Thursday, March 16, 2023

ಅರಸಿ ಬಂದವರನ್ನು ಅಳಿಸಿ ಕಳುಹಿಸಬಾರದು ಗಾದೆಮಾತು

 ಬತ್ತದ ತೊರೆ... ಸ್ಪರ್ಧೆಗಾಗಿ

ಅರಸಿ ಬಂದವರನ್ನು ಅಳಿಸಿ ಕಳುಹಿಸಬಾರದು



Google images.



ಅದೊಂದು ಊರಿನಲ್ಲಿ ಶಂಕರ ಎಂಬ ಧನಿಕನಿದ್ದ. ಅವನಿಗೆ ದೇವರ ಮೇಲೆ ಅಪಾರ ನಂಬಿಕೆ ಮತ್ತು ಭಕ್ತಿ ಇತ್ತು. ಆದರೆ ಮನುಷ್ಯರನ್ನು ಅಷ್ಟು ಸುಲಭವಾಗಿ ನಂಬುತ್ತಿರಲಿಲ್ಲ. ಶ್ರೀಮಂತಿಕೆಯ ಅಹಂಕಾರವು ಇತ್ತು. ಬಡವರನ್ನು ತಾತ್ಸಾರ ಮಾಡುತಿದ್ದ. ಸಹಾಯ ಬೇಡಲು ಬಂದವರನ್ನು ಅನೇಕ ಪ್ರಶ್ನೆಗಳನ್ನು ಹಾಕಿ ಅವಮಾನಿಸಿ ಮತ್ತೆ ಸ್ವಲ್ಪ ಸಹಾಯ ನೀಡಿ ಕಳುಹಿಸುತ್ತಿದ್ದ. ಹೀಗಿರಲು ಒಂದು ದಿನ ಶಂಕರನ ಕಾಲಿಗೊಂದು ಹುಣ್ಣ ಯಿತು ಹುಣ್ಣು ದೊಡ್ಡದಾಗಿ ದೊಡ್ಡ ಗಾಯವೆ ಆಯಿತು ಅದೆಷ್ಟು ಮದ್ದು ಮಾಡಿದರೂ ಗುಣವಾಗಲಿಲ್ಲ. ಅರು ತಿಂಗಳು ಕಳೆಯಿತು ಗಾಯ ದೊಡ್ಡದಾಗುತ್ತಾ ಹೋಯಿತು ಹೀಗಿರಲು ದೇವರಲ್ಲಿ ಭಾರೀ ದೊಡ್ಡ ಹರಕೆ ಇಟ್ಟು ಬೇಡಿಕೊಂಡ. ದೇವರಿಗೂ ಆತನ ಭಕ್ತಿಯನ್ನು ಕಡೆಗಣಿಸಲಾಗಲಿಲ್ಲ. ದೇವರು ಒಬ್ಬ ಪಕೀರನನ್ನು ಆತನ ಮನೆಗೆ ಕಳುಹಿಸಿದ. ಮನೆಯ ಆಳು ಪಕೀರ ಬಂದ ವಿಷಯ ಧನಿಕನಿಗೆ ತಿಳಿಸಿದ. ಹೊರಗೆ ಬಂದ ಶಂಕರನ ಕಾಲು ಕಂಡ ಪಕೀರ ತಾನು ಪಂಡಿತ ನಿನ್ನ ಗಾಯ ಒಂದು ವಾರದೊಳಗೆ ಗುಣ ಪಡಿಸುವೆ ನನಗೆ ಒಂದು ವಾರ ಇಲ್ಲಿರಲು ಆವಕಾಶ ಕೊಡುವಂತೆ ಕೇಳಿಕೊಂಡ. ಶಂಕರ ಆತನ ಮಾತನ್ನು ನಂಬಲಿಲ್ಲ ದೊಡ್ಡ ದೊಡ್ಡ ವೈದ್ಯರಿಂದ ಗುಣಪಡಿಸಲಾಗದ ಗಾಯ ಈತ ಒಂದು ವಾರದೊಳಗೆ ಹೇಗೆ ಗುಣಪಡಿಸುವ ... ಹೋಗು ಹೋಗು ನಿನ್ನಂಥವರನ್ನು ತುಂಬಾ ನೋಡಿದ್ದೇನೆ.. ಒಂದು ವಾರ ಇಲ್ಲಿ ನಿಂತು ನನ್ನ ಸಂಪತ್ತು ಲೂಟಿ ಮಾಡುವ ಯೋಚನೆಯೇ. ಕಳ್ಳ ಎಂದು ಅವಮಾನಿಸಿ ಕಳುಹಿಸಿದ. 

