ಬುದ್ಧಿವನದ ಕತೆಗಳು:
ಸಂಚಿಕೆ ೨: ಕಾಡಿನ ಹೊಸ ಆಯುಧಗಳು
.........ಮನುಷ್ಯರ ಜೊತೆ ಹೋರಾಡಲು ಪ್ರಾಣಿಗಳು ಸಿದ್ಧವಾಗುತ್ತಿದ್ದಾಗ ಕಾವ್ಯರಾಜ ಚತುರಮತಿಗೆಂದನು, " ಮಹಾರಾಜ ನಮ್ಮ ಪ್ರಾಣಿಗಳ ಹಳೆ ಅಸ್ತ್ರಗಳಾದ ಕೊಕ್ಕು, ರೆಕ್ಕೆ, ವಿಷ, ಇತ್ಯಾದಿಗಳ ಸಹಾಯ ಮಾತ್ರದಿಂದ ನಾವು ಮನುಷ್ಯರನ್ನು ಸೋಲಿಸಲಾಗದು. ನಮಗೆ ಇದಕ್ಕಾಗಿ ಅನೇಕ ತರಹದ ಹೊಸ ಅಸ್ತ್ರಗಳ ಸಹಾಯವು ಬೇಕಾಗುತ್ತದೆ". ಕಾವ್ಯರಾಜನ ಮಾತು ಚತುರಮತಿಗೆ ಸರಿ ಅನಿಸಿತು. ಅವನು ತನ್ನ ಸೇನಾಪತಿಯಾದ ವಾಯುವೇಗಿಎಂಬ ಚಿರತೆಯನ್ನು ಕರೆದು ಅಂದ, " ಓ, ವಾಯುವೇಗಿಯೇ ನಮ್ಮ ಕಾಡಿನ ಸಂಪತ್ತನ್ನು ರಕ್ಷಿಸಲು ನಮಗೆ ಆಧುನಿಕ ಶಸ್ತ್ರಾಸ್ತ್ರಗಳ ಅವಶ್ಯಕತೆ ಇದೆ. ನೀನು ಇವುಗಳ ವ್ಯವಸ್ಥೆಯನ್ನು ಮಾಡು". ವಾಯುವೇಗಿಯು ಚತುರಮತಿಯ ಅಪ್ಪಣೆಯಿಂದ ತನ್ನ ಬಳಗದವರನ್ನು ಕೆರದುಕೊಂಡು ಆದಿ ಮಾನವರಿದ್ದ ಅರಣ್ಯಕ್ಕೆ ಹೋಗಿ ಅವರ ಬಳಿ ಇದ್ದ ಪರಮಾಣು ಬಾಂಬ್, ಎ.ಕೆ.47, ಗನ್, ಯುದ್ಧ ವಿಮಾನಗಳು, ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಬುದ್ಧಿವನಕ್ಕೆ ಬಂದನು. ವಾಯುವೇಗಿಯು ತಂದ ಆಯುಧಗಳನ್ನು ಉಪಯೋಗಿಸುವ ತರಭೇತಿಯನ್ನು ಸೈನ್ಯಗುರುವೆಂಬ ಚಿರತೆಯು ನೀಡಿತು. ಹಕ್ಕಿಗಳು ಯುದ್ಧ ವಿಮಾನವನ್ನು ಓಡಿಸುವುದನ್ನು ಕಲಿತುಕೊಂಡವು. ಮೊಲ, ಅಳಿಲು, ಕರಡಿ, ಮಂಗಗಳು ಗನ್ ಅನ್ನು ಬಳಸುವುದನ್ನು ಕಲಿತುಕೊಂಡರು. ಹಾವುಗಳು ತಮ್ಮ ಬಾಯಲ್ಲಿ ಪರಮಾಣು ಬಾಂಬ್ ಗಳನ್ನು ಇಟ್ಟುಕೊಂಡು ಅದನ್ನು ಎಸೆಯುವ ತರಭೇತಿಯನ್ನು ಪಡೆದರು.
