Google image source images
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರ ೧೨೦ ನೇ ಜನ್ಮದಿನದ ಅಂಗವಾಗಿ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ ಭಾಗ-೦೩
ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ
ಕವನ : ನಾನಾರ್ಥದ ಸಿರಿವಂತಿಕೆಯ ಸ್ವಾತಿ ಮುತ್ತು
ಮಹತ್ವವುಳ್ಳದೀ ಮುತ್ತು ಮಾತಿಗೆ ಹೋಲಿಸಿಹುದು
ಒಡೆದು ಚೂರಾಗಲು ಮತ್ತೆ ಕೂಡಿಸಲಾಗದು
ಸ್ಪಷ್ಟ ಶುದ್ಧತೆಯ ಮಾತಿನಲ್ಲಿಹುದೀ ಮುತ್ತು
ಪರಿಶುದ್ಧತೆಯ ಸಂಕೇತವೇ ಶುಭ್ರ ಮುತ್ತು
ವಿವಿಧಾರ್ಥದೊಳುಂಟು ಮತ್ತೊಂದು ಮುತ್ತು
ತಾಯಿ ವಾತ್ಸಲ್ಯಭರಿತದಿ ಕೊಡುವ ಲಲ್ಲೆಗರೆವ ಮುತ್ತು
ನಲ್ಲ ಪ್ರೇಯಸಿಗೆ ಕೊಟ್ಟ ಕೆನ್ನೆ ಮುತ್ತು
ಮುತ್ತುಗಳನೇಕ ರಸಿಕಮನಕೆ ಸಂತಸ
ನಿಜಾರ್ಥದೊಳು ತೋರುವದು ಸ್ವಾತಿಮುತ್ತು
ಕಪ್ಪೆಚಿಪ್ಪಿನೊಳಗಡಗಿ ಕೂತ ಗುಪ್ತಸ್ವತ್ತು
ಸ್ವಾತಿಮಳೆಗರೆಯಲದು ಬಾಯ್ದೆರೆದು ಮುತ್ತಾಗುವದು
ಕೊರಳೊಳು ಹೊಳೆವ ಆಭರಣವಾಗಿಹುದು
ನಿಸರ್ಗ ಕರುಣಿಸಿಹ ಸಿರಿ ಸಂಪತ್ತು
ಸಮೃದ್ಧಿಗೆ ಇತಿಹಾಸದಿ ಸಂಕೇತವಾಗಿತ್ತು
ಹಂಪಿಯೊಳು ಸೇರು ಸೇರಿನಲ್ಲಳೆದ ಮುತ್ತು
ಭಾರತೀಯರ ಶ್ರೀಮಂತಿಕೆಯ ದ್ಯೋತಕವೀ ಮುತ್ತು
ಶ್ರೀಮತಿ ಗಿರಿಜಾ ಹಿರೇಮಠ ಬೆಳಗಾವಿ
ಜೀವನದರಿವು
ಅರಳುತಿದೆ ಭುವಿಯಲ್ಲೊಂದು ಜೀವ
ಮಾತಾಪಿತರ ಮೊಗದಲಿ ಸಂತಸದ ಭಾವ I
ಮಗುವ ಮೊಗವು ಮರೆಸುವುದು ನೋವ
ಅನುಭವಿಸುವವರು ಧನ್ಯತಾಭಾವ II 1 II
ಹರೆಯಕ್ಕೆ ಕಾಲಿಡುತಿರುವ ಸಮಯ
ಹೊಸ ಹುರುಪಿನಲಿ ಸಿದ್ಧವಾದ ಕಾಯ I
ಪಡೆಯಬೇಕು ಎಲ್ಲದರಲ್ಲೂ ಜಯ
ಮರುಳಾಗೇರುವರು ಆಸೆಯ ಹಯ II 2 II
ಗುರುಹಿರಿಯರ ಮಾತು ಕೇಳದು ಆಗ