ದಿನಕಳೆದಂತೆ ಗಾಯ ಉಲ್ಬಣಗೊಂಡಿತು ಯಾವ ಮದ್ದು ತಾಗಲಿಲ್ಲ ಈಗ ಶಂಕರ ಕೊರಗಲಾರಂಬಿಸಿದ ಅಹಂಕಾರ ಸ್ವಲ್ಪ ಸ್ವಲ್ಪವೇ ಇಳಿಯಿತು. ಬಡವರ ಬಗ್ಗೆ ಪ್ರೀತಿ ತೊರಲಾರಂಬಿಸಿದ . ಸಂಪತ್ತು ದಾನ ಮಾಡಲು ಶುರು ಮಾಡಿದ. ಒಂದು ದಿನ ಕನಸಿನಲ್ಲಿ ಪಕೀರನೊಬ್ಬ ತನ್ನ ಗಾಯಕ್ಕೆ ಮದ್ದು ಹಚ್ಚುತಿದ್ದಂತೆ ಹಾಗೂ ಒಂದು ವಾರದಲ್ಲಿ ಗಾಯ ಗುಣವಾದಂತೆ ಕನಸು ಕಂಡ . ಕೆಲವು ತಿಂಗಳ ಹಿಂದೆ ತಾನು ಅವಮಾನಿಸಿ ಕಳುಹಿಸಿದ ಪಕೀರನೇ ಅವನು ಎಂದು ಎದ್ದು ಕುಳಿತ ಅ ದಿನ ಆತನನ್ನು ಅವಮಾನಿಸಿ ತಪ್ಪು ಮಾಡಿದೆನೆಂದು ದುಃಖ ಪಟ್ಟ. ಮರುದಿನ ಬೆಳ್ಳಿಗೆ ತನ್ನ ಆಳುಗಳನ್ನು ಕಳುಹಿಸಿ ಪಕೀರ ನನ್ನು ಹುಡುಕಿಸಿದ ಆದರೆ ಪಕೀರ ಎಲ್ಲೂ ಸಿಗಲಿಲ್ಲ. ದೇವರಲ್ಲಿ ತನ್ನ ತಪ್ಪಿನ ಬಗ್ಗೆ ಕ್ಷಮೆ ಕೋರಿ ಬೇಡಿಕೊಂಡ. ಮತೊಂದ್ದು ವಾರದಲ್ಲಿ ಊರ ಹೊರಗಿನ ದೇವಸ್ಥಾನದ ಮರದಡಿಯಲಿ ಪಕೀರನಿರುವ ವಿಷಯ ಶಂಕರನಿಗೆ ತಿಳಿಯಿತು. ಕೂಡಲೇ ಆತನನ್ನು ತನ್ನಲ್ಲಿಗೆ ಕರೆ ತರುವಂತೆ ಆಳುಗಳನ್ನು ಕಳುಹಿಸಿದ. ಆದರೆ ಪಕೀರ ಬರಲು ಒಪ್ಪಲಿಲ್ಲ. ಬಳಿಕ ಶಂಕರನೆ ಆತನ ಬಳಿಗೆ ಹೋಗಿ ತನ್ನ ತಪ್ಪಿನ ಬಗ್ಗೆ ಕ್ಷಮೆ ಯಾಚಿಸಿದ. ಈಗ ಪಕೀರನಿಗೆ ಆತನ ಮೇಲೆ ಕರುಣೆ ಬಂದು ಆತನೊಂದಿಗೆ ಬರಲು ಒಪ್ಪಿಗೆ ಸೂಚಿಸಿ ಆತನ ಮನೆಯಲ್ಲಿ ಉಳಿದು ಒಂದು ವಾರ ಮದ್ದು ಹಚ್ಚಿ ಗಾಯ ಗುಣಪಡಿಸಿದ. ಶಂಕರನಿಗೆ ಬಹಳ ಸಂತೋಷವಾಯಿತು. ಸಕಲ ಮರ್ಯಾದೆಯೊಂದಿಗೆ ಪಕೀರನನ್ನು ಕಳುಹಿಸಿದ  ಅಂದಿನಿಂದ ಯಾರು ಅರಸಿ ಬಂದರೂ ಅವನು ಅವಮಾನಿಸದೆ ಸತ್ಕರಿಸಿ ಕಳುಹಿಸುತ್ತಿದ್ದ.


