತಿಂಗಳ ಸ್ಪರ್ಧೆ ೨೬/೧೧/೨೦೨೧

ವಿಷಯ : ಇಷ್ಟವಾದ ಭಾವಗೀತೆ ಯ ಸಾಲಿನಿಂದ ಕಥೆ ಅಥವಾ ಲೇಖನ


 *ಶಿರ್ಷಿಕೆ : ಜಗದಲ್ಲಿರುವ ಎಲ್ಲವೂ ಜಗದೊಡೆಯನದೇ*

"ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು

ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು"

      

            ಜಿ.ಎಸ್. ಶಿವರುದ್ರಪ್ಪನವರು ಬರೆದ ಈ ಭಾವಗೀತೆಯ ಈ ಸಾಲುಗಳು ನನಗೆ ತುಂಬಾ ಇಷ್ಟ ಮತ್ತು ಈ ಭಾವಗೀತೆನು ಇಷ್ಟಾ. ಮನೆಯಲ್ಲಿ ಬೆಳಗುವ ದೀಪ, ಹಾಗೂ ಬೀಸುವ ಗಾಳಿ ಎರಡೂ ಸೃಷ್ಟಿ ಮಾಡಿರುವ ಅದ್ಭುತ ಸಾಧನೆಗಳು. ಹಾಗಾಗಿ ಗಾಳಿ ಬೇಕು ಬದುಕಲು, ದೀಪ ಬೇಕು ಬೆಳಗಲು ನೀನೆ ಮಾಡಿದ ದೀಪವನ್ನು ನೀನೆ ಸೃಷ್ಟಿಸಿದ ಗಾಳಿಯಿಂದ ರಕ್ಷಿಸಬೇಕು. ಹಾಗೇ ಈ ಮನದಲ್ಲಿ ಬೆಳಕು ನೀಡಲೆಂದು ಬೆಳಗುವ ದೀಪವು, ಯಾರಾದರೂ ಬಂದು ಆ ದೀಪವನ್ನು ಕೆಟ್ಟತನದ ಗಾಳಿ ಬಂದು ಬಿಸಿ ಆ ಮನದಲ್ಲಿ ದೀಪದ ಬದಲು ಹತ್ತಿ ಉರಿಯುವ ಬೆಂಕಿ ಆಗದಿರಲಿ, ಉರಿದುರಿದು ಆರದಿರಲಿ ಅದರ ಹೊಣೆ ನೀನ್ನದು ಜಗದೊಡೆಯ ಎಂಬ ಭಾವಾರ್ಥ ಮೂಡಿ ಬಂದಿದೆ ಎಂದು ನನ್ನ ಮನದ ಬಯಕೆ. 

          ಮುಂದೆ ನೋಡಿ ಎಷ್ಟು ಸೊಗಸಾಗಿ ವರ್ಣಿಸಿದ್ದಾರೆ ನಮ್ಮ ಜೀವನವನ್ನು ನೀರಿನಲ್ಲಿ ತೇಲುವ ದೋಣಿಗೆ ಹೊಲಿಸಿದ್ದಾರೆ. ಕಡಲು ನಿನ್ನದೆ ಹಡಗು ನಿನ್ನದೆ, ಅಂದರೆ ನಮ್ಮ ಜೀವನ ಬೃಹದಾಕಾರದ ಸಮುದ್ರವಿದ್ದಂತೆ ಅದರೊಳಗೆ ನಾವುಗಳು ಹಡಗುಗಳು ಇದ್ದಂತೆ, ನೀನು ನಮ್ಮ ನಡೆಸುವ ನಾವಿಕ.ಒಂದು ದಡದಿಂದ ಮತ್ತೊಂದು ದಡಕ್ಕೆ ಅಂದರೆ ಹುಟ್ಟು ಎಂಬ ದಡದಿಂದ ಸಾವು ಎಂಬ ದಡ ಸೇರುವವರೆಗೂ ನಾವು ಎಂಬ ಪಯಣದ ಮಧ್ಯದಲ್ಲಿ ಹಡಗು ಮುಳುಗಿ ಹೋಗದಂತೆ ಕಾಪಾಡುವ ಹೊಣೆ ನಿನ್ನದು. ಆಗಾಗ ಹಡಗು ಮುಳುಗಿಸಲು ಅಪ್ಪಳಿಸುವ ಅಲೆಗಳನ್ನು ದಾಟಿ ಅಂದರೆ ಜೀವನದಲ್ಲಿ ಎಷ್ಟೇ ಗಟ್ಟಿ ಇದ್ದರು, ಕಲ್ಲು ಬಂಡೆಯಾಗಿದ್ದರು ಅದನ್ನು ಕುಗ್ಗಿಸಲು ಅಥವಾ ನಮ್ಮನ್ನು ಪರೀಕ್ಷಿಸಲು ನೀನೆ ನೀಡುವ ಅಲೆಗಳಂತಹ ಸಮಸ್ಯೆಗಳನ್ನು ದಾಟಿ ಮುನ್ನಡಿಸುವ ಶಕ್ತಿ, ಧೈರ್ಯ, ತಾಳ್ಮೆ ನೀಡುವ ಹೊಣೆ ನಿನ್ನದು.

                  ಜೀವನವೆಂಬ ದೀಪ ಬೆಳಗಲು ಅದೆಂತಾ ಬೀರುಗಾಳಿ ಬೀಸಿದರು ಅದನ್ನು ತಡೆಯುವ  ಹೊಣೆ ನಿನ್ನದು. ಯಾರಿಗೂ ಕೆಡಕು ಮಾಡದೇ ಸದಾ ಪರರ ಒಳೆತು ಮಾಡುವ ದೀಪದಂತಿರುವ ಮನುಷ್ಯರ ಬಾಳಲಿ ಅದನ್ನು ಉಪ್ ಎಂದು ಉಬುವ ಜನರನ್ನು ನೀನೆ ಸೃಷ್ಟಸಿರುತ್ತೀಯಾ ಆ ದೀಪ ಆರದಿರಲು ಉಬುವವರ ಮೀರಿ ಬೆಳಗುವ ಶಕ್ತಿ ನೀಡು ದೇವಾ ಎಂಬ ಗೂಢಾರ್ಥ ಈ ಸಾಲುಗಳು ಹೊಂದಿವೆ. 


✍🏻 *ಸುಮಂಗಲಾ.ವಿ.ಕೆ* ✍🏻

ಧಾರವಾಡ

[30/11, 6:23 PM] Tulasi Naveen: "ಬತ್ತದ ತೊರೆ"ಸ್ನೇಹ ಬಳಗ

ದಿನಾಂಕ:೨೬--೧೧-೨೦೨೧ ಶುಕ್ರವಾರ


*ತಿಂಗಳ ಸ್ಪರ್ಧೆ*


*(ಇಷ್ಟ ವಾದ ಭಾವಗೀತೆ ಯ ಸಾಲಿನಿಂದ ಸುಂದರವಾದ ಕಥೆ)*


*ಎಲ್ಲೋ ಹುಡುಕಿದೆ ಇಲ್ಲದ ದೇವರ*

*ಕಲ್ಲು ಮಣ್ಣಿನ ಗುಡಿಯೊಳಗೆ|*

*ಇಲ್ಲೇ ಇರುವ ಪ್ರೀತಿ ಸ್ನೇಹಗಳ*

*ಗುರುತಿಸೆದಾದೆನು ನಮ್ಮೊಳಗೆ||*


      *ಜಿ.ಎಸ್. ಶಿವರುದ್ರಪ್ಪ*



    *ತಪ್ಪು ಕಲ್ಪನೆಯ  ಪರಿಧಿ*



"ಯಾಕೋ ಏನೋ ನನಗೆ ನಾನೇ ಒಂದು ವರ್ತುಲವನ್ನು ನಿರ್ಮಿಸಿದವಳು.ಅದರೊಳಗೆ ಸಿಲುಕಿ ಹೊರ ಬರಲಾರದೆ ಒದ್ದಾಡುತ್ತಿರುವೆನು.ಏನಾದರೂ ಒಂದು ಉಪಾಯ ಹೇಳೆಂದು"ಜೀವದ ಗೆಳತಿ ಆರತಿ ಮೊನ್ನೆ ವಿವಾಹ ಸಮಾರಂಭದಲ್ಲಿ ಭೇಟಿಯಾದಾಗ ಹೇಳುತ್ತಾ ಕಣ್ಣೀರು ಹಾಕಿದಳು.ಇಲ್ಲಿ ಬೇಡ,'ನಡೆದ ವಿಷಯವನ್ನೆಲ್ಲ ಮುಚ್ಚಿಡದೆ ಹೇಳು,ನಂತರ ಯೋಚಿಸಿ ಹೇಳುವೆ'ಎಂದೆ. ಗೆಳತಿ ಹೇಳಿದ ಮಾತುಗಳ ಚಾಚುತಪ್ಪದೆ ಕೇಳಿಸಿಕೊಂಡೆ.ಮನೆಗೆ ಬಂದರೂ ನನಗೆ ಆರತಿಯ ಕಣ್ಣೀರು ಮತ್ತು ಮಾತುಗಳೇ ಪ್ರತಿಧ್ವನಿಸುತ್ತಿತ್ತು.