ತಂದೆತಾಯಿಯೇ ಶತ್ರುವಾಗುವರಾಗ I
ಸಂಸಾರಜೀವನವ ಪ್ರಾರಂಭಿಸಿದಾಗ
ಸೇರುವವರಾಗ ನವ ಬಂಧುಬಳಗ II 3 II
ಮಕ್ಕಳು ಬಲ್ಲವರಾಗಿ ಎದ್ದುನಿಂತಾಗ
ಸಂಸಾರದಲಿ ಹೊಸತು ಬಂತು ಆಗ I
ವೃದ್ಧಾಪ್ಯ ಸಮೀಪಿಸಿ ಚೈತನ್ಯ ಕುಗ್ಗಿತಾಗ
ಉತ್ಸಾಹ ಕಳಚಿ ನಿರುತ್ಸಾಹ ಆವರಿಸಿತಾಗ II 4 II
ಕಳೆದ ಬಾಲ್ಯದ ಸಿಹಿಕಹಿ ಅನುಭವ
ತಪ್ಪು ಒಪ್ಪಿನ ಅರಿವಿನ ಅನುಭಾವ I
ಮಾಡಿದ ಕರ್ಮದ ಫಲದ ಪರಿಣಾಮ
ನೋವೋ ನಲಿವೋ ಜಗದ ನಿಯಮ II 5 II
ತಾರುಣ್ಯ ಕರಗಿ ಕುಟುಂಬದಲಿ ಕೊರಗಿ
ತನುವೆಲ್ಲಾ ಸೊರಗಿ ಆಗುವನು ವಿರಾಗಿ I
ಬುದ್ಧಿಯು ಮಾಗಿ ನೆನಪು ಕಡಿಮೆಯಾಗಿ
ಅರಳುಮರುಳಾಗುವುದು ವೃದ್ಧನಾಗಿ II 6 II
ಡಾII ಅಮರಗೋಪಾಲ ಗುಡ್ಗೆ.
ಬೆಂಗಳೂರು
ಕವನದ ಶೀರ್ಷಿಕೆ :-ಅಮ್ಮ
ll ಇವಳು ಮನೆ ಎಂಬ ಗುಡಿಯವಳೆಗೆ ಮೂಕಿಯಂತೆ ಇರುವವಳು
ಕೋಟಿ ದೇವರಾಗಿತ್ತಾ ದೊಡ್ಡವಳು
ತನ್ನ ಹತ್ತಿರ ಕಷ್ಟ ಎಂದು ಬಂದವರಿಗೆ
ಪ್ರೀತಿ ನೀಡುವ ದೇವತೆ ಇವಳು ll
ll ತನ್ನ ಮಕ್ಕಳು ಹಸಿವಿನಿಂದ ಇದ್ದವ್ರಿಗೆ
ತನ್ನ ಕೈಗಳು ಇಂದ ಅಮೃತವನ್ನು ಉಣಬಡಿಸುವಳು
ನೆತ್ತಿಗೆರಿದ ಮಕ್ಕಳಿಗೆ ತನ್ನ ಎದೆಹಾಲನ್ನು ಉಣಬಡಿಸುವವಳು ll ತನ್ನ ಮಕ್ಕಳಿಗೆ ಆಗುವ ಗಾಯವನ್ನು ತನಗೆ ಆದಂತೆ ವರ್ತಿಸುವವಳು
ತನ್ನ ಮನದಲ್ಲಿ ಆಗಿರುವ ಗಾಯಗಳನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟು ಕೊಳ್ಳುವವರು ll
ಕೆಲಸದಿಂದ ಮನೆಗೆ ಬಂದ ಗಂಡನಿಗೆ ಅರ್ಧಾಂಗಿಯಾಗಿ ಇರುವವಳು
ಗಂಡನ ಕಷ್ಟಗಳನ್ನು ತಣ್ಣೀವೆಂದು ಸ್ವೀಕರಿಸುವವರು ll.
ll ಮನೆಯಲ್ಲಿರುವ ದೊಡ್ಡ ಹಿರಿಯರಿಗೆ ಗೌರವ ನೀಡುವವಳು
ಅವರು ಹೇಳುವ ಬುದ್ಧಿವಂತ ಮಾತಿಗೆ ಗೌರವ ತರುವ ll.