ಶೋಭಾ ದಿನೇಶ್ ಉದ್ಯಾವರ


2) 

ಬತ್ತದ ತೊರೆ ಸ್ನೇಹ ಬಳಗ ಮಕ್ಕಳ ಸಾಹಿತ್ಯ

ಶೀರ್ಷಿಕೆ- ಕೆಟ್ಟ ಮೇಲೆ ಬುದ್ಧಿ ಬಂತು


ಮಕ್ಕಳೇ ಕೇಳಿ ನಮ್ಮ ಭಾರತೀಯ ಸಂಸ್ಕೃತಿ ಬಹಳ ಅರ್ಥಪೂರ್ಣವಾದದ್ದು. ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವುದು ನಮ್ಮ ಕರ್ತವ್ಯವು. ಅವರ ತೃಪ್ತಿಯೇ ನಮ್ಮ ಏಳಿಗೆಗೆ ಕಾರಣವು. ನಿಮಗೆ ಒಂದು ಕಥೆಯ ಮೂಲಕ ಮೇಲಿನ ಗಾದೆಯ ಮಾತನ್ನು ತಿಳಿಸುತ್ತೇನೆ.

ಅನಿಲ ಮತ್ತು ರವಿ  ಬಾಲ್ಯಸ್ನೇಹಿತರಾಗಿದ್ದರು .ಇಬ್ಬರು ಒಟ್ಟಿಗೆ ಇರುತ್ತಿದ್ದರು .ಒಂದೇ ಶಾಲೆ ,ಮುಂದೆ ಒಂದೇ ಕಾಲೇಜಿನಲ್ಲಿ ಓದಿದ್ದರು. ಒಂದೇ ಬೀದಿಯಲ್ಲಿ ಅವರ ಮನೆ ಸಹ ಇದ್ದಿದ್ದರಿಂದ ಇಬ್ಬರ ಸ್ನೇಹವೂ ಭದ್ರವಾಗಿತ್ತು .ಕೆಲಸವೂ ಸಹ ಒಂದೇ ಕಂಪನಿಯಲ್ಲಿ ಸಿಕ್ಕಿತು .ಇದರಿಂದ ಒಬ್ಬರಿಗೊಬ್ಬರು ಮತ್ತಷ್ಟು ಹತ್ತಿರವಾಗಿದ್ದರು.

ಹೀಗೆ ಕಾಲ ಉರುಳುತ್ತಿತ್ತು ಇಬ್ಬರಿಗೂ ಮದುವೆಯಾಗಿ ಮಕ್ಕಳು ಸಹ ಆಗಿದ್ದರು. ಆದರೂ ಅವರ ಸ್ನೇಹಕ್ಕೆ ಯಾವ ಧಕ್ಕೆ ಬಂದಿರಲಿಲ್ಲ .ಅನಿಲನ ಹೆಂಡತಿ ಸ್ವಲ್ಪ ಗರ್ವಿಷ್ಠೆ ಆಗಿದ್ದಳು. ಏಕೆಂದರೆ ಶ್ರೀಮಂತ ಮನೆತನದಿಂದ ಬಂದವಳಾಗಿದ್ದಳು. ರವಿಯ ಹೆಂಡತಿ ಒಳ್ಳೆಯ ಸ್ವಭಾವದವಳು.ಅವಳು ಯಾವ ತಂಟೆಗೆ ಹೋಗದೆ ತನ್ನ ಪಾಡಿಗೆ ತಾನು ಇರುತ್ತಿದ್ದಳು .ಒಂದು ದಿನ ಒಂದುಕಾರ್ಯಕ್ರಮಕ್ಕೆ ಅನಿಲ ಅನಿಲನ ಹೆಂಡತಿ ಮತ್ತು ರವಿ ರವಿ ಹೆಂಡತಿ ಕೂಡಿ ಹೋಗಬೇಕಾದ ಪ್ರಸಂಗ ಬಂದಿತು .ಒಟ್ಟಿಗೆ ಹೋಗುವಾಗ ಅನಿಲನ ಹೆಂಡತಿ ತನ್ನ ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುತ್ತಿದ್ದಳು. ರವಿಯ ಹೆಂಡತಿಗೆ ಸ್ವಲ್ಪ ಬೇಸರವಾಗಿದ್ದರೂ ನಗು ನಗುತ್ತಲೇ ಇರುತ್ತಿದ್ದಳು.