ನಾನು ಆರತಿ ಬಾಲ್ಯದ ಗೆಳತಿಯರು.ಒಟ್ಟಿಗೆ ಶಾಲೆ,ಬುತ್ತಿ ಊಟ ಎಲ್ಲ.ಹಾಗೆಯೇ ಬೆಳೆದು ದೊಡ್ಡವರಾದ ನಮಗೆ ಒಳ್ಳೆಯ ಮನೆತನದ ಸಂಬಂಧ ಮಾಡಲಾಯಿತು.ಮದುವೆಯಾಗಿ ಬೇರೆ ಬೇರೆಯಾದ ನಾವುಗಳು ಆಗೊಮ್ಮೆ ಈಗೊಮ್ಮೆ ಕಾರ್ಯಕ್ರಮ ಗಳಲ್ಲಿ ಭೇಟಿಯಾಗುತ್ತಿದ್ದೆವು.ಆರತಿ ಲವಲವಿಕೆ ಯಲ್ಲಿರುವ ಹೆಣ್ಣು ಮಗಳು.ಆದರೆ ಇತ್ತೀಚೆಗೆ ಮಂಕು ಕವಿದಂತೆ ,ಉಲ್ಲಾಸವೇ ಇಲ್ಲದಂತೆ ಕಾಣುತ್ತಿದ್ದಳು.

ಆರತಿಯ ಕೈಹಿಡಿದ ಅಜಿತ್ ಬ್ಯಾಂಕ್ ಲ್ಲಿ ನಾಲ್ಕಂಕೆಯ ಸಂಬಳ ಎಣಿಸುತ್ತಿದ್ದ.ಹೊರಗಿನಿಂದ ಕಾಣುವಾಗ ಸುಂದರ,ಪ್ರಾಮಾಣಿಕ ವ್ಯಕ್ತಿತ್ವ.ಜೀವನಕ್ಕೇನೂ ತೊಂದರೆಯಿಲ್ಲ. ಸ್ವಂತ ಮನೆ ವಾಹನ ಪ್ರೀತಿಸುವ ಅತ್ತೆ ಮಾವ  ಇದ್ದರು.ಗಂಡನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ.ಆದರೆ ಎಲ್ಲಾ ಯಾಂತ್ರಿಕ ಬದುಕು.


ಒಂದೆರಡು ಸಲ ಅವನ ಜೊತೆಗೆ ಮನೆಯವರೆಗೂ ಬಣ್ಣದ ಚಿಟ್ಟೆ ಎನಿಸಿಕೊಂಡ ಐಶ್ವರ್ಯ ಬಂದಿದ್ದಳು.ನಾನೂ ಅವಳನ್ನು ನೋಡಿದವಳು.ತಾನೇ ದೇವಲೋಕದ ರಂಭೆ ಎಂಬ ಅಹಂ ಬೇರೆ ಆಕೆಗೆ. ಆಕೆಯೊಡನೆ ಅಜಿತ್. ನ ಮಾತುಕತೆ, ನಗು ಹಾವಭಾವಗಳು ಆರತಿಗೆ ನುಂಗಲಾರದ ತುತ್ತಾಗಿತ್ತು. *ಬಿಸಿ ತುಪ್ಪದಂತೆ ನುಂಗಲೂ ಅಲ್ಲ ಉಗುಳಲೂ ಅಲ್ಲ* ಎಂಬಂತಾಗಿತ್ತು.ಇವಳು ಬರುವ ಮೊದಲೆ ನನ್ನನ್ನು ಎಷ್ಟು ಪ್ರೀತಿಸುತ್ತಿದ್ದವನು ಇವನೇನಾ? ನನ್ನ ಹಿಂದೆ ಮುಂದೆ ಸುತ್ತುತ್ತಿರುವಾಗ,ಅತ್ತೆಯವರು ಹೇಳಿದ ಮಾತು" ಬೇಗ ಮಡಿಲಿಗೊಂದು ಕೂಸು ಬರಲಿ ,ಆಗ ಇದೆಲ್ಲ ಓಡಿಹೋಗ್ತದೆ'ಎಂದು ನಗುತ್ತಿದ್ದರು.ಕೇಳಿಸಿಕೊಂಡ ಮಾವನವರು,'ಸುಮ್ಮನಿರೆ,ನಮ್ಮ ಅಂದಿನ ದಿನಗಳನ್ನು ನೆನಪಿಸಿಕೊ'ಎಂದು ಹೇಳಿದಾಗ,ಸೆರಗನ್ನು ಬಾಯಿಗೊತ್ತಿ ನಗುವ ಸರದಿ ಅತ್ತೆಯವರದಾಗಿತ್ತು. ಈ ವಯಸ್ಸಿನಲ್ಲೂ ಎರಕ ಹೊಯಿದಂತೆ ಇದ್ದಾರೆಂದು ಸಂತಸವಾಗುತ್ತಿತ್ತು.


ಇಂದು ಮಲಗಿದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಕಾರಣ ಆಗ ಗಂಡ ಸ್ನಾನಕ್ಕೆ ಹೋದಾಗ ಒಂದು ಕರೆ ಬಂತು.ತೆಗೆದು ಕಿವಿಗಾನಿಸಿದರೆ" ನಾಳೆ ಬೇಗ ಬನ್ನಿ ಕಛೇರಿಗೆ,ಮುಖ್ಯವಾದ ವಿಷಯ ಮಾತನಾಡಬೇಕೆಂಬ' ಮಹಿಳೆಯ ಧ್ವನಿ.ಕೋಪದಿಂದ ಅಲ್ಲೇ ಫೋನನ್ನು ಕುಕ್ಕಿದೆ.ಗಂಡ ಹೆಂಡತಿ ನಡುವಿನ ಬಿರುಕು ಹೆಚ್ಚುತ್ತಾ ಹೋಯಿತು.ಮತ್ತಷ್ಟೂ ಚಡಪಡಿಕೆ ನನ್ನೊಳಗೆ ಆರಂಭವಾಯಿತು.


ಅಷ್ಟರಲ್ಲಿ ಗೆಳತಿಯ ಭೇಟಿಯಾಗಿ ಮಾತುಕತೆಯಾಯಿತು.ಆರತಿಯ ಮನದಿ ಗೂಡು ಕಟ್ಟಿದ ಸಂಶಯವನ್ನು ತಿಳಿಯಾಗಿಸಲು ಯೋಚಿಸಿದೆ.ಅಜಿತ್ ನನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಅಜಿತ್ ನಂಥ ಹುಡುಗನನ್ನು ಪತಿಯಾಗಿ ಪಡೆದದ್ದು ಇವಳ ಪುಣ್ಯ ಎಂದರಿತೆ.


ಅಯ್ಯೋ, 'ನನ್ನ ಗೆಳತಿಯ *ತಪ್ಪು ಕಲ್ಪನೆಯ ಪರಿಧಿ* ಇಷ್ಟೆಲ್ಲಾ ಅನಾಹುತ ಸೃಷ್ಟಿ ಮಾಡಿತಲ್ಲ?' ಅನಿಸಿ ಮನಸ್ಸಿಗೆ ವೇದನೆಯಾಯಿತು.

ಜಿ.ಎಸ್.ಶಿವರುದ್ರಪ್ಪ ನವರ ಭಾವಗೀತೆಯ  ಒಂದೆರಡು ಸಾಲು ನೆನಪಿಗೆ ಬಂತು.ಸಾಮರಸ್ಯ ವಿಲ್ಲದ ಬದುಕು,ತನುವಿನೊಳಗಿನ ಸಂಶಯ,ಹತ್ತರವಿದ್ದೂ ದೂರವಿದ್ದಂತೆ  ಭಾಸವಾಗುವುದು, *ಅಹಮಿನ ಕೋಟೆ* ಯೊಡೆದು ಹೊರ ಬರಬೇಕು.ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ.ಎಲ್ಲವೂ ನಮ್ಮ ನಮ್ಮೊಳಗೆ ಅಡಗಿದೆ ಎಂದ ಮೇಲೆ ನಮಗೆ ನಾವೇ ಒಂದು ಪರಿಧಿಯನ್ನೋ,ಕೋಟೆಯನ್ನೋ ಕಟ್ಟಿ ಕೊಳ್ಳುವುದಕ್ಕೆ ಅರ್ಥ ವಿಲ್ಲ.ದೇವರು ಎಲ್ಲಿಯೋ ಕಲ್ಲು ಮಣ್ಣಿನ ಗುಡಿಯೊಳಗಿಲ್ಲ ಹುಡುಕುವ ಅಗತ್ಯವಿಲ್ಲ. ನಮ್ಮ ಮನದಾಳದ ಪ್ರೀತಿ ಸ್ನೇಹದೊಳಗೆ ಭಗವಂತನ ನೆಲೆಯಿದೆ.ದಾಂಪತ್ಯದ ಸವಿ ಹಾದಿಯೇ ಭಗವಂತನ ವಾಸಸ್ಥಾನ.ಹೊಂದಾಣಿಕೆಯ ಜೀವನವೇ ಮುಖ್ಯ.' ಇದನ್ನೆಲ್ಲ ಗೆಳತಿಗೆ ಮನವರಿಕೆ ಮಾಡಿದೆ.