ll ಅವಳ ಮನದಲ್ಲಿ ಆಗಿರುವ ನೋವುಗಳನ್ನು ಯಾರಿಗೂ ಹೇಳದೆ ಮನದಲ್ಲಿ ಮುಚ್ಚಿಟ್ಟುಕೊಳ್ಳುವವಳು
ತನ್ನ ಕುಟುಂಬದವರಿಗೆ ಕಪ್ಪುಚುಕ್ಕೆ ಮೂಡದಂತೆ ನೋಡಿ ಕೊಳ್ಳುವವಳು ll.
ll ತನ್ನ ಗಂಡನನ್ನು ದೇವರೆಂದು ಪೂಜಿಸುವವಳು
ತನ್ನ ಮಕ್ಕಳನ್ನು ನನ್ನ ಜೀವ ಎಂದು ನಂಬುವವಳು
ಕೋಟಿ ದೇವರಿಗಿಂತ ದೊಡ್ಡವಳು ll...
🌼🌼🌼🌼🌼🌼
ದೇವರಾಜ ಕೆ.
ಲ
ಕವನದ ಶೀರ್ಷಿಕೆ : ವ್ಯಸನಗಳು
( ಗಾಂಧೀಜಿಯವರ ಆಶಯ ಬಿತ್ತುವ ಕವಿತೆ )
ಗಾಂಜಾ ಅಫೀಮು ಅಮಲಿನಲಿ ತೇಲದಿರಿ ಮನುಜರೆ
ದುಶ್ಚಟಗಳ ದಾಸರಾಗಿ ಪ್ರಾಣ ತೊರೆಯದಿರಿ ಅಧಮರೆ
ವ್ಯಸನಗಳ ಸಹವಾಸ ಹೆಂಡತಿ ಮಕ್ಕಳ ಉಪವಾಸ
ಚಟಗಳ ತ್ಯಜಿಸುತ ಸಂಸಾರದೊಳು ನೆಲೆಗೊಳಿಸಿ ಉಲ್ಲಾಸ
ಮಧ್ಯದಂಗಡಿಗೆ ಕಟ್ಟುವಿರೇಕೆ ನಿಮ್ಮೆಲ್ಲ ಗಳಿಕೆ
ಭವಿಷ್ಯದ ಸುಂದರ ಬದುಕು ಬಲಿಯಾಗಬೇಕೆ ಚಟಕೆ
ನೀ ಮಸಣ ಸೇರಿದರೆ ಕುಟುಂಬ ಬೀಳುವುದು ಬೀದಿಗೆ
ಒಡೆಯನೆ ಇಲ್ಲದಿರೆ ನಾಯಕರಾರು ಬಾಳ ತೇರಿಗೆ
ಮಾಧಕ ದ್ರವ್ಯದ ನಿಶೆಯು ತರವಲ್ಲ ದೇಹಕೆ
ಆರೋಗ್ಯ ಜಾಗೃತಿ ಮೂಡಿಸುವ ಅಗತ್ಯವಿದೆ ಜನಕೆ
ಧೂಮಪಾನ ಮಾಡಿದರೆ ಉಸಿರುಗಟ್ಟಿ ಸಾಯುವೆ ಮರುಳೆ
ನೀ ಬಿಟ್ಟ ಹೊಗೆಗೆ ಮಾಲಿನ್ಯದಡುಗೆ ತೊಡುವಳು ಇಳೆ
ಜೂಜು ಮೋಜು ಮಸ್ತಿ ಕ್ಷಣಿಕ ಸುಖಗಳು ತೊರೆಯಿರಿ
ದೊರೆತೊಂದು ಅಮೂಲ್ಯ ಬಾಳಲಿ ಸಾಧನೆ ಮಾಡಿ ತೋರಿರಿ
ಆರೋಗ್ಯಕರ ಸಮಾಜ ನಿರ್ಮಾಣ ಯುವ ಜನತೆಯ ಜವಾಬ್ದಾರಿ ಮರೆಯದಿರಿ
ಭಾರತದ ಹೆಮ್ಮೆಯ ಕುಡಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರಿ
ಅನುಸೂಯ ಯತೀಶ್
ಶಿಕ್ಷಕಿ ಮಾಗಡಿ
ಪರೋಪಕಾರ