ಅನಿಲಗಾದರೆ ಮಾವನ ಸಹಾಯದಿಂದ ಬಹಳಷ್ಟು ಹಣ ದೊರೆಯುತ್ತಿತ್ತು. ಹೀಗಾಗಿ ಆತ ದೊಡ್ಡದೊಂದು ಮನೆಯನ್ನು ಕಟ್ಟಿದ್ದನ್ನು. ರವಿಯ ತನ್ನ ಸಂಬಳದಲ್ಲಿ ಮಕ್ಕಳನ್ನು ಸಾಕುವುದೇಸರಿ ಹೋಗುತ್ತಿತ್ತು. ಈಗ ಇನ್ನೊಂದು ಸಣ್ಣ ಕೆಲಸಕ್ಕೆ ಸೇರಿಕೊಂಡಿದ್ದನು .ಈಗಲಾದರೂ ಮನೆಯನ್ನು ಕಟ್ಟುವ ಎಂಬ ಯೋಚನೆಯನ್ನು ಗಂಡ ಹೆಂಡತಿಯರು ಮಾಡಿದ್ದರು. ಸ್ವಲ್ಪ ಮಟ್ಟಿಗೆ ಹಣವು ಕಡಿಮೆಯಾಗಿತ್ತು .ಅನಿಲ ನನ್ನು ಕೇಳಿದಾಗ ಅವನು ಕೊಡಲು ಒಪ್ಪಿದನು. ತಿಂಗಳಿಗೆ ಸ್ವಲ್ಪಸ್ವಲ್ಪ ಕೊಟ್ಟು ತೀರಿಸುವೆ ಎಂದನು. ಅದಕ್ಕೆನು ಸಂಜೆ ಮನೆ ಹತ್ತಿರ ಬಾ ಹಣವನ್ನು ಕೊಡುವೆನು ಎಂದನು. ಈ ವಿಷಯ ಅನಿಲನ ಹೆಂಡತಿಗೂ ತಿಳಿದಿತ್ತು. ಸಂಜೆ ರವಿ ಮನೆಗೆ ಬಂದಾಗ ಅನಿಲನಹೆಂಡತಿ ಅವನನ್ನು ಸರಿಯಾಗಿ ಮಾತನಾಡಿಸದೆ ನೋಡಿ ನೋಡದ ಹಾಗೆ ಒಳಗೆ ಹೊರಟು ಹೋದಳು. ಇದರಿಂದ ರವಿಯ ಮನಸ್ಸಿಗೆ ಬೇಸರವಾದರೂ ತನ್ನ ಕಷ್ಟದ ಸಮಯದಲ್ಲಿ ಸ್ನೇಹಿತನ ಹಣ ಬೇಕಲ್ಲವೇ ಎಂದು ಹಣವನ್ನು ಪಡೆದೆ ಮನೆಗೆ ಹೋದನು. ಇಷ್ಟರಲ್ಲೇ ಮನೆ ಪೂರ್ಣವಾಯಿತು. ರವಿಯ ಮಕ್ಕಳು ಚೆನ್ನಾಗಿ ಓದಿ ಮುಂದೆ ಒಳ್ಳೆಯ ಕೆಲಸಕ್ಕೆ ಸೇರಿ ತಂದೆ ಮಾಡಿದ ಸಾಲವನ್ನು ತೀರಿಸಿದರು. ಶ್ರೀಮಂತಿಕೆಯ ಮದದಲ್ಲಿ ಅನಿಲನ ಮಕ್ಕಳು ಓದದೆ ಇದ್ದಿದ್ದರಿಂದ ಮನೆಯನ್ನು ಮಾರುವ ಪರಿಸ್ಥಿತಿಯು ಬಂದಿತ್ತು . ತನ್ನ ಪರಿಸ್ಥಿತಿ ನೋಡಿ ಅನಿಲನ ಹೆಂಡತಿಗೆ ಬುದ್ಧಿ ಬಂದಾಯಿತು. ತಾನು ತನ್ನ ಗಂಡನ ಸ್ನೇಹಿತ ಮನೆಗೆ ಬಂದಾಗ ತಾನು ಆತನನ್ನು ಅವಮರ್ಯಾದೆ ಮಾಡಿದ್ದುದರಿಂದಲೇ ಈ ರೀತಿ ಆಯಿತು ಎಂದು ನನ್ನ ಮನದಲ್ಲಿ ಅಂದುಕೊಂಡಳು. ಮನೆಗೆ ಬಂದ ಅತಿಥಿಗಳ ಮನ ನೋಯಿಸಬಾರದು ನೊಂದ ಮನದಿಂದ ನಮಗೆ ಎಂದಿಗೂ ಒಳ್ಳೆಯದೋ ಆಗುವುದಿಲ್ಲ ಎಂದು ಈ ಕಥೆಯಿಂದ ತಿಳಿಯಬಹುದಲ್ಲವೇ ಮಕ್ಕಳೇ.

ಅರಸಿ ಬಂದವರನ್ನು ಅಳಿಸಿ ಕಳಿಸಬಾರದು ಎಂದೆಂದಿಗೂ ಎಂದು  ತಿಳಿದುಕೊಳ್ಳಬೇಕು ಮಕ್ಕಳೇ.

.

ಕೆ ಆರ್ ಉಷಾ ದಿದ್ದಿಗಿ (ಹೈದರಾಬಾದ್)

No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...