"ಆಕೆ ಬಣ್ಣದ ಚಿಟ್ಟೆ ಅಲ್ಲ,ಏನೋ ಆಕೆ ಬೆಳೆದ ವಾತಾವರಣ ಹಾಗಿದೆ. ಆಕೆಯ ಗಂಡ ಬೇರೆ ಹೆಣ್ಣು ಮಗಳ ಸಹವಾಸ ಮಾಡಿ,ಇವಳಿಗೆ ವಿಚ್ಛೇದನ ಕೊಡ್ತಾನಂತೆ.ಆ ನೋವನ್ನು ನಿನ್ನವನೊಂದಿಗೆ ಹೇಳ್ತಾ ಇದ್ದಳು ಅಷ್ಟೆ. ಚಂದದಲ್ಲಿ ಅಜಿತನೊಂದಿಗೆ ಸಂಸಾರ ಮಾಡೆಂದು'ಹೇಳಿದೆ.ನಾಚಿಕೆಯಿಂದ ತಲೆ ತಗ್ಗಿಸಿದಳು. 

 .ಪಶ್ಚಾತ್ತಾಪ ದ ಕಣ್ಣೀರು ಹರಿಯಿತು ಆರತಿಗೆ.ಬೆನ್ನು ನೇವರಿಸಿ ಸಮಾಧಾನ ಪಡಿಸಿದೆ.ರೇಡಿಯೋದಲ್ಲಿ *ಎಲ್ಲೋ ಹುಡುಕಿದೆ ಇಲ್ಲದ ದೇವರ* ಭಾವಗೀತೆ ಪ್ರಸಾರವಾಗುತ್ತಿತ್ತು.



*✍️ರತ್ನಾ ಕೆ ಭಟ್, ತಲಂಜೇರಿ*

[30/11, 6:23 PM] Tulasi Naveen: ಬತ್ತದ ತೊರೆ ಬಳಗದ ತಿಂಗಳ ಸಾಹಿತ್ಯ ಸ್ಪರ್ಧೆಗಾಗಿ

ಲೇಖನ:ದೀಪವು ನಿನ್ನದೇ ಗಾಳಿಯು ನಿನ್ನದೇ

     *ಸೃಷ್ಟಿಕರ್ತನ ಲೀಲೆ*

-------------------------------------

ನಾನು/ಕೆ.ಎಸ್.ನರಸಿಂಹಸ್ವಾಮಿ ಅವರ ರಚನೆಯ *ದೀಪವು ನಿನ್ನದೇ ಗಾಳಿಯು ನಿನ್ನದೇ* ಈ ಭಾವಗೀತೆಯ ಸಾಲಿನಲ್ಲಿ ಅಡಗಿರುವ ವಿಶೇಷ ಅರ್ಥವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದ್ದೇನೆ.


ಈ ಸೃಷ್ಟಿಯಲ್ಲಿ ಆ ಭಗವಂತನೇ ಆದಿ ,ಅನಾದಿ,ಮೂಲ, ಮಹತ್ವ ಎಲ್ಲವೂ,ಅವನಿಲ್ಲದೇ ಚರಾಚಾರಗಳೆಲ್ಲವೂ ನಿಸ್ತೇಜ.ಪ್ರತಿಯೊಂದು ವಸ್ತುವಿಗೂ ಅವನಿಂದಲೇ ಚಾಲನೆ.ಈ ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವು ಕೂಡಾ ಅವನ ಸೃಷ್ಟಿಯೇ ಆಗಿದ್ದರೂ,ಪರಸ್ಪರ ಮುಖಾ ಮುಖಿಯಿಂದ ಯಾವುದೇ ರೀತಿಯ ಹಾನಿಯಾಗದಂತೆ ಕಾಪಾಡುವ ,ಜಗತ್ತನ್ನು ಸಮತೋಲನದಲ್ಲಿ ಇರಿಸುವ ಮಹತ್ಕಾರ್ಯ  ಅವನಿಂದಲೇ ಆಗಬೇಕಿದೆ.


ದೀಪವು, ತೈಲ ಬತ್ತಿಯ ಸಾಂಗತ್ಯದಿಂದ ಭಗವಂತನ ಸಾನಿಧ್ಯದಲ್ಲಿ ಬೆಳಕಾಗಿ ಹೊಮ್ಮಿ ಕತ್ತಲನ್ನು ಅಟ್ಟಿ ಬೆಳಕಿನ ಪ್ರಭೆಯಾಗಿ ಹೊಳೆದು ತನ್ನ ಸುತ್ತು ಮುತ್ತ ಬೆಳಕು ನೀಡುವಂತಾದ್ದು.ಆ ದೀಪವು ಬೆಳಗಿ ಜಗತ್ತಿನ ಕತ್ತಲು ನೀಗುವ ವಾಂಛೆ ಆ ಪರಮಾತ್ಮನದ್ದೇ ಆದರೂ ಅದೇ ಸಮಯಕ್ಕೆ ಗಾಳಿಯೂ ಸಹ ಈ ಸೃಷ್ಟಿಯ ಒಂದು ಭಾಗವೇ ಆಗಿದೆ.ಎತ್ತ ಹೋದರೂ ಗಾಳಿ ಇಲ್ಲದ ಸ್ಥಳವಿಲ್ಲ.ತಂಗಾಳಿ ಬೀಸಿ ತಂಪೀಯುವ ಅನುಭವ ನೀಡುವುದು ಈ ಪ್ರಕೃತಿಯ ಕ್ರಿಯೆಯೇ ಆಗಿದೆ.ಆದರೆ,ಅದೇ ತಂಗಾಳಿಯ ಚಲನೆಗೆ ಉರಿಯುತ್ತಿರುವ ನಂದಾದೀಪವು ಆರಿ ಹೋದರೆ  ಆಗ ಲೋಕವೇ ಕತ್ತಲು ಇವೆಲ್ಲವನು ಸಮತೋಲನದಲ್ಲಿ ಇರಿಸುವ ಸಾಮರ್ಥ್ಯ ಇರುವುದು ಆ ಸೃಷ್ಟಿಕರ್ತನಿಗೆ ಮಾತ್ರ


ಆ ವಿಶಾಲವಾದ ಕಡಲು ಸಹ ಆತನ ಸೃಷ್ಟಿಯ ಒಂದು ಭಾಗ.ಅದು ಉಬ್ಬರ ಇಳಿತವಿಲ್ಲದೇ ಶಾಂತವಾಗಿದ್ದಾಗ ಎಲ್ಲವೂ ಸೊಗಸು.ತನ್ನೊಳಗೆ ಚಲಿಸುವ ಹಡಗನ್ನು ಅದರಲ್ಲಿರುವ ಜೀವಗಳನ್ನು  ಸ್ವಸ್ಥವಾಗಿ ನೆಲೆ ಕಾಣಿಸುತ್ತದೆ.ಆದರೆ ಯಾವುದೇ ಪ್ರಕೃತಿ ವಿಕೋಪಗಳಿಗೆ ಈಡಾದರೆ ಅಲ್ಲಿರುವ ಜನರ ಬದುಕು ಛಿದ್ರವೇ ಸರಿ ಇದೆಲ್ಲವನ್ನು ಸಮಪ್ರಮಾಣದಲ್ಲಿ ತೂಗಿಸುವುದು ಎಲ್ಲವೂ ಭಗವಂತನ ಕೈಯಲ್ಲಿಯೇ ಇದೆ ಎಂಬುದು ಇಲ್ಲಿ ಬಹು ಸೂಕ್ಷ್ಮವಾಗಿ ಸೂಚಿಸಲ್ಪಟ್ಟಿದೆ


ಹಾಗೆಯೇ ವಿಶಾಲವಾದ ಬೆಟ್ಟ, ಗುಡ್ಡ, ಬಯಲು ಎಲ್ಲವೂ ಪರಮಾತ್ಮನದ್ದೇ .ಎಲ್ಲೆಡೆಗೂ ಪ್ರೀತಿ ಹಂಚಬೇಕಾದದ್ದು ಸಹಾ ಅವನಿಂದಲೇ ಅಗಬೇಕಾಗಿರುವಂತಾದ್ದು ,ಈ ರೀತಿ ಪ್ರೀತಿ ಭಾಂಧವ್ಯ ಇಲ್ಲದೇ ಇದ್ದರೆ ಚರಾಚಾರಗಳಲ್ಲಿ ಸಾಮರಸ್ಯ ಇರುವುದಿಲ್ಲ .

ಅಲ್ಲದೇ ಈ ಭೂಮಿಯಲ್ಲಿ ಬಿಸಿಲು ಕೂಡಾ ಬೇಕು. ಅಂತೆಯೇ ನೆರಳಿನ ಅವಶ್ಯಕತೆಯೂ ಇದೆ.ಯಾವುದೇ ಅತಿಯಾದರೂ ಅಪಾಯ ತಪ್ಪಿದ್ದಲ್ಲ ತಾಪಮಾನ ಸಮತೋಲನದಲ್ಲಿ ಇರಬೇಕಾದರೆ ಇವೆಲ್ಲವನ್ನ ಒಂದೇ ರೀತಿಯಾಗಿ ಇರುವಂತೆ ಮಾಡಲು ಆತನ ಕರುಣೆ ಅಗತ್ಯವೆಂವುದು ನಿತ್ಯ ಸತ್ಯ.