ಹೃದಯದ ತುಂಬಾ ಮಮತೆಯ ಬೆಳಕಿರಲಿ
ಕಂಗಳ ತುಂಬಾ ಕರುಣೆಯ ಹೊಳಪಿರಲಿ
ನೊಂದ ಮನಸಿಗಾಗಿ ಪ್ರೀತಿಯ ನುಡಿಯಿರಲಿ
ಮನದ ತುಂಬಾ ಪರರ ಕಾಳಜಿಯಿರಲಿ
ದ್ವೇಷ ಭಾವ ತೊರೆದು ಒಂದಾಗಿ ಬಾಳೋಣ
ಸರ್ವರ ಏಳಿಗೆಗಾಗಿ ನಾವು ದುಡಿಯೋಣ
ನಮ್ಮೊಂದಿಗೆ ಇತರರನ್ನೂ ಹರಸಿ ಬೆಳೆಸೋಣ
ಪ್ರೀತಿದೀವಿಗೆಯಿಂದ ಬದುಕ ಹಾದಿ ಬೆಳಗೋಣ
ತೋರುವ ಕಾಳಜಿಯಲಿ ಪರಿಶುದ್ಧತೆಯಿರಲಿ
ದುಡಿವ ಕಾಯಕದಲಿ ಪ್ರಾಮಾಣಿಕತೆಯಿರಲಿ
ಎಲ್ಲರೂ ನಮ್ಮವರೆನ್ನುವ ಬಾಧ್ಯತೆಯಿರಲಿ
ಸದ್ವಿಚಾರದಿಂದ ಬಾಳಲಿ ಪರಿಪೂರ್ಣತೆಯಿರಲಿ
ತೆರೆದ ಮನದಿಂದ ಪರೋಪಕಾರವೆಸಗು
ಸಹಾಯ ಪಡೆದವರಿಗಿರಲಿ ನಿನ್ನಿಂದ ಮೆರುಗು
ಸನ್ನಡತೆಗಳಿಂದ ಸರ್ವರ ಬದುಕ ಬೆಳಗು
ಸತ್ಯ ನ್ಯಾಯದ ಪರವಾಗಿ ನಿನ್ನ ದನಿ ಮೊಳಗು
ನೋವು ಕಷ್ಟಗಳಿಗೆ ಸ್ಪಂದಿಸುವ ಮನಸಿರಲಿ
ಅನುದಿನದ ಕಾಯಕಕೆ ಗುರಿಯ ಕನಸಿರಲಿ
ಸಹೃದಯತೆಯು ಸದಾ ರಕುತದಿ ಬೆರೆತಿರಲಿ
ಬಸವಳಿದು ಬಂದವರಿಗೆ ಪ್ರೀತಿ ಆಸರೆಯಿರಲಿ
✒️ ಸ್ಮಿತಾ ಅಶೋಕ್ ಪರ್ಕಳ
ಶೀರ್ಷಿಕೆ:-ಕನ್ನಡ ನಾಡು
ಭವ್ಯ ಪರಂಪರೆಯ ಕನ್ನಡ ವೈಭವ
ಸಾರುತ್ತಿದೆ ಕನ್ನಡಮ್ಮನ ಗತ ವೈಭವ
ಒಂದಾಗಿ ಸೇರಿ ಆಚರಿಸೋಣ ವೈಭವ
ಹೇಳಿರಿ ಎಲ್ಲರೂ ಕನ್ನಡ ರಾಜ್ಯೋತ್ಸವ.
ನಿತ್ಯ ನೂತನದ ಕನ್ನಡದ ಚೇತನ
ಕರುನಾಡಿನ ರಾಜ್ಯೋತ್ಸವ ಈ ದಿನ
ಬೆಳಗಲಿ ದಿನವೂ ನಿತ್ಯ ವಿನೂತನ
ಕರುನಾಡ ಧ್ವಜವು ಹಾರಲಿ ಅನುದಿನ.
ಕನ್ನಡವ ಬೆಳೆಸೋಣ ಎಲ್ಲಾ ಒಟ್ಟಾಗಿ
ಕೂಗಿ ಹೇಳುವೆ ನಾ ಕನ್ನಡಿಗ ಎಂದಾಗಿ
ಕನ್ನಡದ ಜನಕ್ಕೆ ಇರಬೇಕು ಮೊದಲ ಸ್ಥಾನ
ಕನ್ನಡದ ಭಾಷೆಗೆ ಇರಲಿ ಅಗ್ರ ಸ್ಥಾನ.