ಹೀಗೆ ಎಲ್ಲ ಪ್ರಾಣಿಗಳು ಯುದ್ಧಕ್ಕೆ ತಯಾರಿ ನಡೆಸಿದರು. ಒಂದು ದಿನ ಮಾನವರ ಒಂದು ಗುಂಪು ಬುದ್ಧಿವನಕ್ಕೆ ಬಂದು ಅಲ್ಲಿನ ಮರಗಳನ್ನು ಕಡಿಯಲು ಹೋದರು. ಆದರೆ ಅವರು ನೋಡುವುದೇನು ದಷ್ಟಪುಷ್ಟವಾಗಿ ಬೆಳೆದಿರುವ ಆನೆಗಳು ಹಾಗೂ ಕಾಡೆಮ್ಮಗಳು ಮರಗಳ ಸುತ್ತ ನಿಂತಿದ್ದರು. ಆ ಪ್ರಾಣಿಗಳ ಮೇಲೆ ಮನುಷ್ಯರು ಹೊಡೆಯಲು ಹೋದರು. ತಮ್ಮನ್ನು ಹೊಡೆಯಲು ಬಂದ ಮನುಷ್ಯರನ್ನು ಕಾಡೆಮ್ಮೆಗಳು ಒದ್ದವು. ಆನೆಗಳು ಅವರನ್ನು ತಮ್ಮ ಸೊಂಡಿಲಿನಲ್ಲಿ ಎತ್ತಿ ನದಿಗೆ ಹೋಗಿ ಮುಳುಗಿಸಿದರು. ಪ್ರಾಣಿಗಳ ಅಚಾನಕ್ ದಾಳಿಯಿಂದ ಮನುಜರು ಹೆದರಿ ತಮ್ಮ-ತಮ್ಮ ನಗರಗಳಿಗೆ ಮರಳಿದರು. ಕಾಡಿನಲ್ಲಿ ನಡೆದ ಸಂಗತಿಯನ್ನು ಅವರು ತಮ್ಮ ನಾಯಕರಿಗೆ ಹೇಳಿದರು. ಆ ನಾಯಕರು ಎಲ್ಲ ಪ್ರಾಣಿಗಳನ್ನು ಹಿಡಿಯಲು ಬಲೆಗಳನ್ನು, ನಿದ್ರೆ ಔಷಧಿಗಳನ್ನು ತೆಗೆದುಕೊಂಡು ಅವರು ಬುದ್ಧವನಕ್ಕೆ ಬಂದರು. ತಮ್ಮ ಸೆರೆಹಿಡಿಯಲು ಬರುತ್ತಿರುವ ಮನುಷ್ಯರನ್ನು ಕರಡಿಗಳು ಗನ್ನಿನಿಂದ ಹೊಡೆದು ಕೊಂದರು. ನಾಗಗಳು ಹಲ್ಲಿನಿಂದ ಬಾಂಬನ್ನು ಕಚ್ಚಿ ಮನುಷ್ಯರ ಮೇಲೆ ಬಿಟ್ಟರು. ಅನೇಕ ಮಾನವರು ಸಾವನ್ನಪ್ಪಿದರು.
ಅನೇಕ ವ್ಯಕ್ತಿಗಳು ಸತ್ತದ್ದನ್ನು ಕಂಡ ಮಾನವರಿಗೆ ಆಶ್ಚರ್ಯವಾಯಿತು. ಅವರಿಗೆ ಅನಿಸಿತು ಇತ್ತೀಚೆಗೆ ಈ ಪಶುಗಳು ಕೂಡ ವಿಜ್ಞಾನವನ್ನು ಕಲಿತಿದ್ದಾರೆ. ಇನ್ನು ಇವರನ್ನು ಸೆರೆ ಹಿಡಿಯುವುದು, ಬೇಟೆಯಾಡುವುದು, ಮರಗಳನ್ನು ಕಡಿಯುವುದು ಅಸಾಧ್ಯ. ಆದರಿಂದ ಮನುಷ್ಯರು ಪ್ರಾಣಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಹೋದರು. ಮನುಜರ ಸರದಾರನಾದ ಸುಶೀಲ ಶರ್ಮನು ಚತುರಮತಿಯ ಬಳಿ ಬಂದು ಹೇಳಿದನು, "ಮೃಗರಾಜ, ನಿನ್ನ ಕಾಡಿನ ಪ್ರಾಣಿಗಳ ಯುದ್ಧ ಕೌಶಲ್ಯವನ್ನು ಕಂಡ ನಾವು ಇನ್ನು ನಿಮ್ಮ ಕಾಡಿನ ಸಂಪನ್ಮೂಲವನ್ನು ನಾಶಮಾಡುವುದಿಲ್ಲ. ಆದರೆ ನಮಗೆ ಬೇಕಾದ ಕೆಲವು ವಸ್ತುಗಳು ನಮಗೆ ಕಾಡಿನಿಂದ ನೀವು