ಅಲ್ಲದೇ ಪ್ರಕೃತಿಯಲ್ಲಿ ಮಳೆ ಗಾಳಿ, ಸಿಡಿಲು, ಮಿಂಚು ಎಲ್ಲವೂ ಎಷ್ಟು ಬೇಕೋ ಅಷ್ಟು ಮಾತ್ರ ಇರಬೇಕು.ಆಗೊಮ್ಮೆ ಹೀಗೊಮ್ಮೆ ಅಗತ್ಯವಿದ್ದಷ್ಟು ಮಾತ್ರವಿದ್ದಲ್ಲಿ ಮಾತ್ರ ಉತ್ತಮ.ಅತಿಯಾದಾಗ ಎಲ್ಲವೂ ಅಯೋಮಯ.ಅದನ್ನು ಕಾಯ್ದುಕೊಳ್ಳುವುದು ಜೀವಗಳನ್ನು ಬದುಕಿಸುವುದು ,ನಲಿಸುವುದು ಆತನಿಂದಲೇ ಅಲ್ಲದೇ ಇನ್ಯಾರಿಂದಲೂ ಸಾಧ್ಯವಿಲ್ಲ.ಇಂತಹ ಅವನಿಗೆ ನಾವೆಲ್ಲರೂ ಸಮರ್ಪಣಾ ಭಾವದಿಂದ ಕಾಣಲೇ ಬೇಕು.ಏಕೆಂದರೆ ಅವನಿಲ್ಲದೇ ನಾವಿಲ್ಲ.ಈ ಭೂಮಿಯ ಎಲ್ಲಾ ಜೀವಗಳು ನದಿ, ಸಾಗರ,ಆಕಾಶ,ಭೂಮಿ,ಈ ಮನುಷ್ಯ,,ಅವನಲ್ಲಿರುವ ಭಾವಗಳು, ಆ ಚೈತನ್ಯ,ಭರವಸೆ ಎಲ್ಲವೂ ಅವನಿಂದಲೇ ಅರಳುವುದು ,ಇದನ್ನು ನಾವೆಲ್ಲ ಅರಿತು ಅವನಿಗೆ ಋಣಿಯಾಗಿರಬೇಕು. ಹಾಗೂ ಎಲ್ಲವನ್ನೂ ಸಮಸ್ಥಿತಿಯಲ್ಲಿ ಇಡುವಂತೆ ಕೊರಬೇಕು...


ಉಷಾ ದಿನೇಶ್

ಶಿವಮೊಗ್ಗ

[30/11, 6:23 PM] Tulasi Naveen: ಸ್ಪರ್ಧೆಗಾಗಿ......

*************

ಸಾಲು : ಕಾಣದ ಕಡಲಿಗೆ ಹಂಬಲಿಸಿದೆ ಮನ

************


 *ಶೀರ್ಷಿಕೆ : ಕಡಲ ನೀಲಿಯೊಳು ಕರಗಬೇಕು* 


ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ಲೇಖನಿಯಮ ಮೊನೆಯಿಂದ ಹೊರಟ “ಕಾಣದ ಕಡಲಿಗೆ ಹಂಬಲಿಸಿದೆ ಮನ” ಎಂಬ ಸಾಲು, ಸಿ. ಅಶ್ವತ್ಥ್ ರವರ ಕಂಚಿನ ಕಂಠದಲ್ಲಿ ಮತ್ತಷ್ಟು ಶಕ್ತಿ ಪಡೆದುಕೊಂಡು ನಾಡಿನೆಲ್ಲೆಡೆ ಅನುರಣಿಸಿತು. ಭಾವಜೀವಿಗಳ ಹೃದಯದಲ್ಲಿ ಇನ್ನೂ ಅನುರಣಿಸುತ್ತಲೇ ಇದೆ. 


ಭಾವಗೀತೆಯ ಈ ಸಾಲು ಕಡಲಿನಂತೆ ವಿಶಾಲವ್ಯಾಪ್ತಿಯುಳ್ಳದ್ದು, ಅವರವರ ಭಾವಕ್ಕೆ ತಕ್ಕಂತೆ ಅರ್ಥ ಕೊಡುವಂತದ್ದು, ಪ್ರತಿ ಧ್ವನಿಯಲ್ಲೂ ಹೊಸದೊಂದು ತೆರೆಯಂತೆ ಹೊಸ ಭಾವವನ್ನು ಸ್ಫುರಿಸುವಂಥದ್ದು, ಕಡಲಿನಂತೆ ಬಗೆದಷ್ಟೂ ಮುಗಿಯದ ಅಚ್ಚರಿಗಳ ಹೊಸ ಲೋಕಗಳನ್ನೇ ಮುಂದೆ ಇಡುವಂಥದ್ದು. ಕಡಲನ್ನು ಎಷ್ಟು ದೂರಕ್ಕೆ ನೋಡಿದರೂ ಕೊನೆ ಮುಟ್ಟಲಾಗದಂತೆ ಈ ಸಾಲಿಗೂ ಒಂದು ಅಂತಿಮ ವ್ಯಾಖ್ಯಾನ ನೀಡುವುದು ಅಸಾಧ್ಯವೇ ಆಗಿದೆ. 


"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ? " ಗೋಪಾಲಕೃಷ್ಣ ಅಡಿಗರ ಈ ಭಾವಕ್ಕೆ ಸಂವಾದಿಯಾಗಲೂ ಬಹುದಾದ ಭಾವಗೀತೆಯ ಈ ಸಾಲು 'ಕಡಲು' ಎಂಬ ಉಪಮೆಯೊಂದಿಗೆ ಮತ್ತಷ್ಟು ಗಾಢವಾಗುತ್ತದೆ; ಗೂಢವಾಗುತ್ತದೆ. ನಮ್ಮ ದೃಷ್ಟಿಗೆ, ಕೈಗೆ ಮೀರಿದ  ಮತ್ತೇನಕ್ಕೋ  ನಾವು ಸದಾ ಚಡಪಡಿಸುತ್ತಲೇ ಇರುತ್ತೇವೆ. ಸಿಗಲಾರದ್ದನ್ನು ಪಡೆಯುವ, ಅರಿಯಲಾಗದ್ದನ್ನು ತಿಳಿದುಕೊಳ್ಳುವ ಕಾತರ ಪ್ರತೀ ಹೃದಯದಲ್ಲೂ ಇದ್ದೇ ಇರುತ್ತದೆ. 


ಬಹಳಷ್ಟು ವಿಮರ್ಶಕರು ವ್ಯಾಖ್ಯಾನಿಸಿದಂತೆ ಇಲ್ಲಿ ಕಾಣುವುದು ಜೀವನದ ಗುರಿಯೊಂದಿಗೆ ಮಿಳಿತವಾಗುವ ಹಂಬಲ. “ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ”ಯನ್ನು ಸೇರುವ ತವಕ; ಸೇರಬಲ್ಲೆನೇನು ? ಎಂಬ ಕೌತುಕ. ಅಪಾರವಾದ ವಿಸ್ತಾರವಾದ ಕಡಲು ನೀಲಿಯಾಗಿದೆ. ಈ ನೀಲಿ ಅನಂತದ ಪ್ರತೀಕ. ಎಷ್ಟು ನದಿಗಳು ಬಂದು ಸೇರಿದರೂ ಒಂದೇ ತೆರನಾಗಿ ಗಂಭೀರವಾಗಿರುವ ಸಾಗರವನ್ನು ಸೇರಬೇಕಾದರೆ ಕೊರಕಲಿನ ವಕ್ರ ಹಾದಿಯನ್ನು ಕ್ರಮಿಸಲೇಬೇಕು. ನಮ್ಮ ಬದುಕಿನ ದಾರಿಯ ಕಾಠಿಣ್ಯಗಳನ್ನೆಲ್ಲ ಎದುರಿಸಲು ಶಕ್ತರಾದರೆ ಮಾತ್ರ, ನದಿಯು ಸಾಗರವನ್ನು ಸೇರಿದಂತೆ ವಿಶಾಲವಾದ ಅಪಾರ ನೀಲಿಯ ಶಾಂತ ಲೋಕವನ್ನು ಸೇರಲು ಸಾಧ್ಯವಾಗುತ್ತದೆ. ಆ ಮೂಲಕ ಜೀವನದ ಅಂತಿಮ ಧ್ಯೇಯದ ದರ್ಶನವಾಗುತ್ತದೆ.


ಕಡಲನ್ನು ಸೇರುವ ಹಂಬಲ ಕೇವಲ ಕವಿ ಒಬ್ಬರದ್ದಲ್ಲ, ಅದು ಪ್ರತೀ ಹೃದಯದ ಹಂಬಲ. ಹಾಗಾಗಿಯೇ ಸುಲಭವಾಗಿ ಹೃದಯದಾಳದ ನಾಟುತ್ತದೆ. ಹಾಡನ್ನು ಕೇಳುವ ಯಾರಾದರೂ ಬದುಕಿನ  ಗುರಿಯ ಬಗ್ಗೆ ಯೋಚಿಸದೇ ಇರಲು ಸಾಧ್ಯವೇ ಆಗುವುದಿಲ್ಲ. 