ಕನ್ನಡ ನಾಡಿನ ಪರಂಪರೆಯ ಕರುನಾಡು
ಕವಿ,ಸಾಹಿತಿಗಳಿಗೆ ಕಮ್ಮಿಇಲ್ಲ ತಾಯ್ನಾಡು
ಕನ್ನಡ ಭಾಷೆಗಿರಲಿ ಅಗ್ರಸ್ಥಾನ
ಕನ್ನಡದ ಜನಕ್ಕಿರಲಿ ಮೊದಲನೆಯ ಸ್ಥಾನ.
ಕರ್ನಾಟಕದಲ್ಲಿ ಹಾರಾಡಲಿ ನಮ್ಮ ಭಾವುಟ
ಬರೀ ಬಾಯಿ ಮಾತಿನಲ್ಲಿ ಬೇಡ ಹೋರಾಟ
ಕನ್ನಡ ಬಂಗಾರದ ಗಣೀಯ ತವರೂರ ಬೀಡು
ನಮ್ಮ ಹೆಮ್ಮೆಯ ಕರುನಾಡಿನ ಪರಂಪರೆ ಬೀಡು.
ಕನ್ನಡಕ್ಕೆ ಆಗಬೇಕು ನಮ್ಮಕರುನಾಡಿನ ಉಸಿರು
ಕನ್ನಡಕ್ಕೆ ಆಗಬೇಕು ನಮ್ಮ ಕರುನಾಡಿಗೆ ಹೆಸರು
ಕರುನಾಡಿನ ಕನ್ನಡದ ಸವಿಯಾದ ಕಂಪು
ಕನ್ನಡ ನಾಡು ನುಡಿಯ ಜೇನಿನಂತ ಇಂಪು.
ಯಶೋದ.ಗಾಣೀಗ, ಗೃಹಿಣಿ, ಮೊಗೆಬೆಟ್ಟು, ಬೇಳೂರು ಗ್ರಾಮ ಕುಂದಾಪುರ 🙏🙏
ಶೀರ್ಷಿಕೆ:ಹಬ್ಬದ ಕಬ್ಬ
ಹಬ್ಬದ ಕಬ್ಬವು ನಾಡೊಳಗಡಿಯಿಡೆ
ಕೂಜನಗಳು ಕುಹೂ ಕುಹೂ ಮೊರೆಯಿಡೆ
ಹಸಿರಿನ ಪೈರು ಧರೆಯಲಿ ಹೊಳೆಯಲಿ
ಫೈರು ತುಂಬಿ ನೆಲ ಮನೆ ಬೆಳಗಲಿ
ನಾಡು ನುಡಿಯಲಿ ದೇವಿ ಮಹಿಮೆಯು
ಹಾಡುತ ಪಾಡುತ ಭಕ್ತಿಯ ಸುಧೆಯು
ಕವಿಗಳು ಪಟುಗಳು ದೇಶಕೆ ಮೀಸಲು
ನಾಡು ನುಡಿಯಲಿ ಕನ್ನಡವೇ ಹೊಸಿಲು
ಮನವದು ಬಯಸುತ ದೇವರ ಭಜನೆಯ
ಪಾಡುತ ಹಾಡುತ ಸಾಗುತ ಕಥೆಯ
ಸಾಗುವ ದಾರಿಗೂ ದೇವರ ಜಪವು
ಕಳೆಯಲಿ ಮಾಡಿದ ವಿಧ ವಿಧ ಪಾಪವು
ತಾನು ಎನ್ನುವ ಅಹಂಮಿನ ಮನೆಯನು
ತುಕ್ಕು ಹಿಡಿದರು ಬಿಡನು ಉಸಿರನು
ಹಣದ ಮಮತೆಗೆ ಸಂಬಂಧಗಳ ಬೆಸುಗೆ
ಬಿಡರು ದೇವರ ಹೆಸರಲಿ ತರ ತರ ವಸುಗೆ
ದೇವಿಯ ನೆನೆದರೆ ಶುಭವದು ಮನೆಗೆ
ಮೋಕ್ಷವು ಸಿಗುವದು ಲೆಕ್ಕದಿ ಕೊನೆಗೆ
