Thursday, November 25, 2021

ಕನ್ನಡ ಶಿಶುಗೀತೆಗಳ ಸಮಗ್ರ ಸಂಗ್ರಹ

ಶಿಶುಗೀತೆಗಳ ಸಮಗ್ರ ಸಂಗ್ರಹ



[24/11, 6:34 PM] Anandajala Teachr: *ಶಿಶುಗೀತೆ ರಚನೆ*


*ಬೆಳದಿಂಗಳ ಚಂದಿರ*


ಹುಣ್ಣಿಮೆ ರಾತ್ರಿ ಸೊಬಗಲಿ

ಚುಕ್ಕಿಗಳ ನಡುವೆ ನಗುತಲಿ

ಮೋಡದ ಮೇಲೆ ತೇಲುತಲಿ

ಬೆಣ್ಣೆಯ ಮುದ್ದೆಯ ತೆರದಲ್ಲಿ

ಆಗೋ ಬಂದನು ಬೆಳ್ಳಿ ಚಂದಿರ

ನೋಡಲು ಇವ ಬಲು ಸುಂದರ

ಹಾಸಿದ ನೊರೆವಾಲ ಹಂದರ

ತಂಪು ಬೆಳದಿಂಗಳ ಚಂದಿರ//


*ರವಿತೇಜ ಬಂದ*


ಮೂಡಣದಿ ಹೊಂಬೆಳಕ ತಂದ

ಮುಂಜಾನೆ ರವಿತೇಜ ಬಂದ

ಎಲ್ಲೆಲ್ಲೂ ಕಾಂತಿಯ ಚೆಲ್ಲಿದ

ಭೂ ತಾಯಿಯ ಬೆಳಗಿಸಿದ

ಕತ್ತಲೆಯ ತಾ ಓಡಿಸಿ

ಮಲ್ಲಿಗೆ ಮೊಗ್ಗನು ಅರಳಿಸಿ

ಮನಕೆ ಮುದವನು ತರಿಸಿ

ಬಂದ ರವಿ ಬೆಳಕ ಸುರಿಸಿ//


*ಆನಂದಜಲ,ಶಿಕ್ಷಕಿ*

  *ತುರುವೇಕೆರೆ*

[24/11, 6:43 PM] Saritha Akka Herady: *ಸ್ಪರ್ಧೆಗಾಗಿ:- ಶಿಶುಗೀತೆ ರಚನೆ*

*ವಿಷಯ :-ರವಿತೇಜ ಬಂದ*

*ಶೀರ್ಷಿಕೆ:-ರವಿಮಾಮ*


 ಹೊಂಬಣ್ಣದಿ ಮೂಡುತ

ಹೊಂಗಿರಣವ ಬೀರುತ

ಪಳಪಳನೆ ಹೊಳೆಯುತ

ಬಂದನು ರವಿತೇಜ ಮಿನುಗುತ||


ಜಗದಗಲಕೂ ಬೆಳಕ ನೀಡುವನು 

ಕತ್ತಲೆಯನು ಒದ್ದೋಡಿಸುವನು

ಗಗನ ಕುಸುಮ ಶಶಿಕಿರಣನು 

ಅವನೇ ನಮ್ಮ ರವಿಮಾಮನು||


*ಸರಿತಾ ಅಂಬರೀಷ್ ಕುತ್ಪಾಡಿ*✍🏻


*************************


*ವಿಷಯ:-ಬೆಳದಿಂಗಳ ಚಂದಿರ*

*ಶೀರ್ಷಿಕೆ:-ಆಗಸದರಸ*


 ಮೋಡದ ಮರೆಯಲಿ ನಗುವವನು

ಜಗಕೆ ತಂಪನು ನೀಡುವನು

ಹಾಲಿನ ಬಣ್ಣದಿ ಹೊಳೆಯುವನು

ಆಗಸದರಸ ಚಂದಿರನು||


ಬಿಸಿಲ ಬೇಗೆಯನು ತೊಡೆಯುವನು

ಹುಣ್ಣಿಮೆರಾತ್ರಿಯಲಿ ನಗುವನು

ಮಂದಬೆಳಕನು ನೀಡುವನು

ನಮ್ಮ ಮುದ್ದಿನ ಚಂದಮಾಮನು||


*ಸರಿತಾ ಅಂಬರೀಷ್ ಕುತ್ಪಾಡಿ*✍🏻

[24/11, 7:31 PM] Vijaya G. Madam Wrtr: ಬತ್ತದ ತೊರೆ ಸ್ನೇಹ ಬಳಗ

ಸ್ಪರ್ಧೆ-ಶಿಶುಗೀತೆ

ರವಿತೇಜ ಬಂದ

ಬೆಳದಿಂಗಳ ಚಂದಿರ

**************************

ರವಿತೇಜ ಬಂದ

-------------------------


 ಶೀರ್ಷಿಕೆ   -   ಏಳು ಕಂದ

*************************

ಬಾನೆಲ್ಲಾ ನೋಡು ಕೆಂದಾವರೆ ಬಣ್ಣ

ಇಣುಕುತ ಬಂದನಿಲ್ಲಿ ರವಿಯಣ್ಣ

ಆಕಾಶದ ತುಂಬಾ ಹೊನ್ನಕಿರಣ

ಚಳಿಯ ದೂರಮಾಡಿ ಬಂದ ಅರುಣ


ಕತ್ತಲೆಯ ಓಡಿಸಿ ರವಿತೇಜ ಬಂದ

ಕಂದ ಬೆಳಗಾಯ್ತು ಏಳು ಎಂದ

ಎದ್ದೇಳು ನೋಡು ಬಾ ಪುಟ್ಟಕಂದ

ಕೆಂಪು ಬಣ್ಣದೋಕುಳಿ ನೋಡೆ ಚಂದ


ಬೆಳದಿಂಗಳ ಚಂದಿರ

-----------------------------

ಶೀರ್ಷಿಕೆ- ಚಂದಿರ

************************

ಬಾರೋ ಬಾರೋ ಸುಂದರ

ನೋಡಲ್ಲಿ ಬೆಳದಿಂಗಳ ಚಂದಿರ

ಮಿನುಗುತಿರುವ ತಾರೆಯರ

ಅಂದವ ನೋಡೋ ಸುಕುಮಾರ


ಗೋಲಾಕಾರದ ಚಂದಿರ

ಹೊಳಪು ನೋಡು ಬಂಗಾರ

ಮೋಡದೊಳಗೆ ಅಡಗುವ

ಕಣ್ಣಾಮುಚ್ಚಾಲೆ ಆಡುವ


ಶ್ರೀಮತಿ ವಿಜಯಾ ಜಿ ಶೆಟ್ಟಿ

ಸಿರ್ಸಿ (ಉತ್ತರ ಕನ್ನಡ )