ಆತ್ಮವೊಂದು ಅನಂತದಲ್ಲಿ ಲೀನವಾಗುವ ಅಚ್ಚರಿಯನ್ನು ಬೇಧಿಸಲು ಮನುಕುಲ ಉಗಮವಾದಂದಿನಿಂದಲೇ ಹುಡುಕಾಟಗಳು ಪ್ರಾರಂಭವಾಗಿದೆ. ಜೀವನದ ಅಂತಿಮ ಗುರಿಯನ್ನು ಅರಿಯಲು ಮಾನವ ನಡೆಸದ ಪ್ರಯತ್ನಗಳಿಲ್ಲ. ಕೊರಕಲಿನ ಹಾದಿಯಲ್ಲಿ ನಡೆದು ಗಂಭೀರ ಶಾಂತದಲ್ಲಿ ಒಂದಾಗುವ ಉಪಮೆ ನಮಗೆಲ್ಲರಿಗೂ ಬಹಳ ಸ್ಪಷ್ಟವಾಗಿ ಅರ್ಥವಾಗುತ್ತದೆ. ಇಲ್ಲಿ ಕ್ಲಿಷ್ಟ ವಿವರಣೆಗಳು ಬೇಕಾಗುವುದಿಲ್ಲ, ಅಗತ್ಯವೂ ಇಲ್ಲ. ಮನುಷ್ಯರೆಲ್ಲರ ಮನದ ಅಸ್ಪಷ್ಟ ಹಂಬಲಗಳು ಅಕ್ಷರರೂಪದಲ್ಲಿ ಸುಲಭ ಗ್ರಾಹ್ಯವಾಗುವಂತೆ ಶಿವರುದ್ರಪ್ಪನವರು ಈ ಸಾಲಿನಲ್ಲಿ ಅಕ್ಷರ ಚಿತ್ರವನ್ನು ಮೂಡಿಸಿದ್ದಾರೆ. 


ಒಳ ಕಿವಿಗೆ ಕೇಳುವ ಕಾಣದ ಕಡಲಿನ ಮೊರೆತವು ಆ ಕಡಲನ್ನು ಸೇರುವ ಹಂಬಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದೇ ಹಂಬಲ ದಾರಿಯ ಕೊರಕಲನ್ನು ಸುಲಭವಾಗಿ ದಾಟುವಲ್ಲಿ ಸಹಾಯಮಾಡುತ್ತದೆ. ಹೀಗೆ "ಮಹಾ ತಾಳ್ಮೆಯ ಮತ್ತು ಅಷ್ಟೇ ಕ್ರಿಯಾಶಾಲಿಯಾದ" ಜಿ.ಎಸ್.ಶಿವರುದ್ರಪ್ಪನವರಂಥ ವ್ಯಕ್ತಿಗಳು ಮಾತ್ರ ಇಂತಹ ಉಪಮೆಗಳನ್ನು ಕಟ್ಟಿಕೊಡಲು ಸಾಧ್ಯ. ಬದುಕಿನ ಭವಬಂಧನಗಳಿಂದ ಮುಕ್ತರಾಗಿ ಅಲೌಕಿಕ ಜಗತ್ತನ್ನು ಸೇರುವ ಅಭಿಲಾಷೆ ಕವಿಯದ್ದು ಮತ್ತು ಓದುಗರದ್ದೂ ಸಹ. ಅಸ್ಪಷ್ಟ ಕಲ್ಪನೆಗಳಿಗೆ ಸ್ಪಷ್ಟ ಚಿತ್ರಣದ ಉದಾಹರಣೆ ಕೊಟ್ಟು ಕವಿ ವಿವರಿಸುವ ಪರಿ ಅನನ್ಯ. ಗಂಭೀರ ವಿಚಾರವೊಂದು ನಮ್ಮ ಬಾಳಿನ ಹಾದಿಯನ್ನು ಸ್ಪಷ್ಟೀಕರಿಸುತ್ತದೆ; ಮತ್ತೆ ಚಿಂತನೆಗೆ ಹಚ್ಚುತ್ತದೆ. “ಕಡಲ ನೀಲಿಯೊಳು ಕರಗುವ” ಧ್ಯೇಯವನ್ನು ದಟ್ಟವಾಗಿಸುತ್ತದೆ.

************


ಶ್ರೀಕಲಾ ಬಿ ಕಾರಂತ್

ಅಳಿಕೆ, ಬಂಟ್ವಾಳ ತಾಲೂಕು

[30/11, 6:23 PM] Tulasi Naveen: ಬತ್ತದ ತೊರೆ ಸ್ನೇಹ ಬಳಗ

ವಿಷಯ ಭಾವಗೀತೆಯ ಸಾಲಿನಿಂದ  ಲೇಖನ ಅಥವಾ  ಕಥಾರಚನೆ ಸ್ಪರ್ಧೆಗಾಗಿ:


ನನ್ನ ಲೇಖನ


 *ತಾಯಿ ದೇವತೆ* 


" *ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು"* 


ಬಿ ಆರ್ ಲಕ್ಷ್ಮಣರಾವ್ ಅವರು ರಚಿಸಿದ ಅಪೂರ್ವವಾದಂತಹ ತಾಯಿ, ಜನನಿ, ಮಾತೆಯ ಕುರಿತಾದ ಭಾವಗೀತೆಯ ಸಾಲುಗಳ ಆಧಾರಿತವಾದುದು.


' *ಜನನಿ ಜನ್ಮಭೂಮಿಷ್ಯ ಸ್ವರ್ಗದಪಿ ಗರಿಯೇಸಿ'* ಎಂಬಂತೆ ಈ ಲೋಕದಲ್ಲಿ 'ಹಡೆದ ತಾಯಿ, ಪಡೆದ ಭೂಮಿ' ಆಗೋಚರವಾದಂತಹ ಸ್ವರ್ಗಕ್ಕಿಂತಲೂ ಶ್ರೇಷ್ಠವಾಗಿರುವುದಾಗಿದೆ. ಅಮ್ಮ ಮಗುವಿನ ಸಂಬಂಧ ಜನ್ಮ ಜನ್ಮಾಂತರದ್ದು. ಅಮ್ಮ ಕಂದನಿಗೆ ತನ್ನೆಲ್ಲ ಉಸಿರು ಬಸಿದು, ರಕ್ತ ಹರಿಸಿ ಜನ್ಮನೀಡಿದ ತ್ಯಾಗಿ, ಸಹನಾಮೂರ್ತಿ, ಕಡಲಿನಷ್ಟೇ ಪ್ರೀತಿ, ಮಮತೆ, ವಾತ್ಸಲ್ಯಗಳನ್ನು ತುಂಬಿಕೊಂಡಂತಹ ಅಗಾಧ ಚೇತನವಾಗಿದ್ದಾಳೆ.


' *ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ'* ಎನ್ನುವ ನಾಣ್ನುಡಿಯಂತೆ ಎಷ್ಟು ರುಚಿಗೊಳಿಸಲು ಅಡುಗೆ ಪರಿಕರಗಳನ್ನು ತಂದು ಹಾಕಿ, ಉಪ್ಪಿಲ್ಲದ ಮಾಡುವ ಭೋಜನ ಏನೂ ರುಚಿ ಕೊಡಲಾರದಂತೆ, ಜಗದೊಳು ನೂರಾರು ಹಿತೈಷಿ, ಬಂದು ಬಾಂಧವರಿರಲಿ ತಾಯಿ ದೇವತೆಯ ಸ್ಥಾನವನ್ನು ಯಾರೂ ತುಂಬಲು ಅಸಾಧ್ಯ.


ತಾಯಿ ದೇವತೆ ತೋರಿದ ಪ್ರೀತಿ, ಕರುಣೆ, ಅನುಕಂಪ ಮತ್ತೆಲ್ಲಿ ಜಗದಲ್ಲಿ ದೀಪ ಹಚ್ಚಿ ಹುಡುಕಿದರೂ ಸಿಗಲಾರದು. ಅದೊಂದು ಅಮೂಲ್ಯ ವಾದಂತಹ ದೇವರ ರೂಪವನ್ನು

ಹೊತ್ತು ನಿಂತ ಪ್ರತ್ಯಕ್ಷ ದೇವತೆ. ಸಾಕ್ಷಾತ್ ಜಗಜ್ಜನನಿಯ ಅವತಾರವೆಂದು ನನ್ನ ಅಂತರಾಳದ ಮಾತನ್ನು ಬಿಚ್ಚಿ ಹೇಳುತ್ತಿದ್ದೇನೆ.


ಕರುಳಬಳ್ಳಿಗೆ ಗರ್ಭಾಂಕುರದ ಕ್ಷಣ ದಿನದಿಂದ ಸಕಲವನ್ನೂ ಧಾರೆಯೆರೆದ ಸಹನಾಧರಿತ್ರಿ ಎಂದರೆ ಅತಿಶಯೋಕ್ತಿಯಾಗಲಾರದು. ಸಾಕಷ್ಟು ನೋವುಗಳನ್ನು ಅನುಭವಿಸುತ್ತ ಭೂಮಿಗೆ ಮಾನವ ಜೀವಿಯನ್ನು ಕರುಣಿಸಿದ ಕರುಣಮೂರ್ತಿ ತಾಯಿ. ಒಂಬತ್ತು ತಿಂಗಳು ಒಡಲಲ್ಲಿ ಹೊತ್ತು ನಂತರ ಏನೂ ತಾಕದಂತೆ, ಮಾಂಸದ ಮುದ್ದೆಯಂತಿರುವ ಹಸುಳೆಯನ್ನು ಅತ್ಯಂತ ನಾಜೂಕಾಗಿ, ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುವಲ್ಲಿ ತಾಯಿಯ ಪಾತ್ರ ಅಷ್ಟಿಷ್ಟು ಜವಾಬ್ದಾರಿಯುತವಾದುದಲ್ಲ.