ಕನ್ನಡ ನಾಡಿನ ಮಗುವೆಂಬ ಹೆಮ್ಮೆಯು
ಏಳೇಳು ಜನುಮ ಮಗಳಾಗುವ ಆಸೆಯು
(ಕಮಲಾಸುತೆ)
ವಿನುತಾ ಕಿಚ್ಚೀಕೇರಿ
ಕೊರೊನ ರಜೆಯಲ್ಲಿ ತರಕಾರಿ ಕೃಷಿ
🌱🌱🌱🌱🌱🌱🌱
ಬೆಳೆಸಿಹೆನು ತರಕಾರಿ ಗಿಡಗಳನು ಹಿತ್ತಿಲಲಿ
ನನ್ನ ಮನೆಯಡುಗೆಯ ಆಸೆಯಿಂದ
ಕಣ್ಣಲ್ಲಿ ಕಣ್ಣಿಟ್ಟು ಸಮಯದಲಿ ನೀರುಣಿಸಿ
ಪೋಷಣೆಯ ಮಾಡಿಹೆನು ಮೋಹದಿಂದ
ಬೀಜವದು ಅಂಕುರಿಸಿ ಟಿಸಿಲೊಂದು ಮೂಡುತಿರೆ
ಬಗೆಬಗೆಯ ತರಕಾರಿ ಕಣ್ಣ ಮುಂದೆ
ಮನೆಯೊಳಗೆ ಉಪಯೋಗ ಆಗಿ ಉಳಿದವುಗಳನು
ನೆರೆಹೊರೆಗೆ ಹಂಚಬೇಕೆಂದುಕೊಂಡೆ
ಮೊಳೆತ ಗಿಡಗಳನೆಲ್ಲ ಹೆಗ್ಗಣವು ಎಳೆದಿರಲು
ಹೊಳೆಯಾಗಿ ಹರಿಯಿತು ಕಣ್ಣನೀರು
ಸಾವರಿಸಿಕೊಂಡು ಪುನಃ ಅವುಗಳನ್ನು ನೆಟ್ಟೆ ನಾ
ಹುಡುಕಿ ತುಂಡಾಗದೇ ಇರುವ ಬೇರು
ಕಾಪಾಡಿ ಗಿಡಗಳನು ಒಂದಡಿಗೆ ಬೆಳೆಯಲವು
ನವಿಲುಗಳು ಎಳೆ ತುದಿಯ ತುಂಡುಮಾಡೇ
ಮೊಂಡು ಹಠವನು ಹಿಡಿದು ಮುಳ್ಳುಗಳ ಶೇಖರಿಸಿ
ಇಟ್ಟೆನವುಗಳ ನಾನು ಗಿಡದ ಬುಡದೇ
ಗಿಡಗಳಲಿ ಹೂವರಳಿ ಕಾಯಿಗಳು ಬಿಟ್ಟಾಗ
ಧಾಳಿಯಿಡೆ ಮಂಗಗಳ ಹಿಂಡುಹಿಂಡು
ಯೋಚಿಸಿದೆ ತಲೆಕೆರೆದು ಕೂರಿಸಿದೆ ಮಗಳನ್ನು
ಆನ್ಲೈನ್ ತರಗತಿಯ ಜಾಡು ಹಿಡಿದು
🌷🌷🌷🌷🌷🌷🌷
ವಿದ್ಯಾಶ್ರೀ ಅಡೂರ್
ಮುಂಡಾಜೆ.
ಗೃಹಿಣಿ
ಅಡೂರ್ ಕಾವೇರಿ ಮನೆ
ಮುಂಡಾಜೆ
ಬೆಳ್ತಂಗಡಿ ತಾಲೂಕು
ಶೀರ್ಷಿಕೆ :-ಬಾಳಸಂಗಾತಿ
ನನ್ನ ಬಾಳಪುಟದಲ್ಲಿ ಬಂದವನು
ನನ್ನ ಬಾಳಸಂಗಾತಿ ಇವನು
ಚಲಿಸುತ್ತಿರುವ ಜೀವನ ನೌಕೆಯನ್ನು
ಚಲಾಯಿಸುತ್ತಿರುವ ನಾವಿಕನಿವನು...