[24/11, 7:52 PM] Usha Dinesh Wrtr: ಬತ್ತದ ತೊರೆ ಶಿಶುಗೀತೆ ಸ್ಪರ್ದೆಗಾಗಿ


1)ರವಿತೇಜ ಬಂದ

       ರವಿರಾಜ

---------------------------

ರವಿತೇಜ ಬಾನಿಂದ ಬಂದ

ಈ ಭುವಿಯ ಕತ್ತಲನು ಕೊಂದ

ಹೊಸತನವು ತನ್ನಿಂದ ಎಂದ

ಬೆಳ್ಳಿ ಬೆಳಕನು ನಮಗಾಗಿ ತಂದ


ಸುಮಗಳು ಚೆಲ್ಲುತ್ತಿವೆ ಗಂಧ

ದುಂಭಿಗಳ ಝೇಂಕಾರ ಚಂದ

ತಂಗಾಳಿ ತೂಗಿರಲು ಆನಂದ

ಬೆಸೆದಿದೆ ಜಗದೊಡನೆ ಬಂಧ


2)  ಬೆಳದಿಂಗಳ ಚಂದಿರ

             ಹೊನಲು

-------------------------------------

ಬೆಳದಿಂಗಳ ಚಂದಿರನೇ ಬಾರ

ಚೆಲುವಾದ ಮುಖವನ್ನು ತೋರ

ಹಾಲ್ಬೆಳಕ ಹೊನಲನ್ನು ತಾರಾ

ಕಂದನ ನಗುವಲ್ಲಿ ಸೇರಾ


ಹಿರಿದಾಗಿ ಹಿಗ್ಗುವವನು ನೀನು

ರಂಗಾಯ್ತು ಬೆಳಗುತಲಿ ಬಾನು

ಕಾಂತಿಯನು ಚೆಲ್ಲುತ್ತಾ ತಾನು

ಚೆಲುವಿಗೆ ಹೋಲಿಕೆಯಾಗುವೆಯೇನು


ಉಷಾ ದಿನೇಶ್

ಶಿವಮೊಗ್ಗ

[24/11, 8:34 PM] Latha Gowda Techr: 🍁ಬತ್ತದ ತೊರೆ ಸ್ನೇಹ ಬಳಗ

🍁ಸ್ಪರ್ಧೆಗಾಗಿ :ಶಿಶುಗೀತೆ


*🍁ವಿಷಯ:- ಬಂದ ರವಿತೇಜ*


ನೋಡು ಕಂದ ಮೇಲೆ ನೋಡು

ಎದ್ದು ಬಂದ ದಿನಕರ

ದೂಡಿ ದೂಡಿ ಕತ್ತಲನ್ನು 

ಬೆಳಕು ತಂದ ಬಾಸ್ಕರ


ಹುಲ್ಲು ಹಾಸ ಮೇಲೆ ಹೊಳೆವ

ಮುತ್ತಿನಂತ ಇಬ್ಬನಿ

ಬಂದ ರವಿತೇಜನನ್ನು ಕಂಡು

ಹಕ್ಕಿಪಿಕ್ಕಿ ಚಿಲಿಪಿಲಿ



*ವಿಷಯ :ಬೆಳದಿಂಗಳ ಚಂದಿರ*


ಬೆಣ್ಣೆಯ ಹಾಗೆಯೇ ತೇಲುತ ಬಂದನು

ತಿಂಗಳ ಬೆಳಕನು ಚೆಲ್ಲುತ ನಿಂದನು

ದುಂಡನೆ ಮೊಗದ ಸುಂದರ ಚೆಲುವ

ಬೆಳದಿಂಗಳ ಚಂದಿರನು


ಹುಣ್ಣಿಮೆ ರಾತ್ರಿಗೆ ತಪ್ಪದೆ ಬರುವ

ಚುಕ್ಕಿಗಳೊಂದಿಗೆ ಹೊಳೆಯುತಲಿರುವ

ಅಂಗಳ ತುಂಬವು ಹೊಳಪನು ಚೆಲ್ಲುವ