ಈ ಭೂಮಿಗೆ ಮಾನವ ಸಂತಾನದ ಪೀಳಿಗೆಯ ಅಭಿವೃದ್ಧಿಯನ್ನು ಮಾಡುವಲ್ಲಿ ತಾಯಿ ಜನನಿಯ ಕೊಡುಗೆ ಅಪಾರವಾದುದಾಗಿದೆ. ತನ್ನೆಲ್ಲ  ಸ್ವಾರ್ಥಪರ ಚಿಂತನೆಗಳನ್ನು ಬದಿಗೊತ್ತಿ ಮಗುವಿನ ಲಾಲನೆ-ಪಾಲನೆಯಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡು, ಆರೈಕೆ ಮಾಡಿ, ಬೆಳೆಸಿ ಉತ್ತಮ ಸಂಸ್ಕಾರಗಳನ್ನು, ಮೌಲ್ಯಗಳನ್ನು ಬಿತ್ತುವ *ತಾಯಿ ಮೊದಲ ಗುರುವಾಗಿ* ಪರಿಣಮಿಸುತ್ತಾಳೆ.


ತಾಯಿಯನ್ನು ತೊರೆದು ಇನ್ನೊಂದೆಡೆಗೆ ಅಗಲಿ ಹೋಗುವುದೆಂದರೆ ಅದೊಂದು ಕಷ್ಟ ದುಃಖಕರವಾದ ಸಂಗತಿ. ಕಣ್ಣೀರಧಾರೆ ಹರಿಸುತ್ತಾ ತಾಯಿ ಹಾರೈಸಿ ಮಗಳನ್ನು ಇನ್ನೊಂದು ಮನೆ ಮಂದಿರ ಬೆಳಗಲು ಅಣಿಗೊಳಿಸಿ ಬೀಳ್ಕೊಡುವ ಮಹಾತ್ಯಾಗಿ. ಇಂತಹ ಅಪರೂಪ ವ್ಯಕ್ತಿತ್ವವನ್ನು ಧರಿಸಿರುವ ಧರಣಿಯೊಳು ತಾಯಿಯ ಮಹತ್ವ ಪದಗಳಲ್ಲಿ ಹಿಡಿದಿಡಲು ಬಾರದು.


ಅದಕ್ಕೆ ಕವಿ ಇಲ್ಲಿ ತನ್ನ ಕರುಳ ಬಳ್ಳಿಯಿಂದ ಮಗುವನ್ನು ಸ್ವತಂತ್ರವಾಗಿಸುವ ಕಲ್ಪನೆಯನ್ನು ಬಿಂಬಿಸಿರುವರು. ಅಮ್ಮನ ಬೆಚ್ಚಗಿನ ಮಡಿಲು ಒಳಗಿಂದ ಒಂದು ಮಗು ಸ್ವತಂತ್ರಗೊಂಡು ತಾಯಿಯಿಂದ ಎಲ್ಲವನ್ನೂ ಗಿಟ್ಟಿಸಿಕೊಂಡು, ತಾನೂ ಏನನ್ನಾದರೂ ಜನ್ಮಕೊಟ್ಟ ಭೂಮಿಗೆ ಉಡುಗೊರೆಯಾಗಿ ನೀಡಲು ಸನ್ನದ್ಧನಾಗಬೇಕೆಂಬುದು ಕವಿಯ ಆಶಯ.

ಅಮ್ಮನ ಆಶ್ರಯದಿಂದ ಜಾರಿಕೊಂಡು, ಇಡೀ ಪ್ರಪಂಚದ ಜ್ಞಾನವನ್ನೆಲ್ಲ ಪಡೆದು ಮತ್ತೆ ತನ್ನ ಜನ್ಮಭೂಮಿಗೆ ಜನ್ಮದಾತೆಯೆಡೆಗೆ ಉನ್ನತ ವ್ಯಕ್ತಿತ್ವ ಹೊಂದಿದ ಪರಿಪೂರ್ಣ ಮಾನವನಾಗಿ, ಮೂರ್ತಪ್ರೇಮದೆಡೆಗೆ ಬರುವುದು, ಎಂಬುದು ಕವಿಯ ಸುಂದರ ಸಾಲುಗಳು ಪ್ರತಿಬಿಂಬಿಸುವಲ್ಲಿ ಸಾರ್ಥಕಗೊಂಡಿದೆ. ಬಿ ಆರ್ ಲಕ್ಷ್ಮಣರಾವ್ ಕನ್ನಡ ಕಾವ್ಯಪ್ರಪಂಚಕ್ಕೆ ಅತ್ಯುನ್ನತ ವಾದಂತಹ ಕವನದ ಸಾಲುಗಳನ್ನು ಸುಂದರಗೊಳಿಸಿ ಕನ್ನಡ ನಾಡಿಗೆ ಅರ್ಪಿಸಿದ್ದಾರೆ.


 *ಶ್ರೀಮತಿ ಗಿರಿಜಾ ಹಿರೇಮಠ*

[30/11, 6:23 PM] Tulasi Naveen: ಸ್ಪರ್ಧೆಗಾಗಿ:- *ಲೇಖನ*

ವಿಷಯ:- *ಇಷ್ಟವಾದ ಭಾವಗೀತೆ*

ಶೀರ್ಷಿಕೆ :- *ಅಮ್ಮ*



ಭಾವಗೀತೆಗಳು ನಮ್ಮ ಕನ್ನಡ ಸಾಹಿತ್ಯದಲ್ಲಿ ವಿಶೇಷವಾದ ಸ್ಥಾನ ಪಡೆದಿವೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಭಾವಗೀತೆಗಳ ಮೂಲ ಸ್ವರೂಪ ಹಾಡಿನದ್ದು. ಕಾವ್ಯವನ್ನು ಹಾಡುವುದು ನಮ್ಮಲ್ಲಿ ಮೊದಲಿನಿಂದ ಇದ್ದರೂ ಕಾವ್ಯ ಆ ಹಾಡಿಗಿಂತ ಭಿನ್ನವಾಗಿತ್ತು.ಹಿಂದೆ ಕನ್ನಡ ಹಾಡುಗಳು, ಶಿವಶರಣರ ವಚನಗಳು ಇವುಗಳನ್ನು ಬಿಟ್ಟರೆ ಉಳಿದ ಕಾವ್ಯಗಳೆಲ್ಲ ಕಥನ ಕಾವ್ಯಗಳೇ.

 ಪ್ರತಿಯೊಬ್ಬ ಕವಿಯು ತನ್ನ ಮನದಲ್ಲಿರುವ ಭಾವನೆಗಳನ್ನು ಕಾವ್ಯದ ಮೂಲಕ ಹೊರಗೆಡುವುತ್ತಾನೆ.ಈ ಕಾವ್ಯಕ್ಕೆ ಮಧುರವಾದ ಸಂಗೀತವನ್ನು ಸಂಯೋಜಿಸಿ,ಸುಶ್ರಾವ್ಯವಾದ ಧ್ವನಿಯಲ್ಲಿ ಹಾಡಿದರೆ,ಕೇಳುಗರನ್ನು ಭಾವಲೋಕಕ್ಕೆ ಕರೆದೊಯ್ಯುತ್ತದೆ.