ಕೊಡಬೇಕು". ಕಾವ್ಯರಾಜ ಕೇಳಿದ, "ಯಾವ ವಸ್ತುಗಳ ಬಗ್ಗೆ ಕೇಳುತ್ತಿದ್ದೀರಿ ನೀವು? ನಾವು ನಿಮಗೆ ಯಾವ ವಸ್ತುಗಳನ್ನು ಒಪ್ಪಿಸಬೇಕು?" ಸುಶೀಲ ಶರ್ಮನೆಂದ, "ಕಾವ್ಯರಾಜ, ನಮಗೆ ಮೃತ ಪ್ರಾಣಿಗಳ ಚರ್ಮ, ಮೂಳೆ, ಮಾಂಸ ಮುಂತಾದ ವಸ್ತುಗಳು ಬೇಕು. ರಬ್ಬರ್ ಮರಗಳ ಹಾಲನ್ನು ನೀವು ನಮಗೆ ಕೊಡುಬೇಕು. ಈ ವಸ್ತುಗಳನ್ನು ನೀವು ನಮಗೆ ವರ್ಷಕ್ಕೊಮ್ಮೆ ಕೊಟ್ಟರೆ ಸಾಕು". "ನಾವು ನಿಮಗೆ ಕೊಡುವಷ್ಟೇ ವಸ್ತುಗಳ ಮೇಲೆ ನಿಮಗೆ ಅಧಿಕಾರ. ನೀವೇ ಬಂದು ನಮ್ಮ ಕಾಡಿನ ವೃಕ್ಷಗಳನ್ನು ಕಡಿಯಬಾರದು. ಪ್ರಾಣಿಗಳನ್ನು ಹಿಡಿದುಕೊಂಡು ಹೋಗಬಾರದು. ಮೃಗಗಳನ್ನು ಬೇಟೆಯಾಡಬಾರದು" ಕಾವ್ಯರಾಜನೆಂದ.
ಕಾವ್ಯರಾಜನ ಮಾತಿಗೆ ಸುಶೀಲ ಶರ್ಮನು ಒಪ್ಪಿಕೊಂಡನು. ಚತುರಮತಿಯು ಒಪ್ಪಂದ ಪತ್ರದ ಮೇಲೊಂದು ಮುದ್ರೆ ಒತ್ತಿದನು. ಶರ್ಮನು ತನ್ನ ಜನರೊಡನೆ ನಗರಕ್ಕೆ ವಾಪಾಸಾದನು. ಚತುರಮತಿಗೆ ತನ್ನ ಕಾಡಿನ ಸಮಸ್ಯೆಗಳು ಪರಿಹಾರವಾದದ್ದನ್ನು ಕಂಡು ಖುಷಿಯಾಯಿತು. ಅವನು ತನ್ನ ಕಾಡಿನ ಪ್ರಾಣಿಗಳಿಗೆ ಸಹಾಯ ಮಾಡಲು ಬಂದ ಅನ್ಯ ವನದ ಜೀವಿಗಳಿಗೆ ಕೃತಜ್ಞತೆಯನ್ನು ತಿಳಿಸಿ ಅವರನ್ನು ಬೀಳ್ಕೊಟ್ಟನು. ಚತುರಮತಿಯು ತನ್ನ ಕಾಡಿನಲ್ಲಿ ಸಂಭ್ರಮಾಚರಣೆಯ ಘೋಷಣೆ ಮಾಡಿದನು. ಎಲ್ಲ ಪ್ರಾಣಿಗಳು ಸಂಭ್ರಮಾಚರಣೆಗೆ ತಯಾರಿ ನಡೆಸಿದರು. ಕಾವ್ಯರಾಜನು ಸಂಭ್ರಮಾಚರಣೆಯ ದಿನ ಒಂದಿಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕೊಂಡನು. ಕಾರ್ಯಕ್ರಮ ಸಮಿತಿಯ ಅಧ್ಯಕ್ಷನಾದ ಅತಿವೇಗಿಗೆ ಆಯಾಯ ಕಾರ್ಯಕ್ರಮಗಳಿಲ್ಲಿ ಯಾವ ಪ್ರಾಣಿಗಳು ಭಾಗವಹಿಸಲು ಒಪ್ಪುವರೋ ಅವರ ಹೆಸರನ್ನು ನೊಂದಾಯಿಸಿಕೊಳ್ಳಲು ಸಲಹೆ ನೀಡಿದನು.
ಮುಂದುವರೆಯುವುದು.......
ಅರವಿಂದ ಬಾಯಿರಿ,
ಎಂಟನೇ ತರಗತಿ,
ಕಾರ್ಮೆಲ್ ಕಾನ್ವೆಂಟ್ ಸ್ಕೂಲ್,
ಕಾರ್ಮೆಲಾರಾಂ, ಬೆಂಗಳೂರು - ೩೫.
No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...