ಬೆಳದಿಂಗಳ ಚಂದಿರನು


ಲತಾಗೌಡ 

ಶಿಕ್ಷಕಿ

ಭಟ್ಳಳ

[24/11, 8:34 PM] Pushpa Prasad Udupi: ಸ್ಪರ್ಧೆಗೆ

ವಿಷಯ : ರವಿತೇಜ

               ಬೆಳದಿಂಗಳ ಚಂದಿರ


*ಶೀರ್ಷಿಕೆ : ಜೀವತತ್ವ *

================

ಕತ್ತಲೆ ಮುಸುಕು ಸರಿಸಿ

ರವಿತೇಜ ಮೆಲ್ಲನೆ ಇಣುಕಿಹನು!!


ಹಕ್ಕಿಗಳ ಚಿಲಿಪಿಲಿ ಹಾಡನು ಕೇಳಿ

ಹೊಂಗಿರಣ ಚೆಲ್ಲಿರುವನು!!


ಮುಂಜಾನೆ ಸೂರ್ಯ ರಶ್ಮಿಗೆ

ಒಡ್ಡಲು ಮೈ ಸಿಗುವುದು ಡಿ ಜೀವಸತ್ವ!!


ಜಗ ಬೆಳಗುವ ರವಿಮಾಮನೊಳಪಿಗೆ

ಎಲ್ಲರೊಂದೇ ಎನ್ನುವ ತತ್ವ!!


************************************

*ಶೀರ್ಷಿಕೆ : ಪೂರ್ಣಚಂದ್ರ*

==================


ಚಂದಮಾಮ ಬಾನಿನಲ್ಲಿ

ನಗುತ ಏನು ಮಾಡುವೆ?


ಇಳೆಗೆ ಇಳಿಯೋ ಎನ್ನಲು ನಾ

ಮುನಿಸಿಕೊಂಡೆ ಏತಕೆ?


ಹುಣ್ಣಿಮೆಯಲ್ಲಿ ಪೂರ್ಣಚಂದ್ರ

ನೀನೆ ತಾನೆ ಸುಂದರ!!


ಇರುಳು ಕಳೆಯೇ ಮತ್ತೆ ಬರುವ

ಹೊನ್ನ ಹೊಳಪ ನೇಸರ!!


✍️ ಪುಷ್ಪ ಪ್ರಸಾದ್ ಉಡುಪಿ

[24/11, 8:36 PM] Laxmi V Bhat Wrtr: ಶಿಶು ಗೀತೆ



*ಅರುಣೋದಯ*


ರವಿತೇಜ ಬಂದಾಗ

ಬಣ್ಣದಾ ಓಕುಳಿಯು

ಮಕ್ಕಳೆಲ್ಲರ ಮನಗೆದ್ದು

ತಂಗಾಳಿ ಬೀಸುತ್ತಾ

ಮೊಗ್ಗುಗಳು ಬಿರಿದಿರಲು

ಸುರಲೋಕ ಧರೆಯಲ್ಲಿ 

ತನ್ನಿರವ ಪಡೆದಿರಲು

ಹಕ್ಕಿಗಳ ಕಲರವವು


*ತಿಂಗಳ ಬೆಳಕು*


ಬೆಳದಿಂಗಳ ಇರುಳಿನಲಿ

ಆಗಸದ ಚುಕ್ಕೆಗಳ

ನೋಡೋಣ ಚಿಣ್ಣರೇ

ಓಡೋಡಿ ಬನ್ನಿರಿ

ಚಂದಿರನ ಕಾಂತಿಯಲಿ

ಹಾಲನ್ನ ಉಣ್ಣುತ್ತ

ಅಮ್ಮನಾ ಮಡಿಲಿನಲಿ

ಪವಡಿಸುವ ಸಮಯವದು


ಲಕ್ಷ್ಮೀ ವಿ ಭಟ್

No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...