ಭಾವಗೀತೆಯಲ್ಲಿ ನನ್ನ ಮೆಚ್ಚಿನ ಹಾಡು.. ಬಿ.ಆರ್.ಲಕ್ಷ್ಮಣ ರಾವ್ ಸಾಹಿತ್ಯದ   " *ಅಮ್ಮಾ..ನಿನ್ನ ಎದೆಯಾಳದಲ್ಲಿ,ಗಾಳಕ್ಕೆ ಸಿಕ್ಕ ಮೀನು., ಮಿಡುಕಾಡುತ್ತಿರುವೆ ನಾನು."..* ಈ ಹಾಡನ್ನು ಬಿ.ಆರ್.ಛಾಯರವರು ಕೇಳುಗರ ಮನಸ್ಸಿಗೆ ತುಂಬಾ ಇಂಪಾಗಿ ಕೇಳುವಂತೆ ಹಾಡಿದ್ದಾರೆ.  ನಿಜವಾಗಿಯೂ ಈ ಹಾಡು ಕೇಳುವಾಗ ತಾಯಿ-ಮಗುವಿನ ಸಂಬಂಧ ಎಷ್ಟು ಗಾಡವಾಗಿದೆ ಎಂದು ಮನದಟ್ಟಾಗುತ್ತದೆ. ಪ್ರತ್ಯಕ್ಷ ದೇವರಾಗಿ ನಮ್ಮ ಜೀವನದಲ್ಲಿ ಬಂದ ತಾಯಿಯ ಬಗ್ಗೆ ಹೇಳಲು ಪದಗಳೇ ಸಾಲದು.ಏಳೇಳು ಜನ್ಮದಲ್ಲೂ ಆ ದೇವತೆಯ ಋಣವನ್ನು ತೀರಿಸಲು ಸಾಧ್ಯವಾಗದ ಮಾತು. ತಾಯಿ-ಮಗುವಿನ ಸಂಬಂಧ ಏನೆಂಬುದನ್ನು ಆ ಗೀತೆಯ ಭಾವಾರ್ಥದಲ್ಲೇ ಇದೆ.ತಾಯಿಯ ಗರ್ಭದಲ್ಲಿ ಮಗು ಇರುವಾಗ,ಆ ಮಗು ಎಷ್ಟೊಂದು ಬೆಚ್ಚಗೆಯಾಗಿ ಇರುತ್ತದೆ, ತಾಯಿಯ ಕರುಳಬಳ್ಳಿಯನ್ನು ಸುತ್ತಿಕೊಂಡು,ಅವರ ಒಲವಿನಿಂದ ಭೂಮಿಗೆ ಬರಲು ಕಾಯುತ್ತಿರುತ್ತದೆ.ಒಂಬತ್ತು ತಿಂಗಳು ತುಂಬಿದೊಡನೆ,ತಾಯಿಯ ಗರ್ಭ ಸೀಳಿ ಮಗು ಭೂಮಿಗೆ ಬಂದಾಗ,ಆ ತಾಯಿ ನೋವಿನಲ್ಲೂ ಪಡುವ ಸಂತಸ,ಆ ರಸಗಳಿಗೆ ಅವಳ ಬಾಳಿನ ಅದ್ಭುತವಾದ ಕ್ಷಣ.ನನ್ನ ಒಳ ಜಗತ್ತಿನ ನಿನ್ನ ನೋವನ್ನು, ನಾನು ಉಪಶಮನ ಗೊಳಿಸಿ,ಹೊರ ಜಗತ್ತಿಗೆ ಕಾಲಿಡುವೆ.ನಿನ್ನ ತೋಳಲ್ಲಿ,ಮಡಿಲಲ್ಲಿ ಮಲಗಿ ನಾನು ಆನಂದಿಸುವೆ ಎನ್ನನ್ನು ಹೊರಗೆ ಕಳುಹಿಸು,ಹೊರಗಿನ ಆಟ-ಪಾಟ ನನಗೆ ಕಲಿಸು ಎಂಬ ಚಿತ್ರಣವನ್ನು ಕವಿಯವರು ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದಾರೆ.ತಾಯಿ ಎನ್ನುವ ಆ ಮಹಾನ್ ಶಕ್ತಿಗೆ ನಾವು ಎಂದೆಂದಿಗೂ ಚಿರ ಋಣಿಗಳಾಗೋಣ.ಪ್ರತಿಯೊಬ್ಬ ತಾಯಿ-ಮಗುವಿನ ಸಂಬಂಧ ಉತ್ತಮವಾಗಿರಲಿ. ಒಂದು ಮಗು ಚಿಕ್ಕಂದಿನಲ್ಲಿ ತಾಯಿಯನ್ನು ಹೇಗೆ ಅವಲಂಬಿಸಿಕೊಳ್ಳುತ್ತದೋ,ಹಾಗೆಯೇ ತಾಯಿಗೆ ವಯಸ್ಸಾದ ಮೇಲೆ, ಅವರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು. *ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧು ಇಲ್ಲ* ಎಂಬ ಹಿರಿಯರ ಮಾತನ್ನು ಮನದಲ್ಲಿ ಇಟ್ಟುಕೊಂಡು, ಆ ಮಹಾತಾಯಿಗೆ ಗೌರವ ನೀಡುವ. ಮುಪ್ಪಿನ ಕಾಲದಲ್ಲಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ಈ ದೇಶದ ಪ್ರತಿಯೊಬ್ಬ ತಾಯಿಗೂ ನನ್ನ ಸಾಷ್ಟಾಂಗ ನಮಸ್ಕಾರಗಳು 🙏😍


✍️  *ಮಾಲತಿ ರಮೇಶ್ ಕೆಮ್ಮಣ್ಣು*

[30/11, 6:23 PM] Tulasi Naveen: *ತಿಂಗಳ ಸ್ಪರ್ಧೆಗೆ*


*ಇಷ್ಟದ ಭಾವಗೀತೆಯ ಸಾಲಿಗೆ ಲೇಖನ*


*ಭಾವಗೀತೆಯ ಸಾಲು 👇🏻*


ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು |

ಕೇಳುವಿರಿ ಸಾಕೆನಗೆ ಅದುವೆ ಬಹುಮಾನ |

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? ||


*ರಚನೆ : ಜಿ.ಎಸ್.ಶಿವರುದ್ರಪ್ಪ* ರವರು


*ಶೀರ್ಷಿಕೆ : ಪ್ರಶಸ್ತಿ ಮಾರಾಟಕ್ಕಿದೆ...!?* 


ಇತ್ತೀಚೆಗೆ ಪ್ರಶಸ್ತಿ ಎಂಬ ಹೆಸರಲ್ಲಿ ಖ್ಯಾತ ವಿಜ್ಞಾನಿ, ಕವಿಗಳು ಮುಂತಾದವರ ಹೆಸರನ್ನಿಟ್ಟು ಕೆಲವು ಸಂಘ ಸಂಸ್ಥೆಗಳು ಅರ್ಜಿ ರವಾನಿಸಿ ಅಥವಾ ಹಣವನ್ನು ನಿಗದಿ ಮಾಡಿ ಪ್ರಶಸ್ತಿಯನ್ನು ಕೊಡುತ್ತಿರುವುದು ಹೆಚ್ಚಾಗಿದೆ. ಹಾಗೆಯೇ ಎರಡಕ್ಷರ ಬರೆದ ಕೂಡಲೇ ನಾನೂ ಕವಿ, ಸ್ವಲ್ಪ ಹಾಡಲು ಬರುತ್ತಿದ್ದರೆ ನಾನೂ ದೊಡ್ಡ ಹಾಡುಗಾರ ಎಂದು ಭಾವಿಸಿ ಮೆರೆಯುವ ಜನರಿಗೆ ಇದೊಂದು ಸುವರ್ಣ ಅವಕಾಶದಂತೆ ನನ್ನ ಪಾಲಿಗೆ ಒದಗಿ ಬಂದಿದೆ ಎಂದು, ಅರ್ಜಿ ಹಾಕಿಯೇ ಬಿಡುವ ಮನಸ್ಥಿತಿ ಬರುತ್ತಿದೆ. ಇದರಿಂದ ಪ್ರಶಸ್ತಿ ಎಂಬ ಹೆಸರಲ್ಲಿ ಪ್ರಸಿದ್ಧ ವ್ಯಕ್ತಿಗಳ ಛಾಯಾಚಿತ್ರವಿರುವ ಬಹುದೊಡ್ಡ ಕಲಾಕೃತಿ ಮನೆಯಲ್ಲಿಡಲು ದೊರೆಯುವುದಲ್ಲದೆ ಹೇಳಿ ಕೊಂಡು ಬರಲು ದೊಡ್ಡ ವಿಷಯವಾಗಿ ದೊಡ್ಡ ಘನತೆ ಬಂದಂತೆ ಆಡುವವರ ಸಂಖ್ಯೆ ಏನೂ ಕಡಿಮೆ ಇಲ್ಲ. 


ಅದರಿಂದ ಎಲ್ಲಾ ನಾನು ದೂರ ಇದ್ದೇನೆ, ಎಂದು ಪ್ರಸಿದ್ಧ ಕವಿಗಳ ಈ ಭಾವಗೀತೆಯ ಸಾಲು ಮನಸ್ಸಿಗೆ ಮುದ ನೀಡುವುದಲ್ಲದೆ, ಇಂತಹ ಪ್ರಶಸ್ತಿಗಳ ಕಡೆಗೆ ನನ್ನ ಮನವೂ ಸಾಗದು ಎಂಬ ಆಶಯ ಬಹಳ ಸ್ಪೂರ್ತಿಯನ್ನು ನೀಡುವಂತಿದೆ. ಏನು ಬರೆದರೂ ನನ್ನ ಸಮಾಧಾನಕ್ಕೆ. ಅದನ್ನು ಹಲವು ಸಹೃದಯರು ಒಪ್ಪಿಕೊಂಡು ಪ್ರೋತ್ಸಾಹಿಸುವಾಗ ಇನ್ನು ಬಿರುದು ಸನ್ಮಾನದ ಅವಶ್ಯಕತೆ ಇಲ್ಲ ಎನ್ನುವ ಭಾವ ಬಹಳ ಸೊಗಸಾಗಿದೆ.