ಕಷ್ಟಗಳೆನ್ನುವ ಅಲೆಗಳನ್ನೆದುರಿಸಿ
ನೋವುಗಳೆನ್ನುವ ಬಿರುಗಾಳಿಯನ್ನೆದುರಿಸಿ
ಬದುಕಿಗೆ ಸವಾಲೊಡ್ಡುವವನು...
ಅಂಗೈಯಲ್ಲಿಡಿದು ನನ್ನ ಪೋಷಿಸುವವನು
ಕಣ್ಣರೆಪ್ಪೆಯಂತೆ ನನ್ನ ಕಾಪಾಡುವವನು
ಹೃದಯದಲ್ಲಿಟ್ಟು ನನ್ನ ಪ್ರೀತಿಸುವವನು
ಇವನೇ ನನ್ನವನು ...ನನ್ನ ಜೊತೆಗಾರನು .
ಕೋಪ ಬಂದಾಗ ರಮಿಸುವವನು
ಹುಸಿಮುನಿಸ ತೋರಿದಾಗ ಮುದ್ದಾಡುವವನು
ನೀನೇ ನನ್ನ ಜೀವ ಎನ್ನುವವನು...
ಇವನೇ ನನ್ನವನು ...ನನ್ನ ಜೊತೆಗಾರನು...
ಸದಾ ಸಂತೋಷದಿಂದಿರಿಸಲು ಬಯಸುವವನು
ಅದಕ್ಕಾಗಿ ದಿನವಿಡೀ ದುಡಿದು ಬರುವವನು
ದೇಹದ ದಣಿವನ್ನು ನನ್ನ ನೋಡಿ ಮರೆಯುವವನು...
ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುವವನು
ಯಾವಾಗಲು ನನ್ನ ಜೊತೆಯಾಗಿರುವವನು
ಬಾಳಪುಟದಲ್ಲಿ ಬಂದ ನನ್ನ ಪ್ರಾಣಕಾಂತನು
ಇವನೇ ನನ್ನವನು ...ನನ್ನ ಜೊತೆಗಾರನು...
*ಸರಿತಾ ಅಂಬರೀಷ್ ಕುತ್ಪಾಡಿ*✍
ಕಾರಂತರ ನೆನಪಿನಲ್ಲಿ...
ಕನ್ನಡ ನಾಡಿನ ವೈಭವ
ನಮ್ಮ ನಾಡು ಕನ್ನಡ
ನಮ್ಮ ಮಾತೃಭಾಷೆ ಕನ್ನಡ
ನಮ್ಮಯ ನಡೆ ನುಡಿ ಕನ್ನಡ
ಹಲವು ಮೊದಲುಗಳಿಗೆ ಸಾಕ್ಷಿ ಕನ್ನಡ.