ಕಲೆಯ ಹೆಸರಲ್ಲೂ ಹಣ ಗಳಿಸಿ ತಮ್ಮ ಸಂಸ್ಥೆಯನ್ನು ಮೇಲೆ ತೆಗೆದುಕೊಂಡು ಹೋಗುವ ಸಲುವಾಗಿ ಪ್ರಶಸ್ತಿಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಎಂದು ಇನ್ನಾದರೂ ಅರ್ಜಿ ಹಾಕಿ ಅಥವಾ ದುಡ್ಡು ಕೊಟ್ಟು ಕೊಂಡು ಕೊಳ್ಳುವ ಪ್ರಶಸ್ತಿಗಳನ್ನು ಕಲಾವಿದರು, ಬರಹಗಾರರು ತಿರಸ್ಕರಿಸಬೇಕು. ಶಿವರುದ್ರಪ್ಪನವರ ಈ ಸಾಲುಗಳಲ್ಲಿ ಸಂಭ್ರಮವಿದೆ, ನೋವಿದೆ ಹಾಗೆಯೇ ಕುಹಕವಿದೆ. ಇದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಗೆ ನಾವೆಲ್ಲರೂ ಬರಬೇಕಿದೆ. ಜೊತೆಯಲ್ಲಿ ಕಲಾ ಸೇವೆ ಅಥವಾ ಸಾಹಿತ್ಯ ಸೇವೆ ಎನ್ನುವ ಸುಂದರ ಆಶಯವನ್ನು ಕಳಂಕಗೊಳಿಸುವ ತಂತ್ರಗಳನ್ನು ಹೊಡೆದು ಹಾಕಲು ಸಂಬಂಧಪಟ್ಟವರು ಶ್ರಮವಹಿಸಬೇಕು ಎನ್ನುವ ಕಳಕಳಿ ನಮ್ಮದಾಗಬೇಕು. ನಿಜವಾದ ಬರಹಗಾರ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡವ ಪ್ರಶಸ್ತಿಯ ಹಿಂದೆ ಹೋಗಲಾರ. ಏನಿದ್ದರೂ ಅವನ ಸಂತೋಷಕ್ಕಾಗಿ ಹಾಗೂ ಸಮಾಜದಲ್ಲಿ ಬದಲಾವಣೆಯನ್ನು ತರುವ ಧ್ಯೇಯವನ್ನು ಇಟ್ಟುಕೊಂಡು ಮುನ್ನಡೆಯುವನಲ್ಲದೆ ಇದನ್ನು ತಿರಸ್ಕರಿಸುವನು. ನಮ್ಮೆಲ್ಲರ ಮನಸ್ಥಿತಿ ಈ ರೀತಿ ಇರಲಿ ಎಂಬುದೇ ಕವಿಯ ಸದಾಶಯ ಹಾಗೂ ಕಳಕಳಿ ಆಗಿದೆ.


ಇಂತಹ ಪ್ರಶಸ್ತಿಗಳ ಹೆಸರಲ್ಲಿ ಕಲೆಗಳ ಪ್ರೋತ್ಸಾಹ ಎಂಬ ಅಡಿಬರಹದಲ್ಲಿ ನಿಜವಾಗಿಯೂ ಮೋಸ ಹಾಗೂ ನಿಜವಾದ ಪ್ರಶಸ್ತಿ ಪಡೆಯುವ ವ್ಯಕ್ತಿಗಳತ್ತವೂ ಸಂಶಯದ ದೃಷ್ಟಿ ಸಾಗುತ್ತಿದೆ ಎನ್ನುವುದೇ ವಿಪರ್ಯಾಸ.


🖋️ *ಹಿತೇಶ್ ಕುಮಾರ್ ಎ*

[30/11, 6:23 PM] Tulasi Naveen: ಬತ್ತದ ತೊರೆ ಬಳಗದ 

ದಿನಾಂಕ  ೨೬/೧೧/೨೦೨೧ ಶುಕ್ರವಾರದ ತಿಂಗಳ ಸ್ಪರ್ಧೆಗೆ

ವಿಷಯ:  ನನಗಿಷ್ಟವಾದ ಭಾವಗೀತೆ ಗಳಲ್ಲಿ ಕೆಎಸ್ ನರಸಿಂಹಸ್ವಾಮಿಯವರ ಬರೆದ "ಒಳಿತು ಮಾಡು ಮನಸ" ಎಂಬ ಹಾಡಿನ ಸಾಲುಗಳು


ಲೇಖನ



ಶೀರ್ಷಿಕೆ :ಒಳಿತು ಮಾಡು ಮನಸ ನೀನ್ ಇರುವುದು ಮೂರು ದಿವಸ


     ಜೀವನವೆನ್ನುವುದು ಮರದಂತೆ  , ಆಲೋಚನೆಗಳು ವೃಕ್ಷದ ಬೇರುಗಳು. 

ನಮ್ಮ ಯೋಚನೆಗಳು ಒಳ್ಳೆಯದಾಗಿದ್ದರೆ ಜೀವನವೂ ಆಹ್ಲಾದಕರ ವಾಗಿರುತ್ತದೆ. ಒಳ್ಳೆ ಯೋಚನೆಗಳೇ ಮನುಷ್ಯನನ್ನು ಮಹನೀಯರನ್ನಾಗಿ ಮಾಡುತ್ತದೆ. ಕೆಟ್ಟ ಯೋಚನೆಗಳೇ ಮನುಷ್ಯನನ್ನು ಸರ್ವನಾಶವನ್ನು ಮಾಡುತ್ತಿದೆ. ಅಂದರೆ  ಆಲೋಚನೆಗಳು ಒಳ್ಳೆಯದಾಗಿದ್ದರೆ ಒಳ್ಳೆಯ ಜೀವನ ನಡೆಸಬಹುದು. ಜೀವನದಲ್ಲಿ ಯಾವುದು ಶಾಶ್ವತವಲ್ಲ, ಮೂರು ದಿನದ ಬಾಳು.


    ಆಗ ಮನದಲ್ಲಿ ಬರುವ ಪ್ರಶ್ನೆ ಏನೆಂದರೆ ಒಳಿತು ಯಾವುದು? ಕೆಡುಕು ಯಾವುದು? ಶಾಶ್ವತ ಯಾವುದು? ನಶ್ವರ ಯಾವುದು? ಎಲ್ಲಾ ವಿಷಯದ ಆಮೇಲೆ ತಿಳಿದುಕೊಳ್ಳೋಣ.

    ನನಗೆ ಕೆಎಸ್ ನರಸಿಂಹಸ್ವಾಮಿಯವರ ಬರೆದ ಆ ಸಾಲು  ಒಳಿತು ಮಾಡು "ಮನಸ ನೀನಿರುವುದು ಮೂರು ದಿವಸ  ಇಷ್ಟ" ಎಕೆಂದರೆ ಅದರ ಲಯವೂ ಇಷ್ಟ.  ಭಾವಾರ್ಥ ಕೂಡ ಆಳವಾಗಿದೆ.

 ಇದರ ಆಳವಾದ ಅರ್ಥ ನನಗೆ ಆರಾಮ ಇಲ್ಲದೇ ಇದ್ದಾಗ ಮನಸ್ಸಿಗೆ ನಾಟಿತು, ನನ್ನ ಸಂಬಂಧಿಕರೊಬ್ಬರು ನಾನು ಹಿಂದೆ ಅವರ ಅಮ್ಮನಿಗೆ ಮಾಡಿದ ಸಹಾಯವನ್ನು ನೆನೆದು ನನಗೆ ಶುಶ್ರೂಷೆ ಮಾಡಿದರು.

   ಹೀಗೆ ನಾವ್ಯಾರು ಶಾಶ್ವತವಲ್ಲ. ನಮಗೂ ಕಾಯಿಲೆಗಳು ಬರುತ್ತವೆ. ಗುಣವಾಗುತ್ತವೆ. ನಾವು ಒಳ್ಳೆ ನನ್ನ ಮೈಗೂಡಿಸಿಕೊಳ್ಳಬೇಕು ಒಳ್ಳೆ ವರಾಗಿರಬೇಕು. ‌ ಅದರಿಂದ ಒಳ್ಳೇದೆ ಆಗ್ತದೆ. ಆತ್ಮವಿಶ್ವಾಸವಿರಬೇಕು ಆತ್ಮವಂಚನೆ ಮಾಡಬಾರದು. ಹಾಗಂತ ಸ್ವಾರ್ಥಿಗಳೂ ಆಗಬಾರದು . ಕಾಮ ಕ್ರೋಧ ಮದ ಮತ್ಸರ ಲೋಭ ಮೊದಲಾದ ಗುಣಗಳನ್ನು ಬಿಡಬೇಕು.

ಅಂತೆ ಯೇ ಪಲಾಯನವಾದ ದೊಡ್ಡ ವೇದಾಂತ ಸೋಮಾರಿತನ ಆತ್ಮವಂಚನೆ ನಿರಾಶವಾದ ಯಾವುದು ನಮ್ಮಲ್ಲಿ ಇರಕೂಡದು.

ನಾವು ಸಾಧಾರಣ ಅರ್ಧ ಆಯುಷ್ಯವನ್ನು ಕಳೆದು ಆಯ್ತು. ಇನ್ನರ್ಧ  ಆಯುಷ್ಯವನ್ನು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ದೇವರಿಗೆ ಪ್ರಿಯರಾಗಿ, ಸಮಾಜದ ಒಳಿತಿಗಾಗಿ ಜೀವಿಸಿ ಜೀವನವನ್ನು ಸಾರ್ಥಕ ವಾಗಿಸುವ ಎನ್ನುವುದು ನನ್ನ ಹಾರೈಕೆ.


ಎಂ ರಮಿತಾಎ ಶೆಟ್ಟಿ ಬೈಂದೂರು

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...