ನಯನ ಮನೋಹರ ಜೋಗ ಜಲಪಾತ
ನೋಡಲೇಬೇಕು ಕೆಮ್ಮಣ್ಣುಗುಂಡಿ ಪ್ರಪಾತ
ಕಾಲಿರಿಸಿದಲ್ಲೆಲ್ಲ ಹೂ ಗಿಡಗಳ ಮೇಳ
ಕೇಳಲೇ ಬೇಕು ಕೋಟೆಗಳ ಕಥೆಗಳ
ಜ್ಞಾನಪೀಠದ ಎಂಟು ರತ್ನಗಳು
ಅಲ್ಲಲ್ಲಿ ಕಾಣುವ ಇತಿಹಾಸದ ಕುರುಹುಗಳು
ಕದಂಬರಿಂದ ಶುರುವಾದ ರಾಜಮನೆತನಗಳು
ಸ್ವಾತಂತ್ರಕ್ಕಾಗಿ ಬಲಿದಾನವೆತ್ತ ಅದೆಷ್ಟೋ ಮಹನೀಯರುಗಳು
ಪಶ್ಚಿಮ ಘಟ್ಟದಲ್ಲಿ ಹುಲ್ಲುಗಾವಲು
ಬಯಲುಸೀಮೆಯ ಉರಿ ಬಿಸಿಲು
ಸೂರ್ಯನೊಂದಿಗೆ ಆಡುವ ಕಡಲ ಕಿನಾರೆಗಳು
ಚಂದಿರನಿಗೇ ತುತ್ತ ನೀಡುವ ಅದೆಷ್ಟೋ ಗಿರಿಗಳು
ಬಣ್ಣಿಸಿದಷ್ಟೂ ಕಡಿಮೆ ನನ್ನ ನಾಡ ಹಿರಿಮೆಯ
ಜಾಲತಾಣಗಳಲ್ಲೂ ಸಿಗದು ಭಾವಕ್ಕೆ ನಿಲುಕುವ ವರ್ಣನೆಯು
ಸಾಗರ ದಾಟಿ ವಿದೇಶದಲ್ಲೂ ಹಬ್ಬಲಿ ನನ್ನ ನಾಡ ಖ್ಯಾತಿಯು
ನನ್ನ ನಾಡ ಸೇವೆಗೆ ನಾ ಸದಾ ಕಂಕಣ ಬದ್ಧನು
ಕು. ವೀಣಾ ಗಣಪತಿ ಹೆಗಡೆ
ಕೊಮ್ಮಿನಕೈ, ಶಿರಸಿ
ಉತ್ತರ ಕನ್ನಡ ಜಿಲ್ಲೆ.
ಬಿಕಾಂ ವಿದ್ಯಾರ್ಥಿನಿ.
ಶೀರ್ಷಿಕೆ:ಭ್ರಮನಿರಸನ
||ಭ್ರಮನಿರಸನ ಎನ್ನುವುದು
ತಿಂಗಳಿಗೊಮ್ಮೆ ಬರುವ
ಮಾಸಾಶನ ಅಲ್ಲ,||
||ಅದೂ ಒಮ್ಮೊಮ್ಮೆ ಬಂದರೆ ಬಂತು
ಹೋದರೆ ಅತ್ಲಾಗೇ ಹೋಯ್ತು||
||ಅನುಬವಗಳೆಂಬ ಆಧಾರ ಕಾರ್ಡ್ ಗೆ
ಆಸೆಗಳೆಂಬ ಬ್ಯಾಂಕಿನ ಲಿಂಕ್ ಬಳಸಿದಂತೆ||
||ಕಷ್ಟಗಳೆಂಬ ಕೆ ವೈ ಸಿ ಬೆರೆಸಿ
ಇಷ್ಟಗಳೆಂಬ ಎಲ್ ಐ ಸಿ ಮಾಡಿಸಿ
ಸಮ್ಮಿಳನ ಗೊಂಡಾಗಲೂ
ತಾಳದಿರುವ ಬದುಕೇ ಭ್ರಮನಿರಸನ,||
||ಭ್ರಮೆಯೊಳು ಇಂದಿನ ದಿನವ ಹೂಳದಿರು
ನಾಳಿನ ಬಗ್ಗೆ ಇಂದೇ ಭ್ರಮೆಯೊಳು ಬೀಳದಿರು||
||ಆಗುವುದೆಲ್ಲ ಆಗಲಿ ಧೈರ್ಯ ಎದೆಗುಂದದಿರಲಿ
ಸಾಧಿಸುವ ಛಲ ನಿನ್ನಲ್ಲಿ ಇರಲಿ||
||ಲೋಕವು ದೂರ ಮಾಡಿಲ್ಲ ಏನನ್ನೂ
ಮನುಜನೇ ತಿಳಿಯುತ್ತಿಹನು ಎಲ್ಲವನ್ನೂ
ಎದುರಿಸಿ ಹೋರಾಡು ಬದುಕನ್ನು
ಇಷ್ಟ ಪಟ್ಟು ಪ್ರೀತಿಸು ನೀನು ನಿನ್ನನ್ನು..!
✍ನಿಗೂಢ, ಹುಬ್ಬಳ್ಳಿ.
ಗುರು ಢವಳೇಶ್ವರ
No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...